ಆ್ಯಪ್ನಗರ

ಬೆಳಗಾವಿ: ಲಕ್ಷಾಂತರ ಹಣ, ಚಿನ್ನವಿದ್ದ ಬ್ಯಾಗ್‌ ಮರಳಿಸಿದ ಆಟೋ ಚಾಲಕ

1 ಲಕ್ಷ ರೂ. ನಗದು ಹಾಗೂ 20 ಗ್ರಾಂ ಚಿನ್ನವಿದ್ದ ಬ್ಯಾಗ್‌ ಬಿದ್ದಿದ್ದು ಅರಿವಾದ ತಕ್ಷಣ ಗೀತಾ ಅವರು ಬ್ಯಾಗಿನೊಳಗಿದ್ದ ತಮ್ಮ ಮೊಬೈಲ್‌ಗೆ ಕರೆ ಮಾಡಿದ್ದಾರೆ. ಕರೆ ಸ್ವೀಕರಿಸಿದ ಆಟೋ ಚಾಲಕ ನವನಾಥ ಕುಡೆ, ಜಿಲ್ಲಾಧಿಕಾರಿ ಕಚೇರಿ ಬಳಿ ಕಾಯುತ್ತಿದ್ದ ಗೀತಾ ಅವರಿಗೆ ಬ್ಯಾಗ್‌ ಹಿಂದಿರುಗಿಸಿದ್ದಾರೆ.

Vijaya Karnataka 24 Jan 2022, 10:16 pm
Vijaya Karnataka Web ಬೆಳಗಾವಿ ಆಟೋ ಚಾಲಕ
ಬೆಳಗಾವಿ ಆಟೋ ಚಾಲಕ
ಬೆಳಗಾವಿ: ರಸ್ತೆಯಲ್ಲಿ ಸಿಕ್ಕಿದ ಲಕ್ಷಾಂತರ ರೂ. ನಗದು ಮತ್ತು ಚಿನ್ನದ ಆಭರಣಗಳಿದ್ದ ಬ್ಯಾಗನ್ನು ಆಟೋ ರಿಕ್ಷಾ ಚಾಲಕರೊಬ್ಬರು ಅದರ ವಾರಸುದಾರರಿಗೆ ಮರಳಿಸಿ ಪ್ರಾಮಾಣಿಕತೆ ಮೆರೆದಿದ್ದಾರೆ.

ಬೆಳಗಾವಿ ತಾಲೂಕಿನ ಸಾಂಬ್ರಾ ಗ್ರಾಮದಿಂದ ಸೋಮವಾರ ಬೆಳಗಾವಿಗೆ ಬಸವನ ಕುಡಚಿ ಮಾರ್ಗವಾಗಿ ದ್ವಿಚಕ್ರ ವಾಹನದಲ್ಲಿ ಬರುತ್ತಿದ್ದ ಎಲ್‌ಐಸಿ ಅಧಿಕಾರಿ ಗೀತಾ ಹೊಸಮನಿ ಎಂಬುವರ ಬ್ಯಾಗ್‌ ಆಕಸ್ಮಿಕವಾಗಿ ರಸ್ತೆಗೆ ಬಿದ್ದಿತ್ತು. ಅದನ್ನು ಗಮನಿಸಿದ ಆಟೋ ಚಾಲಕ ನವನಾಥ ಕುಡೆ ಎಂಬುವವರು ಬ್ಯಾಗ್‌ ತೆಗೆದುಕೊಂಡು ಅವರನ್ನು ಹಿಂಬಾಲಿಸಿದ್ದಾರೆ. ಆದರೆ ಬೈಕ್‌ ವೇಗ ಹೆಚ್ಚಿದ್ದರಿಂದ ಗೀತಾ ಹೊಸಮನಿ ಅವರನ್ನು ತಲುಪಲು ಸಾಧ್ಯವಾಗಿರಲಿಲ್ಲ.

ಎಸಿಬಿ ಮಿಂಚಿನ ಕಾರ್ಯಾಚರಣೆ, ಬೆಳಗಾವಿಯ ಮುಜರಾಯಿ ತಹಶೀಲ್ದಾರ್‌, ಆತನ ಸಂಬಂಧಿ ಬಂಧನ

1 ಲಕ್ಷ ರೂ. ನಗದು ಹಾಗೂ 20 ಗ್ರಾಂ ಚಿನ್ನವಿದ್ದ ಬ್ಯಾಗ್‌ ಬಿದ್ದಿದ್ದು ಅರಿವಾದ ತಕ್ಷಣ ಗೀತಾ ಅವರು ಬ್ಯಾಗಿನೊಳಗಿದ್ದ ತಮ್ಮ ಮೊಬೈಲ್‌ಗೆ ಕರೆ ಮಾಡಿದ್ದಾರೆ. ಕರೆ ಸ್ವೀಕರಿಸಿದ ಆಟೋ ಚಾಲಕ ನವನಾಥ ಕುಡೆ, ಜಿಲ್ಲಾಧಿಕಾರಿ ಕಚೇರಿ ಬಳಿ ಕಾಯುತ್ತಿದ್ದ ಗೀತಾ ಅವರಿಗೆ ಸ್ವತಃ ಬಂದು ಬ್ಯಾಗ್‌ ಹಿಂದಿರುಗಿಸಿದ್ದಾರೆ.

ಮಾಸ್ಕ್‌ ಹಾಕ್ಬೇಕು ಅಂತಾ ಅನಿಸಿಲ್ಲ, ಅದ್ಕೆ ಹಾಕಿಲ್ಲ! ಸಚಿವ ಉಮೇಶ್‌ ಕತ್ತಿ ಉಡಾಫೆ ಹೇಳಿಕೆ

ಇದಕ್ಕೆ ಪ್ರತಿಯಾಗಿ ಗೀತಾ ಅವರು ಹಣ ಕೊಡಲು ಮುಂದಾದಾಗ ನಿರಾಕರಿಸಿದ ನವನಾಥ ಕುಡೆ, ಆ ಹಣದಲ್ಲಿ ಅನಾಥ ಮಕ್ಕಳಿಗೆ ಊಟ, ಬಟ್ಟೆ ಕೊಡಿಸುವಂತೆ ಸಲಹೆ ನೀಡಿ, ಪ್ರಾಮಾಣಿಕತೆ ಮೆರೆದಿದ್ದಾರೆ.

ಹ್ಯಾಕ್‌ ಆರೋಪ: ಶಿರಸಿ ವ್ಯಕ್ತಿ ವಿರುದ್ಧ ದೂರು

ಬೆಳಗಾವಿ: ಖಾಸಗಿ ಸಂಸ್ಥೆಯ ಸಾಮಾಜಿಕ ಜಾಲತಾಣಗಳ ಖಾತೆ ಹ್ಯಾಕ್‌ ಮಾಡಿ, ದುರುಪಯೋಗ ಮಾಡಿಕೊಂಡಿರುವ ಆರೋಪದಲ್ಲಿ ಶಿರಸಿಯ ಪ್ರದೀಪ ಪೂಜಾರಿ ಎಂಬಾತನ ವಿರುದ್ಧ ನಗರದ ಸಿಇಎನ್‌ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಖಾಸಗಿ ಯುಟ್ಯೂಬ್‌ ಸುದ್ದಿ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿದ್ದ ಪ್ರದೀಪ ಪೂಜಾರಿಯನ್ನು ಕೆಲಸದಿಂದ ವಜಾ ಮಾಡಿದ ಹಿನ್ನೆಲೆಯಲ್ಲಿ ಆತ ವಾಹಿನಿಯ ಸಾಮಾಜಿಕ ಜಾಲತಾಣಗಳು ಹಾಗೂ ಮೇಲ್‌ ಹ್ಯಾಕ್‌ ಮಾಡಿ, ಸಂಸ್ಥೆಗೆ ನಷ್ಟೆ ಮಾಡಿದ್ದಾನೆ ಎಂದು ದೂರು ನೀಡಲಾಗಿದೆ.

ಈ ಸಂಬಂಧ ಪೊಲೀಸ್‌ ಠಾಣೆಗೆ ದೂರು ನೀಡಲಾಗಿದ್ದು, ಪ್ರಕರಣ ದಾಖಲಿಸಿಕೊಂಡು ಪೊಲೀಸರು ತನಿಖೆ ಆರಂಭಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ