ಆ್ಯಪ್ನಗರ

ಬೇನಾಮಿ ಹಣ ಪಲಟಾಯಿಸಿದ 'ಆಡಿ' ಕಾರಿನ ಡ್ರವೈರ್!

ನಿರಾಯಾಸ ಹಣ ಗಳಿಸಲು ಮುಂದಾದ ನಗರದ ರಿಯಲ್‌ ಎಸ್ಟೇಟ್‌ ಉದ್ಯಮಿಗಳು ಮತ್ತು ಮಹಾನಗರ ಪಾಲಿಕೆ ಸದಸ್ಯರಿಗೆ ವ್ಯಕ್ತಿಯೋರ್ವ ಕೋಟ್ಯಂತರ ರೂಪಾಯಿ ಟೋಪಿ ಹಾಕಿದ್ದಾನೆ.

ವಿಕ ಸುದ್ದಿಲೋಕ 10 Feb 2017, 9:48 am

ಬೆಳಗಾವಿ: ನಿರಾಯಾಸ ಹಣ ಗಳಿಸಲು ಮುಂದಾದ ನಗರದ ರಿಯಲ್‌ ಎಸ್ಟೇಟ್‌ ಉದ್ಯಮಿಗಳು ಮತ್ತು ಮಹಾನಗರ ಪಾಲಿಕೆ ಸದಸ್ಯರಿಗೆ ವ್ಯಕ್ತಿಯೋರ್ವ ಕೋಟ್ಯಂತರ ರೂಪಾಯಿ ಟೋಪಿ ಹಾಕಿದ್ದಾನೆ. ಆದರೆ, ಬೇನಾಮಿ ಹಣ ನೀಡಿದ್ದ ಉದ್ಯಮಿಗಳು ಮತ್ತು ನಗರ ಸೇವಕರು ದೂರು ನೀಡಲೂ ಆಗದೆ, ಮುಕ್ತವಾಗಿ ಹೇಳಿಕೊಳ್ಳಲೂ ಆಗದ ಸ್ಥಿತಿಯಲ್ಲಿ ಸಿಲುಕಿದ್ದಾರೆ!

ನಡೆದದ್ದು ಏನು?:

Vijaya Karnataka Web audi driver cheats crores of rupees
ಬೇನಾಮಿ ಹಣ ಪಲಟಾಯಿಸಿದ 'ಆಡಿ' ಕಾರಿನ ಡ್ರವೈರ್!


ಸೂಟು -ಬೂಟು ಧರಿಸಿ ಆಡಿ ಕಾರಿನಲ್ಲಿ ಬರುತ್ತಿದ್ದ ಆ ವ್ಯಕ್ತಿ ಸುವರ್ಣ ವಿಧಾನಸೌಧ ಬಳಿ ಹೈಟೆಕ್‌ ಸಿಟಿ ನಿರ್ಮಿಸುವ ಪ್ರಪೋಸಲ್‌ ನೀಡಿದ್ದ. ಜತೆಗೆ ತಾನು ಚಿನ್ನದ ವ್ಯಾಪಾರ ನಡೆಸುತ್ತಿದ್ದು ಹಣ ಹೂಡಿದರೆ ಸಿಕ್ಕಾಪಟ್ಟೆ ಲಾಭ ಬರುತ್ತದೆ ಎಂದು ನಂಬಿಸಿದ್ದ. ಆತನ ಮಾತು ನಂಬಿ ಥೈಲ್ಯಾಂಡ್‌, ಮಲೇಶಿಯಾ ಸೇರಿದಂತೆ ವಿದೇಶ ಪ್ರವಾಸವನ್ನೂ ಕೈಗೊಂಡಿದ್ದರು.

ಇಷ್ಟೆಲ್ಲಾ ಆದ ಮೇಲೆ ಆತ, 'ಚಿನ್ನದ ವ್ಯಾಪಾರ ಆರಂಭಗೊಂಡಿದೆ. ಹಣ ಹೂಡಿಕೆಗೆ ಇದು ಸಕಾಲ' ಎಂದು ನಂಬಿಸಿ ಹಣ ಪಡೆದಿದ್ದ. ಸಾಕಷ್ಟು ಹಣ ಸಂಗ್ರಹವಾದ ಮೇಲೆ ಆತ ಅಮೆರಿಕಾದಲ್ಲಿ ಮೀಟಿಂಗ್‌ ಇದೆ ಎಂದು ಕಾಲ್ಕಿತ್ತಿದ್ದ. ನಂತರ ಆರೋಗ್ಯ ಸರಿಯಿಲ್ಲ. ಒಂದು ತಿಂಗಳ ರೆಸ್ಟ್‌ನಲ್ಲಿದ್ದೇನೆ ಎಂದು ಗೋವಾದಿಂದ ಮೆಸೇಜ್‌ ಕಳಿಸಿದ್ದ. ಆಸ್ಪತ್ರೆಗೆ ಸೇರಿರುವ ಮಾಹಿತಿ ತಿಳಿಯುತ್ತಿದ್ದಂತೆ ಗೋವಾಕ್ಕೆ ತೆರಳಿದ್ದ ಹಣ ಹೂಡಿಕೆದಾರರನ್ನು ಭದ್ರತೆ ನೆಪದಲ್ಲಿ ಭೇಟಿಯಾಗದೇ ವಾಪಸ್‌ ಕಳಿಸಿದ್ದ. ಕೆಲ ದಿನಗಳ ನಂತರ ಬೆಳಗಾವಿಗೆ ಬಂದಿದ್ದ ಆ ವ್ಯಕ್ತಿ, ಅಮೆರಿಕಾಕ್ಕೆ ಹೋಗುವ ಸಂದರ್ಭದಲ್ಲಿ ಗೋವಾ ವಿಮಾನ ನಿಲ್ದಾಣದಲ್ಲಿ ಹಣವನ್ನು ಕಸ್ಟಂ ಅಧಿಕಾರಿಗಳು ವಶ ಪಡಿಸಿಕೊಂಡಿದ್ದಾರೆ ಎಂದು ಕಥೆ ಹೇಳಿ ಕೈ ಎತ್ತಿದ್ದ. ಅನಾಮಿಕ ವ್ಯಕ್ತಿಯ ನಿಜ ಬಣ್ಣ ಗೊತ್ತಾದ ಮೇಲೆ ಕೆಲವರು ಆತನನ್ನು ಮನಬಂದಂತೆ ಥಳಿಸಿದ್ದರು ಎನ್ನಲಾಗಿದೆ.

ಆದರೆ, ಉದ್ಯಮಿಗಳು, ನಗರ ಸೇವಕರು ಈತನಿಗೆ ಕೊಟ್ಟ ಹಣ ಬೇನಾಮಿ ಎನ್ನಲಾಗುತ್ತಿದ್ದು, ಇದೇ ಕಾರಣಕ್ಕೆ ದೂರು ನೀಡಲಾಗದೆ ಕೈ ಕೈ ಹಿಸುಕಿಕೊಳ್ಳುತ್ತಿದ್ದಾರೆ ಎಂಬ ಮಾತು ಕೇಳಿ ಬರುತ್ತಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ