ಆ್ಯಪ್ನಗರ

ಸಹೋದರರ ರಾಜಕೀಯ ಕಲಹದ ಬಗ್ಗೆ ಬಾಲಚಂದ್ರ ಬೇಸರ

ಬೆಳಗಾವಿ: ಸಹೋದರರ ರಾಜಕೀಯ ಕಲಹದ ಬಗ್ಗೆ ...

Vijaya Karnataka 6 Nov 2019, 5:00 am
ಬೆಳಗಾವಿ: ಸಹೋದರರ ರಾಜಕೀಯ ಕಲಹದ ಬಗ್ಗೆ ಬೇಸರ ವ್ಯಕ್ತಪಡಿಸಿರುವ ಅರಬಾವಿ ಶಾಸಕ ಹಾಗೂ ಕೆಎಂಎಫ್‌ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ, ''ನಾನು ಅದರಿಂದ ದೂರ ಇರುತ್ತೇನೆ'', ಎಂದು ಸ್ಪಷ್ಟಪಡಿಸಿದ್ದಾರೆ.
Vijaya Karnataka Web balachandra gets bored of the brothers political strife
ಸಹೋದರರ ರಾಜಕೀಯ ಕಲಹದ ಬಗ್ಗೆ ಬಾಲಚಂದ್ರ ಬೇಸರ


ಸುದ್ದಿಗಾರರೊಂದಿಗೆ ಮಂಗಳವಾರ ಮಾತನಾಡಿದ ಅವರು, ''ಇನ್ನು ಮುಂದೆ ನಾನು ಬೇರೆ ಯಾವ ಕಡೆಗೂ ಲಕ್ಷ್ಯ ಕೊಡುವುದಿಲ್ಲ. ಅರಬಾವಿ ಕ್ಷೇತ್ರ ಮತ್ತು ಕೆಎಂಎಫ್‌ನ ಕೆಲಸ ಮಾಡುತ್ತೇನೆ. ಇವೆರಡು ಬಿಟ್ಟರೆ ಬೇರಾರ‍ಯರ ಉಸಾಬರಿಯೂ ನನಗೆ ಬೇಡ'', ಎಂದರು.

''ಅನರ್ಹ ಶಾಸಕರ ಕುರಿತು ಸುಪ್ರೀಂ ಕೋರ್ಟ್‌ ತೀರ್ಪಿನ ನಂತರವೇ ಮಾತು. ಅಲ್ಲಿಯವರೆಗೂ ಆ ಕುರಿತ ರಾಜಕೀಯಕ್ಕೆ ಫುಲ್‌ಸ್ಟಾಪ್‌. ಆಗ ನೀವು ಒಂದು ಪ್ರಶ್ನೆ ಕೇಳಿದರೆ ನಾನು ಹತ್ತು ಪ್ರಶ್ನೆಗಳಿಗೆ ಉತ್ತರಿಸುತ್ತೇನೆ'', ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

''ರೈತರ ಬ್ಯಾಂಕ್‌ ಖಾತೆಗೆ ಆಧಾರ್‌ ಲಿಂಕ್‌ ಆಗದ್ದರಿಂದ ಒಕ್ಕೂಟಕ್ಕೆ ಹಾಲು ಪೂರೈಕೆ ಮಾಡಿದವರಿಗೆ ನೀಡಬೇಕಿರುವ ಸಾವಿರಾರು ಕೋಟಿ ರೂ.ಗಳ ಪ್ರೊತ್ಸಾಹ ಧನ ಹಾಗೆಯೇ ಇದೆ. ಕೆಎಂಎಫ್‌ ವ್ಯವಸ್ಥಾಪಕ ನಿರ್ದೇಶಕರು ಮತ್ತು ಪಶುಸಂಗೋಪನಾ ಇಲಾಖೆಯ ಪ್ರಧಾನ ಕಾರ್ಯದರ್ಶಿಗಳು ಒಟ್ಟಿಗೆ ಕೆಲಸ ಮಾಡಿ, ತಾಂತ್ರಿಕ ಅಡಚಣೆಗಳನ್ನು ಸರಿಪಡಿಸಿ ಮುಂದಿನ ದಿನಗಳಲ್ಲಿಪ್ರೋತ್ಸಾಹಧನ ಪ್ರತಿ ತಿಂಗಳೂ ಸಿಗುವಂತೆ ಮಾಡಲಿದ್ದಾರೆ'', ಎಂದು ಭರವಸೆ ನೀಡಿದ ಅವರು, ''ನೆರೆ ಪೀಡಿತ ಪ್ರದೇಶಗಳ ಹಾಲು ಉತ್ಪಾದಕರ ಸಂಕಷ್ಟಕ್ಕೆ ಸರಕಾರವೇ ಸ್ಪಂದಿಸಲಿದೆ'', ಎಂದರು.

ಆರ್‌ಸಿಇಪಿ ಒಪ್ಪಂದಕ್ಕೆ ಪ್ರಧಾನಿ ನರೇಂದ್ರ ಮೋದಿ ಸಹಿ ಮಾಡದಿರುವುದು ಸ್ವಾಗತಾರ್ಹ ಮತ್ತು ಅಭಿನಂದನೀಯ. ಈ ಒಪ್ಪಂದವನ್ನು ತಾಳಿಕೊಳ್ಳುವ ಹಾಗೂ ವಿದೇಶಗಳೊಂದಿಗೆ ಸ್ಪರ್ಧಿಸುವ ಶಕ್ತಿ ಭಾರತೀಯ ಕೃಷಿ ಮತ್ತು ಹೈನುಗಾರಿಕೆಗೆ ಇಲ್ಲ.
- ಬಾಲಚಂದ್ರ ಜಾರಕಿಹೊಳಿ, ಶಾಸಕ ಮತ್ತು ಕೆಎಂಎಫ್‌ ಅಧ್ಯಕ್ಷ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ