ಆ್ಯಪ್ನಗರ

ಹಾಲಿನ ಬೆಂಬಲ ಬೆಲೆ ಹೆಚ್ಚಿಸಲು ಯತ್ನ

ಯರಗಟ್ಟಿ: ಹೈನುಗಾರಿಕೆಯ ಹಾಲಿನ ಬೆಂಬಲ ಬೆಲೆ ಹೆಚ್ಚಿಸುವ ನಿಟ್ಟಿನಲ್ಲಿ ಚಳಿಗಾಲದ ಅಧಿವೇಶನದಲ್ಲಿ ಪ್ರತಿಪಕ್ಷ ದ ನಾಯಕ ಯಡಿಯೂರಪ್ಪನವರ ಮುಖಾಂತರ ರಾಜ್ಯ ಸರಕಾರದ ...

Vijaya Karnataka 12 Jun 2019, 5:00 am
ಯರಗಟ್ಟಿ : ಹೈನುಗಾರಿಕೆಯ ಹಾಲಿನ ಬೆಂಬಲ ಬೆಲೆ ಹೆಚ್ಚಿಸುವ ನಿಟ್ಟಿನಲ್ಲಿ ಚಳಿಗಾಲದ ಅಧಿವೇಶನದಲ್ಲಿ ಪ್ರತಿಪಕ್ಷ ದ ನಾಯಕ ಯಡಿಯೂರಪ್ಪನವರ ಮುಖಾಂತರ ರಾಜ್ಯ ಸರಕಾರದ ಮೇಲೆ ಒತ್ತಡ ತರಲಾಗುವುದು ಎಂದು ಶಾಸಕ ಆನಂದ ಮಾಮನಿ ಹೇಳಿದರು.
Vijaya Karnataka Web BLG-1106-2-52-11YGT3


ಅವರು ಇಲ್ಲಿನ ರತ್ನ ಸಂಗಮ ಸಭಾಭವನದಲ್ಲಿ ಯರಗಟ್ಟಿ ತಾಲೂಕು ಗೆಳೆಯರ ಬಳಗದ ವತಿಯಿಂದ ನಡೆದ ನಿವೃತ್ತ ಎಸಿಎಫ್‌ ಸಿ.ಬಿ.ಪಾಟೀಲ ಹಾಗೂ ಕೆಎಂಎಫ್‌ ನಿರ್ದೇಶಕ ಎಸ್‌.ಎಸ್‌.ಮುಗಳಿ ಅವರ ಸನ್ಮಾನ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದರು.

ಎಸಿಎಫ್‌ ಸಿ.ಜಿ.ಮಿರ್ಜಿ, ವಿಧಾನ ಪರಿಷತ್‌ ಸದಸ್ಯ ಹನುಮಂತ ನಿರಾಣಿ, ಪಂಚನಗೌಡ ದ್ಯಾಮನಗೌಡ್ರ, ಬಿರಾದಾರ ಪಾಟೀಲ ಮಾತನಾಡಿದರು.

ಬಾಗೋಜಿಕೊಪ್ಪ ಹಿರೇಮಠದ ಡಾ. ಶ್ರೀ ಶಿವಲಿಂಗ ಮುರುಘರಾಜೇಂದ್ರ ಶಿವಾಚಾರ್ಯ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು.

ಜಿಪಂ ಸದಸ್ಯ ಅಜಿತಕುಮಾರ ದೇಸಾಯಿ, ತಾಪಂ ಅಧ್ಯಕ್ಷ ವಿನಯಕುಮಾರ ದೇಸಾಯಿ, ಜಿಪಂ ಮಾಜಿ ಸದಸ್ಯ ಶ್ರೀಶೈಲ ಕೊಟ್ರಶೆಟ್ಟಿ, ತಾಪಂ ಮಾಜಿ ಅಧ್ಯಕ್ಷ ಪರ್ವತಗೌಡ ಪಾಟೀಲ, ವಲಯ ಅರಣ್ಯಾಧಿಕಾರಿ ಸುನಿತಾ ನಿಂಬರಗಿ, ಉಮೇಶ ಬಾಳಿ, ಡಾ.ಕೆ.ವಿ.ಪಾಟೀಲ, ಸಂಗನಗೌಡ ದ್ಯಾಮನಗೌಡ್ರ, ಸೋಮಪ್ಪ ಪಟ್ಟಣಶೆಟ್ಟಿ ಉಪಸ್ಥಿತರಿದ್ದರು. ಪಿಕೆಪಿಎಸ್‌ ಅಧ್ಯಕ್ಷ ವಿಠ್ಠಲ ಬಂಟನೂರ ಸ್ವಾಗತಿಸಿದರು, ಬಸವರಾಜ ಹೂಗಾರ ನಿರೂಪಿಸಿ, ವಂದಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ