ಬೆಳಗಾವಿ: ಸಹಕಾರಿ ಧುರೀಣ, ಉದ್ಯಮಿ ಆರ್.ಎನ್. ನಾಯಕ ಕೊಲೆ ಪ್ರಕರಣ ಸೇರಿದಂತೆ 40ಕ್ಕೂ ಅಧಿಕ ಪ್ರಕರಣಗಳಲ್ಲಿ ಭಾಗಿಯಾದ ಆರೋಪ ಎದುರಿಸುತ್ತಿರುವ ಭೂಗತ ಪಾತಕಿ ಬನ್ನಂಜೆ ರಾಜಾಗೆ ವಿಧಿಸಿದ್ದ ನ್ಯಾಯಾಂಗ ಬಂಧನವನ್ನು ಇಲ್ಲಿನ ಕೋಕಾ (ಕರ್ನಾಟಕ ಸಂಘಟಿತ ಅಪರಾಧ ತಡೆ ನ್ಯಾಯಾಲಯ) ನ್ಯಾಯಾಲಯ ಆಗಸ್ಟ್ 30ರವರೆಗೆ ವಿಸ್ತರಿಸಿದೆ. ಶುಕ್ರವಾರ ಬೆಳಗ್ಗೆ ಬಿಗಿ ಭದ್ರತೆಯಲ್ಲಿ ಆತನನ್ನು ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ಆವರಣದಲ್ಲಿರುವ ಕೋಕಾ ಕೋರ್ಟ್ಗೆ ಹಾಜರುಪಡಿಸಲಾುತು. ನ್ಯಾಯಾಧೀಶ ಅಶೋಕ ನಿಜಗಣ್ಣವರ ಅವರು ಬನ್ನಂಜೆ ರಾಜಾಗೆ ವಿಧಿಸಿದ ನ್ಯಾಯಾಂಗ ಬಂಧನವನ್ನು ಆ.30ರ ವರೆಗೆ ಮುಂದುವರಿಸಿ ಆದೇಶ ನೀಡಿದರು.
ಬನ್ನಂಜೆ ರಾಜಾ ನ್ಯಾಯಾಂಗ ಬಂಧನ ವಿಸ್ತರಣೆ
ಸಹಕಾರಿ ಧುರೀಣ, ಉದ್ಯಮಿ ಆರ್ಎನ್...
ವಿಕ ಸುದ್ದಿಲೋಕ 13 Aug 2016, 5:00 am