ಆ್ಯಪ್ನಗರ

ಚಿಕ್ಕೋಡಿ, ಗೋಕಾಕ ಜಿಲ್ಲೆ ರಚನೆಗೆ ಬೈಲಹೊಂಗಲ ಅಡ್ಡಿ

ಚಿಕ್ಕೋಡಿ: ಸಿದ್ದರಾಮಯ್ಯ ನೇತೃತ್ವದ ಸರಕಾರದಲ್ಲೇ ಚಿಕ್ಕೋಡಿ ...

Vijaya Karnataka 22 Jul 2018, 5:00 am
ಚಿಕ್ಕೋಡಿ: ಸಿದ್ದರಾಮಯ್ಯ ನೇತೃತ್ವದ ಸರಕಾರದಲ್ಲೇ ಚಿಕ್ಕೋಡಿ ಮತ್ತು ಗೋಕಾಕ ಎರಡೂ ಜಿಲ್ಲೆ ಆಗಬೇಕಾಗಿತ್ತು. ಆದರೆ, ಹೊಸ ತಾಲೂಕು ರಚನೆ ಗೊಂದಲದಲ್ಲಿ ಹೊಸ ಜಿಲ್ಲಾ ರಚನೆ ಉಳಿದುಕೊಂಡಿದೆ ಎಂದು ಸಚಿವ ರಮೇಶ ಜಾರಕಿಹೋಳಿ ಹೇಳಿದರು.
Vijaya Karnataka Web bailhongal is obstacle for chikkodi gokak districts formation
ಚಿಕ್ಕೋಡಿ, ಗೋಕಾಕ ಜಿಲ್ಲೆ ರಚನೆಗೆ ಬೈಲಹೊಂಗಲ ಅಡ್ಡಿ


ಪಟ್ಟಣದಲ್ಲಿ ಪ್ರವಾಹ ಪರಿಸ್ಥಿತಿ ಕುರಿತ ಜಿಲ್ಲಾ ಮಟ್ಟದ ಸಭೆಯ ನಂತರ ಸುದ್ದಿಗಾರರೊಂದಿಗೆ ಶನಿವಾರ ಮಾತನಾಡಿದ ಅವರು, ''ಈಗಲೂ ಚಿಕ್ಕೋಡಿ ಮತ್ತು ಗೋಕಾಕ ಜಿಲ್ಲೆ ಮಾಡಲು ಯಾವುದೇ ತೊಂದರೆ ಇಲ್ಲ. ಆದರೆ ಬೈಲಹೊಂಗಲದವರು ಅಡ್ಡಿ ಪಡಿಸುತ್ತಿದ್ದಾರೆ'', ಎಂದರು.

ಇಂದಿನ ಜಿಲ್ಲಾ ಮಟ್ಟದ ಸಭೆಗೆ ಬಿಜೆಪಿಯ ಯಾವುದೇ ಜನಪ್ರತಿನಿಧಿಗಳು ಆಗಮಿಸಿಲ್ಲ; ಅಧಿಕಾರಿಗಳು ಅವರನ್ನು ಆಹ್ವಾನಿಸಿದ್ದಾರೋ ಇಲ್ಲವೋ, ಏನಾದರೂ ಭಿನ್ನಾಭಿಪ್ರಾಯಗಳಿವೆಯೇ ಎಂಬ ಪ್ರಶ್ನೆ ಎದುರಾದಾಗ ''ಅದರ ಬಗ್ಗೆ ಪರಿಶೀಲಿಸುತ್ತೇನೆ. ನಮ್ಮಲ್ಲಿ ಯಾವುದೇ ಭಿನ್ನಾಭಿಪ್ರಾಯವಿಲ್ಲ. ಇಂಥ ಸಭೆಗಳಿಗೆ ಜಿಲ್ಲೆಯ ಎಲ್ಲ ಜನಪ್ರತಿನಿಧಿಗಳನ್ನು ಆಹ್ವಾನಿಸಬೇಕು. ಇದು ಕೇವಲ ಕಾಂಗ್ರೆಸ್‌ ಪಕ್ಷ ದವರ ಸಭೆಯಲ್ಲ'', ಎಂದರು.

ನಾನು ಪ್ರವಾಸಕ್ಕಾಗಿ ಅಜ್ಮೀರಕ್ಕೆ ಹೋಗಿಲ್ಲ. ಬೆಳಗಾವಿಯ ಮುಸ್ಲಿಂ ಸಮಾಜದವರು ನನಗಾಗಿ ಹರಕೆ ಹೊತ್ತಿದ್ದರು. ಅದನ್ನು ತೀರಿಸಲು ಹೋಗಿದ್ದೆ.
- ರಮೇಶ್‌ ಜಾರಕಿಹೊಳಿ, ಸಚಿವ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ