ಆ್ಯಪ್ನಗರ

ಬಾಲಚಂದ್ರ-ನಿಖಿಲ್‌ ಜಂಟಿ ಪರಿಹಾರ ವಿತರಣೆ!

ಮೂಡಲಗಿ (ಬೆಳಗಾವಿ): ಸಮೀಪದ ಹುಣಶ್ಯಾಳ ಪಿವೈ...

Vijaya Karnataka 14 Aug 2019, 5:00 am
ಮೂಡಲಗಿ (ಬೆಳಗಾವಿ): ಸಮೀಪದ ಹುಣಶ್ಯಾಳ ಪಿ.ವೈ. ಗ್ರಾಮದ ಕಾಳಜಿ ಕೇಂದ್ರಕ್ಕೆ ಸೋಮವಾರ ರಾತ್ರಿ ಭೇಟಿ ನೀಡಿದ ಸಂದರ್ಭದಲ್ಲಿ ಅರಬಾವಿ ಶಾಸಕ ಬಾಲಚಂದ್ರ ಜಾರಕಿಹೊಳಿ ಹಾಗೂ ಜೆಡಿಎಸ್‌ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್‌ ಕುಮಾರಸ್ವಾಮಿ ಪರಸ್ಪರ ಭೇಟಿಯಾದರು. ನಂತರ ಜಂಟಿಯಾಗಿಯೇ ನಿರಾಶ್ರಿತರಿಗೆ ಅಗತ್ಯ ವಸ್ತುಗಳನ್ನು ವಿತರಿಸಿ ಗಮನ ಸೆಳೆದರು.
Vijaya Karnataka Web BEL-13MDL5


ನಿಖಿಲ್‌ ಮಾತನಾಡಿ, ''ಪ್ರವಾಹ ಪೀಡಿತ ಪ್ರದೇಶಗಳಿಗೆ ಭೇಟಿ ನೀಡುತ್ತಾ, ಅವರಿಗೆ ಧೈರ್ಯ ತುಂಬುವ ಕೆಲಸ ಮಾಡುತ್ತಿರುವ ಬಾಲಚಂದ್ರ ಅವರು ನಮಗೆಲ್ಲ ಹಿರಿಯ ಅಣ್ಣನಂತೆ ಇದ್ದಾರೆ. ನಿರಾಶ್ರಿತರ ಕೇಂದ್ರಗಳಿಗೆ ವಿಶ್ರಾಂತಿ ಇಲ್ಲದೇ ಭೇಟಿ ನೀಡಿ ಅವರ ಕಷ್ಟಕಾರ್ಪಣ್ಯಗಳನ್ನು ವಿಚಾರಿಸುತ್ತಿರುವ ಅವರ ಕಾರ್ಯವನ್ನು ನಾವೆಲ್ಲರೂ ಮೆಚ್ಚಲೇಬೇಕು'' ಎಂದು ಅಭಿಮಾನದ ಮಾತುಗಳನ್ನಾಡಿದರು.

''ನಮಗೆ ಉತ್ತರ-ದಕ್ಷಿಣ ಎಂಬ ಭೇದ ಭಾವವಿಲ್ಲ, ಮಾನವೀಯ ನೆಲೆಗಟ್ಟಿನ ಮೇಲೆ ತಂದೆ ಎಚ್‌.ಡಿ.ಕುಮಾರಸ್ವಾಮಿ ಅವರ ಸಲಹೆ ಮೇರೆಗೆ ನಿರಾಶ್ರಿತರ ನೆರವಿಗೆ ಧಾವಿಸಿ ಬಂದಿದ್ದೇವೆ. ನಮ್ಮ ಕೈಲಾದ ಸಹಾಯ ಮಾಡುತ್ತಿದ್ದೇವೆ. ಇದರಲ್ಲಿ ರಾಜಕಾರಣ ಮಾಡುವ ಅವಶ್ಯಕತೆ ನಮಗಿಲ್ಲ. ಪ್ರವಾಹದಿಂದ ನಿರಾಶ್ರಿತರು ಧೃತಿಗೆಡಬೇಕಾಗಿಲ್ಲ. ಧೈರ್ಯವಾಗಿ ಬದುಕು ಸಾಗಿಸಬೇಕು'' ಎಂದು ನಿಖಿಲ್‌ ಹೇಳಿದರು.

ಇಬ್ಬರೂ ಮುಖಂಡರು ನಿರಾಶ್ರಿತರಿಗೆ ನಿತ್ಯ ಬಳಕೆಯ ಸಾಮಗ್ರಿಗಳನ್ನು ವಿತರಿಸಿದರು. ಮಾಜಿ ಶಾಸಕ ಎಚ್‌.ಎನ್‌. ಕೋನರೆಡ್ಡಿ, ಜಿಪಂ ಸದಸ್ಯ ಶಂಕರ ಮಾಡಲಗಿ, ಚನ್ನಪ್ಪ ವಗ್ಗನವರ್‌ ಮತ್ತಿತರರು ಉಪಸ್ಥಿತರಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ