ಆ್ಯಪ್ನಗರ

ಆಸ್ಪತ್ರೆ ಸಿಬ್ಬಂದಿ ಮೇಲೆ ಹಲ್ಲೆಯತ್ನ

ಮಲ್ಲಮ್ಮನ ಬೆಳವಡಿ (ಬೆಳಗಾವಿ): ಸಮೀಪದ ...

Vijaya Karnataka 28 Sep 2019, 5:00 am
ಮಲ್ಲಮ್ಮನ ಬೆಳವಡಿ (ಬೆಳಗಾವಿ): ಸಮೀಪದ ಉಡಿಕೇರಿ ಗ್ರಾಮದ ಹೊರವಲಯದಲ್ಲಿನ ಸರಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರದ ಸಿಬ್ಬಂದಿ ಮೇಲೆ ಮದ್ಯವ್ಯಸನಿ ಕುರಿಗಾಹಿಯೊಬ್ಬ ಗುರುವಾರ ಸಂಜೆ ಕೊಡಲಿಯಿಂದ ಹಲ್ಲೆಗೆ ಯತ್ನಿಸಿದ್ದಾನೆ.
Vijaya Karnataka Web 27 DWDP 2_53


ಆಸ್ಪತ್ರೆಯಲ್ಲಿಸಿಬ್ಬಂದಿ ವರ್ಗ ಎಂದಿನಂತೆ ಕೆಲಸದಲ್ಲಿನಿರತರಾದ ವೇಳೆ ಅದೇ ಗ್ರಾಮದ ಕುರಿಗಾಹಿ ವಿಠ್ಠಲ ಶಿವಪ್ಪ ಕುರಿ ಎಂಬಾತ ವಿಪರೀತ ಮದ್ಯ ಸೇವಿಸಿ ಆಗಮಿಸಿ ಕೊಡಲಿಯಿಂದ ಹಠಾತ್‌ ದಾಳಿಗೆ ಯತ್ನಿಸಿದ್ದಾನೆ. ಮಾನಸಿಕ ಸ್ಥಿಮಿತ ಕಳೆದುಕೊಂಡವನಂತೆ ವರ್ತಿಸುತ್ತಿದ್ದ ಈತನನ್ನು ಕಂಡು ಗಾಬರಿಗೊಂಡ ಸಿಬ್ಬಂದಿ ಬಾಗಿಲು ಮುಚ್ಚಿಕೊಂಡಿದ್ದಾರೆ. ಇದರಿಂದ ವ್ಯಗ್ರನಾದ ವಿಠ್ಠಲ ಕುರಿ ಕೇಂದ್ರದ ಕಿಟಕಿ, ಬಾಗಿಲುಗಳನ್ನು ಕೊಡಲಿಯಿಂದ ಹೊಡೆಯುವುದು ಮತ್ತು ಎಲ್ಲರಿಗೂ ಕಲ್ಲುಎಸೆಯಲು ಪ್ರಾರಂಭಿಸಿದ್ದಾನೆ. ಚಿಕಿತ್ಸೆಗೆಂದು ಬಂದಿದ್ದ ರೋಗಿಗಳು ಇದನ್ನು ನೋಡಿ ಹೆದರಿ ಓಡಲು ಶುರು ಮಾಡಿದ್ದಾರೆ. ಗದರಿಸಲು ಹೋದ ಆಸ್ಪತ್ರೆಯ ಡಿ ದರ್ಜೆ ನೌಕರ ಮಹೇಶ ಮೇಲೆ ಕೊಡಲಿಯಿಂದ ದಾಳಿಗೆ ಯತ್ನಿಸಿದ್ದಾನೆ. ''ಆಸ್ಪತ್ರೆಯವರು ನನ್ನ ಕಡೆಗೆ ನಾಯಿ ಬಿಟ್ಟು ಬೊಗಳಲು ಹೇಳಿದ್ದೀರಿ'' ಎಂದು ಮದ್ಯವ್ಯಸನಿ ಕೂಗುತ್ತಾ ಹುಚ್ಚನಂತೆ ವರ್ತಿಸಿದ ಎಂದು ಆರೋಗ್ಯ ಕೇಂದ್ರದ ಅಧಿಕಾರಿ ಡಾ.ಗೀತಾ ತಿಳಿಸಿದರು.

ನಂತರ ಸುದ್ದಿ ತಿಳಿದ ದೊಡವಾಡ ಪೊಲೀಸ್‌ ಠಾಣೆ ಪಿಎಸ್‌ಐ ಅನಿಲ ಅಮ್ಮಿನಬಾವಿ ಆಗಮಿಸಿ ಆರೋಪಿ ವಿಠ್ಠಲ ಕುರಿಯನ್ನು ಪೊಲೀಸ್‌ ವಾಹನದಲ್ಲಿಕರೆದೊಯ್ಯುವಾಗ ಪೊಲೀಸರ ಮೇಲೆಯೂ ಹಲ್ಲೆಗೆ ಯತ್ನಿಸಿದ್ದಾನೆ ಎನ್ನಲಾಗಿದೆ. ಆರೋಪಿಯನ್ನು ಬಂಧಿಸಿರುವ ಪೊಲೀಸರು ಮುಂದಿನ ತನಿಖೆ ಕೈಗೊಳ್ಳುವುದಾಗಿ ತಿಳಿಸಿದ್ದಾರೆ.

ದಿಢೀರ್‌ ನಡೆದ ಘಟನೆಯಿಂದ ಆರೋಗ್ಯ ಕೇಂದ್ರದ ಸಿಬ್ಬಂದಿ ಆತಂಕಕ್ಕೊಳಗಾಗಿದ್ದಾರೆ. ಮೊದಲೇ ಆಸ್ಪತ್ರೆ ಉಡಿಕೇರಿ ಗ್ರಾಮದಿಂದ 1 ಕಿಲೋ ಮೀಟರ್‌ ದೂರದಲ್ಲಿದೆ. ಆಸ್ಪತ್ರೆ ಸಿಬ್ಬಂದಿ ಮತ್ತು ರೋಗಿಗಳಿಗೆ ಯಾವುದೇ ಸಮಸ್ಯೆಯಾಗದಂತೆ ಪೊಲೀಸ್‌ ಇಲಾಖೆ ಸೂಕ್ತ ರಕ್ಷಣೆ ಒದಗಿಸಬೇಕು.
- ಡಾ. ಗೀತಾ, ವೈದ್ಯಾಧಿಕಾರಿ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ