ಆ್ಯಪ್ನಗರ

ದೋಷಾರೋಪ ತಳ್ಳಿಹಾಕಿದ ಬನ್ನಂಜೆ ರಾಜಾ

ಬೆಳಗಾವಿ: ಅಂಕೋಲಾದ ಉದ್ಯಮಿ ಆರ್‌ಎನ್‌...

Vijaya Karnataka 4 Nov 2018, 5:00 am
ಬೆಳಗಾವಿ : ಅಂಕೋಲಾದ ಉದ್ಯಮಿ ಆರ್‌.ಎನ್‌. ನಾಯಕ್‌ ಹತ್ಯೆ ಪ್ರಕರಣದ ಪ್ರಮುಖ ಆರೋಪಿ ಬನ್ನಂಜೆ ರಾಜಾ ಸೇರಿದಂತೆ ಒಟ್ಟು 12 ಆರೋಪಿಗಳನ್ನು ಇಲ್ಲಿನ ಜಿಲ್ಲಾ ಪ್ರಧಾನ ಮತ್ತು ಸತ್ರ ನ್ಯಾಯಾಲಯಕ್ಕೆ ಶನಿವಾರ ಹಾಜರು ಪಡಿಸಲಾಯಿತು.
Vijaya Karnataka Web bannanje raja


ಈ ಸಂದರ್ಭದಲ್ಲಿ, 2013ರಲ್ಲಿ ನಡೆದ ಆರ್‌.ಎನ್‌.ನಾಯಕ್‌ ಹತ್ಯೆ ಪ್ರಕರಣದ ಕುರಿತು ಆರೋಪಿಗಳ ವಿರುದ್ಧ ದಾಖಲಾಗಿರುವ ದೋಷಾರೋಪಗಳನ್ನು ಆರೋಪಿಗಳು ಮತ್ತು ವಕೀಲರ ಸಮ್ಮುಖದಲ್ಲಿ ಕೋಕಾ ವಿಶೇಷ ನ್ಯಾಯಾಲಯದ ನ್ಯಾಯಾಧೀಶ ಆರ್‌.ಜೆ.ಸತೀಶ್‌ಸಿಂಗ್‌ ಓದಿ ಗಮನ ಸೆಳೆದರು. ಆದರೆ, ಬನ್ನಂಜೆ ರಾಜಾ ಸೇರಿದಂತೆ ಎಲ್ಲ ಆರೋಪಿಗಳು ತಮ್ಮ ಮೇಲೆ ಹೊರಿಸಿರುವ ಎಲ್ಲ ದೋಷಾರೋಪಗಳನ್ನು ತಳ್ಳಿಹಾಕಿದರು. ನಂತರ ಆರೋಪಿಗಳ ವಿಚಾರಣೆಯನ್ನು ಡಿ.17ಕ್ಕೆ ಕಾಯ್ದಿರಿಸಿ ನ್ಯಾಯಾಧೀಶರು ವಿಚಾರಣೆಯನ್ನು ಮುಂದೂಡಿದರು.

ಆರ್‌.ಎನ್‌.ನಾಯಕ್‌ ಹತ್ಯೆ, ಹತ್ಯೆಗೆ ರೂಪಿಸಿದ ಒಳಸಂಚು ಮತ್ತು ಕೋಕಾ ನಿಯಮಗಳಡಿಯಲ್ಲಿ ಆರೋಪಿಗಳ ವಿರುದ್ಧ ದೋಷಾರೋಪ ಪಟ್ಟಿ ಸಲ್ಲಿಕೆಯಾಗಿತ್ತು. ಆರೋಪಿಗಳ ಪರವಾಗಿ ಹಾಲಪ್ಪ ಸವಸುದ್ದಿ ಮತ್ತು ಸರಕಾರದ ಪರವಾಗಿ ಅಭಿಯೋಜಕ ಕೆ.ಜಿ.ಪುರಾಣಿಕಮಠ ವಕಾಲತ್ತು ನಡೆಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ