ಆ್ಯಪ್ನಗರ

ಕಲಾವಿದರಿಗೆ ಜಾನಪದ ಪರಿಷತ್ತಿನಿಂದ ನೆರವು

ಬೆಳಗಾವಿ : ಜಾನಪದ ಸಾಹಿತ್ಯ ಅಳಿವಿನ ಅಂಚಿನಲ್ಲಿದೆ...

Vijaya Karnataka 30 Jan 2019, 5:00 am
ಬೆಳಗಾವಿ : ಜಾನಪದ ಸಾಹಿತ್ಯ ಅಳಿವಿನ ಅಂಚಿನಲ್ಲಿದೆ. ಮರೆಯಾಗುತ್ತಿರುವ ಜಾನಪದ ಸಾಹಿತ್ಯವನ್ನು ಉಳಿಸಿ ಬೆಳೆಸುವುದು ನಮ್ಮೆಲ್ಲರ ಕರ್ತವ್ಯ ಎಂದು ಕನ್ನಡ ಜಾನಪದ ಪರಿಷತ್ತಿನ ರಾಜ್ಯ ಸಂಚಾಲಕಿ ಡಾ.ಕನಕತಾರಾ ಹೇಳಿದರು.
Vijaya Karnataka Web BEL-29 LBS 5


ಮಹಾಂತೇಶ ನಗರದ ಮಹಾಂತ ಭವನದಲ್ಲಿ ಲಿಂಗಾಯತ ಮಹಿಳಾ ಸಮಾಜ ಹಾಗೂ ಬೆಳಗಾವಿ ತಾಲೂಕು ಘಟಕದ ಕನ್ನಡ ಜಾನಪದ ಪರಿಷತ್ತಿನ ಸಹಯೋಗದಲ್ಲಿ ಆಯೋಜಿಸಿದ್ದ ಜಾನಪದ-ಜಾಗರ ಕಾರ‍್ಯಕ್ರಮದಲ್ಲಿ ಅವರು ಮಾತನಾಡಿದರು.

ಜಾನಪದ ಪರಿಷತ್ತು ರಾಜ್ಯದಲ್ಲಿ ಸ್ಥಾಪನೆಯಾಗಿ ಮೂರು ವರ್ಷದಲ್ಲಿ ಅನೇಕ ಕಲಾವಿದರಿಗೆ ಸಹಾಯ ಮಾಡಿದೆ. ಬಡ ಕಲಾವಿದರನ್ನು ಗುರುತಿಸುವ ಸಲುವಾಗಿ ರಾಜ್ಯಾದ್ಯಂತ ಸಮೀಕ್ಷೆ ನಡೆಸಲಾಗುತ್ತಿದೆ. ಈಗಾಗಲೇ 15 ಜಿಲ್ಲೆಯಲ್ಲಿ ಸಮೀಕ್ಷೆ ಪೂರ್ಣಗೊಂಡಿದ್ದು, ಇನ್ನುಳಿದ ಜಿಲ್ಲೆಯಲ್ಲಿ ಸಮೀಕ್ಷೆ ಮಾಡಲಾಗುತ್ತಿದೆ. ಪರಿಷತ್ತಿನ ಪರಿಶ್ರಮದಿಂದ ಕಲಾವಿದರ ಮಾಶಾಸನ ಮೂರು ಸಾವಿರಕ್ಕೆ ಏರಿಕೆಯಾಗಿದೆ. ಸಿಎಂ ಕುಮಾರಸ್ವಾಮಿ ಅವರನ್ನು ಮತ್ತೊಮ್ಮೆ ಭೇಟಿ ಮಾಡಿ ಐದು ಸಾವಿರಕ್ಕೆ ಏರಿಕೆ ಮಾಡುವಂತೆ ಮನವಿ ಮಾಡಲಾಗುವುದು ಎಂದರು.

ಸಿರಿಗನ್ನಡ ಮಹಿಳಾ ವೇದಿಕೆಯ ರಾಜ್ಯ ಉಪಾಧ್ಯಕ್ಷೆ ರಂಜನಿ ಜೀರಗ್ಯಾಳ ಮಾತನಾಡಿ, ಜಾನಪದ ಹೆಣ್ಣುಮಕ್ಕಳಿಂದಲೇ ಹುಟ್ಟಿದ್ದು. ಆಗಿನ ಕಾಲದ ಮಹಿಳೆಯರು ತಮ್ಮ ನೋವು, ನಲಿವುಗಳನ್ನು ಹಾಡುಗಳ ಮೂಲಕ ವ್ಯಕ್ತಪಡಿಸುತ್ತಿದ್ದರು. ಅದುವೇ ಜಾನಪದ ಸಾಹಿತ್ಯ. ಜಾನಪದ ಉಳಿಸುವುದು ಮಹಿಳೆಯರ ಜವಾಬ್ದಾರಿಯಾಗಿದೆ ಎಂದು ತಿಳಿಸಿದರು.

ಜಾನಪದ ಪರಿಷತ್ತಿನ ಜಿಲ್ಲಾ ಘಟಕದ ಅಧ್ಯಕ್ಷ ಮೋಹನ ಗುಡ್ಲೂರ, ತಾಲೂಕು ಅಧ್ಯಕ್ಷೆ ಜ್ಯೋತಿ ಭಾವಿಕಟ್ಟಿ, ಶೈಲಜಾ ಭಿಂಗೆ, ಆಶಾ ಪಾಟೀಲ, ಶಾಂತಾ ಮಸೂತಿ, ಉಮಾ ಅಂಗಡಿ, ಅನಿತಾ ದೇಸಾಯಿ, ಪ್ರತಿಭಾ ಕಳ್ಳಿಮಠ, ರಾಜೇಶ್ವರಿ ಹಿರೇಮಠ, ಮಂಗಳ ಮೆಟ್ಟಗುಡ್ಡ, ಆರತಿ ದೇಶನೂರ ಮತ್ತಿತರರು ಉಪಸ್ಥಿತರಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ