ಆ್ಯಪ್ನಗರ

ಪೊಲೀಸ್‌, ವಾಣಿಜ್ಯ ತೆರಿಗೆ ಇಲಾಖೆಯಿಂದ ನೆರವು

ಕಾಗವಾಡ: ಕೃಷ್ಣಾ ನದಿ ಪ್ರವಾಹದಿಂದ ನಿರಾಶ್ರಿತರಾಗಿ ಕಾಳಜಿ ಕೇಂದ್ರಗಳಲ್ಲಿ ...

Vijaya Karnataka 16 Aug 2019, 5:00 am
ಕಾಗವಾಡ: ಕೃಷ್ಣಾ ನದಿ ಪ್ರವಾಹದಿಂದ ನಿರಾಶ್ರಿತರಾಗಿ ಕಾಳಜಿ ಕೇಂದ್ರಗಳಲ್ಲಿ ತಂಗಿರುವ ಸಂತ್ರಸ್ತರಿಗೆ ರಾಜ್ಯ ಸರಕಾರದ ವಾಣಿಜ್ಯ ತೆರಿಗೆ ಇಲಾಖೆ, ಪೊಲೀಸ್‌ ಇಲಾಖೆಯ ಸಿಬ್ಬಂದಿ ಅವಶ್ಯ ಸಾಮಗ್ರಿಗಳನ್ನು ವಿತರಿಸಿದರು.
Vijaya Karnataka Web assistance from the police and commercial taxes department
ಪೊಲೀಸ್‌, ವಾಣಿಜ್ಯ ತೆರಿಗೆ ಇಲಾಖೆಯಿಂದ ನೆರವು


ಬುಧವಾರ ಬೆಳಗಾವಿಯಿಂದ ಮಂಗಸೂಳಿ, ಕಾಗವಾಡ, ಶಿರಗುಪ್ಪಿ ಕಾಳಜಿ ಕೇಂದ್ರಗಳಿಗೆ ತೆರಳಿ ಚಿಕ್ಕಮಕ್ಕಳು, ಮಹಿಳೆಯರಿಗೆ ಅವಶ್ಯವಿರುವ ಉಡುಪುಗಳು, ಹೊದಿಕೆ, ಮಂಕಿ ಕ್ಯಾಪ್‌, ದಿನಬಳಕೆಯ ವಸ್ತುಗಳು ನೀರಿನ ಬಾಟಲ್‌ಗಳನ್ನು ವಿತರಿಸಿದರು.

ಈ ವೇಳೆ ಮಾತನಾಡಿದ ವಾಣಿಜ್ಯ ತೆರಿಗೆ ಇಲಾಖೆ ಅಧಿಕಾರಿ ಎ.ಎಂ. ಬಿರಾದಾರ ಹಾಗೂ ಕಾಗವಾಡ ಪಿಎಸ್‌ಐ ಹನಮಂತ ಶಿರಹಟ್ಟಿ ಅವರು ಸಂತ್ರಸ್ತರಿಗೆ ಸಾಂತ್ವನ ಹೇಳಿದರು.

ಈ ವೇಳೆ ದತ್ತ ಸಕ್ಕರೆ ಕಾರ್ಖಾನೆ ಸಂಚಾಲಕ ಸಿದ್ದಗೌಡಾ ಪಾಟೀಲ, ಕರವೇ ಅಧ್ಯಕ್ಷ ಸಿದ್ದು ವಡೆಯರ, ಮಂಗಸೂಳಿ ಗ್ರಾಪಂ ಅಧ್ಯಕ್ಷ , ಸದಸ್ಯ, ಯುವಕ ಸಂಘದ ಕಾರ್ಯಕರ್ತರು ಪಾಲ್ಗೊಂಡು ಸಹಕರಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ