ಆ್ಯಪ್ನಗರ

ಆತಂಕ ಮೂಡಿಸುತ್ತಿರುವ ಬ್ಯಾಂಕ್‌ ಗ್ರಾಹಕರ ಸರದಿ ಸಾಲು

ಬಾವನಸೌಂದತ್ತಿ: ಕೊರೊನಾ ಸೋಂಕು ನಿಯಂತ್ರಿಸುವ ...

Vijaya Karnataka 14 Apr 2020, 5:00 am
ಬಾವನಸೌಂದತ್ತಿ : ಕೊರೊನಾ ಸೋಂಕು ನಿಯಂತ್ರಿಸುವ ಹಿನ್ನೆಲೆಯಲ್ಲಿಬಡವರು ಮತ್ತು ಕೂಲಿ ಕಾರ್ಮಿಕರಿಗೆ ತೊಂದರೆ ಆಗದಿರಲು ಸರಕಾರ ಘೋಷಿಸಿರುವ ಸಹಾಯ ಧನ, ಜನ್‌ಧನ್‌ ಖಾತೆಯಲ್ಲಿನ ಹಣ, ಉಜ್ವಲ ಗ್ಯಾಸ್‌ ಸಬ್ಸಿಡಿ ಇತ್ಯಾದಿ ಪಡೆಯಲು ಇಲ್ಲಿನ ಕೆನರಾ (ಸಿಂಡಿಕೇಟ್‌) ಬ್ಯಾಂಕ್‌ಗೆ ಆಗಮಿಸಿರುವ ಗ್ರಾಹಕರು ಸಾಮಾಜಿಕ ಅಂತರ ಕಾಯ್ದುಕೊಳ್ಳದಿರುವುದು ಆತಂಕ ಮೂಡಿಸಿದೆ.
Vijaya Karnataka Web 13 BSDT 04_53
ಬಾವನಸೌಂದತ್ತಿಯ ಕೆನರಾ (ಸಿಂಡಿಕೇಟ್‌) ಬ್ಯಾಂಕ್‌ ಎದುರು ಸರಕಾರದ ಸಹಾಯಧನ ಪಡೆಯಲು ಗ್ರಾಹಕರು ಸಾಮಾಜಿಕ ಅಂತರ ಕಾಯ್ದುಕೊಳ್ಳದೆ ಸರದಿ ಸಾಲಿನಲ್ಲಿನಿಂತಿರುವುದು.


ಸಮೀಪದ ಕುಡಚಿ ಪಟ್ಟಣದಲ್ಲಿಕೊರೊನಾ ಪಾಸಿಟೀವ್‌ ಪ್ರಕರಣ ದಿನದಿಂದ ದಿನಕ್ಕೆ ಏರುತ್ತಿದ್ದರೂ ಜನರು ಎಚ್ಚೆತ್ತುಕೊಳ್ಳುತ್ತಿಲ್ಲ. ತಮ್ಮ ಸುರಕ್ಷತೆಗಾಗಿ ಮಾಸ್ಕ್‌ ಕೂಡ ಧರಿಸದೆ ಆಗಮಿಸುತ್ತಿದ್ದಾರೆ.

ತಾಲೂಕು ಆಡಳಿತ ಮತ್ತು ಪೊಲೀಸ್‌ ಇಲಾಖೆ ಇನ್ನಾದರೂ ಎಚ್ಚೆತ್ತುಕೊಂಡು ಗ್ರಾಮೀಣ ಭಾಗದಲ್ಲಿ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು ಎಂದು ಅನೇಕ ಆತಂಕಿತ ನಾಗರಿಕರು ಒತ್ತಾಯಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ