ಆ್ಯಪ್ನಗರ

ಬಗರ್‌ಹುಕುಂ ಅಕ್ರಮ: ವರದಿ ಸಲ್ಲಿಕೆಗೆ ಪ್ರಾದೇಶಿಕ ಆಯುಕ್ತರ ಹುಕುಂ

ಬೆಳಗಾವಿ: ಬಗರ್‌ ಹುಕುಂ ಜಮೀನುಗಳ ಮಂಜೂರಾತಿಯಲ್ಲಿ ನಡೆದಿರುವ ಅಕ್ರಮಗಳು ಅಥವಾ ಲೋಪದೋಷಗಳಿಗೆ ಸಂಬಂಧಿಸಿದಂತೆ ಸಮಗ್ರ ತನಿಖೆ ಕೈಗೊಂಡು ವರದಿ ಸಲ್ಲಿಸಬೇಕು ಎಂದು ...

Vijaya Karnataka 23 Oct 2018, 5:00 am
ಬೆಳಗಾವಿ : ಬಗರ್‌ ಹುಕುಂ ಜಮೀನುಗಳ ಮಂಜೂರಾತಿಯಲ್ಲಿ ನಡೆದಿರುವ ಅಕ್ರಮಗಳು ಅಥವಾ ಲೋಪದೋಷಗಳಿಗೆ ಸಂಬಂಧಿಸಿದಂತೆ ಸಮಗ್ರ ತನಿಖೆ ಕೈಗೊಂಡು ವರದಿ ಸಲ್ಲಿಸಬೇಕು ಎಂದು ಪ್ರಾದೇಶಿಕ ಆಯುಕ್ತ ಪಿ.ಎ. ಮೇಘಣ್ಣವರ ಸೂಚನೆ ನೀಡಿದರು.
Vijaya Karnataka Web bagar hukum scam regional commissioner permitted for report submition
ಬಗರ್‌ಹುಕುಂ ಅಕ್ರಮ: ವರದಿ ಸಲ್ಲಿಕೆಗೆ ಪ್ರಾದೇಶಿಕ ಆಯುಕ್ತರ ಹುಕುಂ


ನಗರದ ಪ್ರಾದೇಶಿಕ ಆಯುಕ್ತ ಕಚೇರಿಯಲ್ಲಿ ಸೋಮವಾರ ನಡೆದ ಬೆಳಗಾವಿ ವಿಭಾಗದ ವ್ಯಾಪ್ತಿಯ ಎಲ್ಲ ಜಿಲ್ಲೆಗಳ ಉಪ ವಿಭಾಗಾಧಿಕಾರಿಗಳ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ವಿಭಾಗದಲ್ಲಿ ಒಟ್ಟಾರೆ 3 ಪ್ರಕರಣಗಳಲ್ಲಿ 9.31 ಎಕರೆ ಜಮೀನಿಗೆ ಸಂಬಂಧಿಸಿದಂತೆ ಮಾತ್ರ ಮರು ಪರಿಶೀಲಿಸಿ ಮಂಜೂರಾತಿ ನೀಡಿದ ಪ್ರಕರಣಗಳಿವೆ. ತಿರಸ್ಕೃತಗೊಂಡು ಮತ್ತೆ ಮಂಜೂರಾಗಿರುವ ಪ್ರಕರಣಗಳಿಗೆ ಸಂಬಂಧಿಸಿದಂತೆ ಅ.27 ರೊಳಗೆ ಮರುಪರಿಶೀಲಿಸಿ ವರದಿ ನೀಡುವಂತೆ ತಿಳಿಸಿದರು. ಮಂಜೂರಾಗಿರುವ ಪ್ರಕರಣಗಳಲ್ಲಿ ಇದುವರೆಗೆ ಸಾಗುವಳಿ ಚೀಟಿ ಏಕೆ ನೀಡಿಲ್ಲ ಎಂಬುದರ ಬಗ್ಗೆಯೂ ವರದಿ ನೀಡಬೇಕು ಎಂದು ತಾಕೀತು ಮಾಡಿದರು.

ಪಿಂಚಣಿ ಅರ್ಜಿ ಇತ್ಯರ್ಥಕ್ಕೆ ಸೂಚನೆ:
ಸಾಮಾಜಿಕ ಭದ್ರತಾ ಪಿಂಚಣಿ ಯೋಜನೆಗಳಿಗೆ ಸಂಬಂಧಿಸಿದ ಅರ್ಜಿಗಳನ್ನು ಆದ್ಯತೆ ಮೇರೆಗೆ ಕಾಲಮಿತಿಯಲ್ಲಿ ಪೂರ್ಣಗೊಳಿಸಬೇಕು. ಪ್ರಸಕ್ತ ವರ್ಷದ ಏ.1ರಿಂದ ಇಲ್ಲಿಯವರೆಗೆ ಉಪ ವಿಭಾಗಾಧಿಕಾರಿಗಳು ಹೋಬಳಿ ಮಟ್ಟದಲ್ಲಿ ನಡೆಸಿದ ಲೋಕ ಅದಾಲತ್‌ಗಳು, ಅರ್ಜಿ ಸ್ವೀಕಾರ, ಇತ್ಯರ್ಥಪಡಿಸಿದ ಪ್ರಕರಣಗಳು ಮತ್ತು ಬಾಕಿ ಉಳಿದ ಅರ್ಜಿಗಳನ್ನು ಇತ್ಯರ್ಥಪಡಿಸಿದ ವರದಿಯನ್ನು ಅ.27ರೊಳಗೆ ಸಲ್ಲಿಸಬೇಕು ಎಂದು ಮೇಘಣ್ಣವರ ಸೂಚಿಸಿದರು.

ಹೊಸ ತಾಲೂಕುಗಳು ರಚನೆಯಾಗಿರುವ ಕಡೆಗಳಲ್ಲಿ ಮಿನಿ ವಿಧಾನಸೌಧ ನಿರ್ಮಾಣಕ್ಕೆ ಸ್ಥಳ ಗುರುತಿಸಬೇಕು. ಬರಪೀಡಿತ ತಾಲೂಕುಗಳಲ್ಲಿ ಕುಡಿಯುವ ನೀರು ಒದಗಿಸಲು ಪರ್ಯಾಯ ಯೋಜನೆ ರೂಪಿಸಬೇಕು. ಜಾನುವಾರುಗಳಿಗೆ ಮೇವು, ಕೆಲಸ ಅರಸಿ ಗುಳೆ ಹೋಗುವ ಜನರಿಗೆ ನರೇಗಾ ಅಡಿ ಕೆಲಸದ ವ್ಯವಸ್ಥೆ ಕಲ್ಪಿಸಬೇಕು. ಐದು ಹಾಗೂ ಮೂರು ವರ್ಷಕ್ಕಿಂತ ಹಳೆಯದಾಗಿರುವ ಕಂದಾಯ ನ್ಯಾಯಾಲಯದ ಪ್ರಕರಣಗಳನ್ನು ಡಿಸೆಂಬರ್‌ ಅಂತ್ಯದೊಳಗೆ ವಿಲೇವಾರಿ ಮಾಡಬೇಕು ಎಂದು ತಿಳಿಸಿದರು.

ಅಪರ ಪ್ರಾದೇಶಿಕ ಆಯುಕ್ತ ರಮೇಶ್‌ ಕಳಸದ, ಬೆಳಗಾವಿ ವಿಭಾಗದ ಉಪ ವಿಭಾಗಾಧಿಕಾರಿಗಳು ಸಭೆಯಲ್ಲಿ ಉಪಸ್ಥಿತರಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ