ಆ್ಯಪ್ನಗರ

ವೀರಶೈವ ಲಿಂಗಾಯತ ತತ್ವ ಜಾಗೃತಿ ಜಂಗಮರ ಜವಾಬ್ದಾರಿ

ಅಥಣಿ: 'ವೀರಶೈವ ಲಿಂಗಾಯತ ತತ್ವಗಳು ಮತ್ತು ಸಂಸ್ಕೃತಿಯ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವ ಜವಾಬ್ದಾರಿ ಗುರುವಿನ ಸ್ಥಾನದಲ್ಲಿರುವ ಜಂಗಮರ ಮೇಲಿದೆ' ಎಂದು ಅಥಣಿ ...

Vijaya Karnataka 3 Apr 2019, 5:00 am
ಅಥಣಿ : 'ವೀರಶೈವ ಲಿಂಗಾಯತ ತತ್ವಗಳು ಮತ್ತು ಸಂಸ್ಕೃತಿಯ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವ ಜವಾಬ್ದಾರಿ ಗುರುವಿನ ಸ್ಥಾನದಲ್ಲಿರುವ ಜಂಗಮರ ಮೇಲಿದೆ' ಎಂದು ಅಥಣಿ ಶೆಟ್ಟರ ಮಠದ ಮರುಳಸಿದ್ದ ಸ್ವಾಮೀಜಿ ಹೇಳಿದರು.
Vijaya Karnataka Web BEL-02 ATHANI-03


ಅವರು ನಗರದ ನಿಯೋಜಿತ ರೇಣುಕಾಚಾರ್ಯ ಸಭಾಭವನದ ಎದುರು ಮಂಗಳವಾರ ಆಯೋಜಿಸಿದ್ದ ಜಗದ್ಗುರು ರೇಣುಕಾಚಾರ್ಯ ಜಯಂತಿ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಮಾತನಾಡಿದರು.

ಯುವಜನಾಂಗಕ್ಕೆ ಲಿಂಗ ಪೂಜೆಯ ಮಹತ್ವ ತಿಳಿಸಿಕೊಡುವ ಜತೆಗೆ ಅವರು ವೀರಶೈವ ಲಿಂಗಾಯತ ಪರಂಪರೆಯನ್ನು ಜೀವನದಲ್ಲಿ ಅನ್ವಯಿಸಿಕೊಳ್ಳುವ ನಿಟ್ಟಿನಲ್ಲಿ ಕಾರ್ಯಕ್ರಮಗಳು ನಡೆಯಬೇಕಿದೆ ಎಂದು ಅಭಿಪ್ರಾಯಪಟ್ಟರು.

ಮುಖ್ಯಆತಿಥ್ಯ ವಹಿಸಿದ್ದ ಮಹಿಳಾ ಘಟಕದ ಅಧ್ಯಕ್ಷ ತೆ ಮೀನಾಕ್ಷಿ ತೆಲಸಂಗ ಮಾತನಾಡಿ, ಜಂಗಮ ಸಮಾಜದ ಮಹಿಳಾ ಘಟಕವನ್ನು ಮುಂದಿನ ದಿನಗಳಲ್ಲಿ ಇನ್ನಷ್ಟು ಚುರುಕು ಗೊಳಿಸಲಾಗುವುದು ಎಂದರು.

ಇನ್ನೋರ್ವ ಮುಖ್ಯಅತಿಥಿ ಪ್ರೊ. ರಾಜೇಶ್ವರಿ ಎಸ್‌. ಹೀರೆಮಠ ಮಾತನಾಡಿ, ಪುರುಷ ಪ್ರಧಾನ ವ್ಯವಸ್ಥೆಯಲ್ಲಿ ಮಹಿಳೆಯರಿಗೆ ಸಮಾನ ಅವಕಾಶಗಳಿಲ್ಲ. ಸಮಾಜಕ್ಕೆ ಮಾದರಿಯಾಗಿರುವ ಜಂಗಮ ಸಮುದಾಯದವರಾದ ನಾವು ಮಹಿಳೆಯರಿಗೆ ಎಲ್ಲ ಸ್ಥಾನಮಾನಗಳಲ್ಲಿ ಸಮಾನ ಅವಕಾಶ ಕಲ್ಪಿಸಬೇಕು ಎಂದು ಕರೆ ನೀಡಿದರು.

ಶರಣಯ್ಯಾ ವಸ್ತ್ರದಮಠ ಮಾತನಾಡಿದರು. ಸಮಾಜದ ಅಧ್ಯಕ್ಷ ಚಿಕ್ಕಯ್ಯಾ ಹಿರೇಮಠ ಅಧ್ಯಕ್ಷತೆ ವಹಿಸಿದ್ದರು.

ಕಾರ್ಯಕ್ರಮದಲ್ಲಿ ಈರಯ್ಯಾ ಜಗದಾಳಮಠ, ಪುಟ್ಟು ಹಿರೆಮಠ, ಜಗದೀಶ ಹಿರೇಮಠ, ಜಗದೀಶ ಹಿರೇಮಠ, ಸಂಗಮೇಶ ಕಲ್ಮಠ, ನಿವೃತ್ತ ಪೊಲೀಸ್‌ ಅಧಿಕಾರಿ ಪಿ.ಬಿ. ಹಿರೇಮಠ, ಶರಣಯ್ಯಾ ವಸ್ತ್ರದಮಠ, ಪಂಚು ಅಳ್ಳಿಮಟಿ, ಅಶೋಕ ಅವಟಿಮಠ, ಶಿವುಕುಮಾರ ತೆಲಸಂಗ, ಸಂಜು ತೆಲಸಂಗ, ನಿವೃತ್ತ ಕೃಷಿ ಅಧಿಕಾರಿ ಎಸ್‌.ಎಂ. ಮಠಪತಿ ಉಪಸ್ಥಿತರಿದ್ದರು. ಸಂಗಮೇಶ ಕಲ್ಮಠ ಸ್ವಾಗತಿಸಿದರು. ಶರಣು ವಸ್ತ್ರದಮಠ ವಂದಿಸಿದರು.

ಸಮಾಜದ ಎಲ್ಲರ ಪ್ರಯತ್ನದಿಂದ ಜಗದ್ಗುರು ರೇಣಾಕಾಚಾರ್ಯ ಭವನಕ್ಕೆ ನಿವೇಶನ ಸಿಕ್ಕಿದೆ. ಎಲ್ಲ ಭಕ್ತರನ್ನು ವಿಶ್ವಾಸಕ್ಕೆ ಪಡೆದು ಶೀಘ್ರ ಭವನದ ಕಟ್ಟಡ ನಿರ್ಮಾಣ ಮಾಡಲಾಗುವುದು.
-ಚಿಕ್ಕಯ್ಯಾ ಹಿರೇಮಠ, ಜಂಗಮ ಸಮಾಜದ ಅಧ್ಯಕ್ಷ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ