ಆ್ಯಪ್ನಗರ

ಗ್ರಾಮಸ್ಥರ ಮೆಚ್ಚುಗೆ ಗಳಿಸಿದ ಬಾಳೇಶ ಹುರಳಿ

ಯಮಕನಮರಡಿ: ಗ್ರಾಮದ ಬಾಳೇಶ ಸಿದ್ದಪ್ಪ ಹುರಳಿ ಸ್ವಂತ ಖರ್ಚಿನಲ್ಲಿ ವಾರಕ್ಕೊಮ್ಮೆ ರಸ್ತೆ ಗುಂಡಿಗಳನ್ನು ಮುಚ್ಚುವ ...

Vijaya Karnataka 2 Jul 2018, 5:00 am
ಯಮಕನಮರಡಿ: ಗ್ರಾಮದ ಬಾಳೇಶ ಸಿದ್ದಪ್ಪ ಹುರಳಿ ಸ್ವಂತ ಖರ್ಚಿನಲ್ಲಿ ವಾರಕ್ಕೊಮ್ಮೆ ರಸ್ತೆ ಗುಂಡಿಗಳನ್ನು ಮುಚ್ಚುವ ಮೂಲಕ ಮಾದರಿ ಕೆಲಸ ಮಾಡುತ್ತಿದ್ದಾರೆ.
Vijaya Karnataka Web BEL-1YMD1


ಟೇಲರ್‌ ಕೆಲಸ ಮಾಡುವ ಅವರು, ತಮ್ಮ ನಿತ್ಯದ ಆದಾಯದಲ್ಲಿ 30 ರೂ.ಗಳನ್ನು ಈ ಕಾರ‍್ಯಕ್ಕಾಗಿ ತೆಗೆದಿಡುತ್ತಾರೆ. ಹೀಗೆ ಸಂಗ್ರಹವಾದ ಹಣದಲ್ಲಿ ಸ್ವಪ್ರೇರಣೆಯಿಂದ ಗ್ರಾಮಗಳಲ್ಲಿ ಮುಖ್ಯ ರಸ್ತೆಯ ಗುಂಡಿಗಳನ್ನು ಮುಚ್ಚುತ್ತಾರೆ. ಕಾಂಕ್ರಿಟ್‌ ಹಾಕಿ ರಸ್ತೆ ಗುಂಡಿ ಮುಚ್ಚುವುದು, ಚರಂಡಿ ಸ್ವಚ್ಛ ಮಾಡುವ ಕಾಯಕವನ್ನು ಅವರು ಮಾಡುತ್ತಿದ್ದಾರೆ. ಕಸ್ತೆಯಲ್ಲಿ ಬಿದ್ದ ಕಸ ತೆಗೆದು ತಮ್ಮ ವಾಹನದಲ್ಲಿ ವಿಲೇವಾರಿ ಮಾಡುತ್ತಾರೆ. ಬಾಳೇಶ ಅವರ ಪುತ್ರರಾದ ಪ್ರವೀಣ, ಪ್ರತಾಪ, ಪ್ರಶಾಂತ ಕೂಡ ಈ ಕೆಲಸಕ್ಕೆ ನೆರವಾಗುತ್ತಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ