ಆ್ಯಪ್ನಗರ

ಬಸವಾದಿ ಶರಣರ ಸಾಹಿತ್ಯ ಪ್ರತಿಯೊಬ್ಬರಿಗೂ ದಾರಿದೀಪ

ಚಿಕ್ಕೋಡಿ : 12ನೇ ಶತಮಾನದಲ್ಲಿನ ಬಸವಾದಿ ಶಿವಶರಣರ ವಚನ ಸಾಹಿತ್ಯ ಇಂದಿಗೂ ಪ್ರತಿಯೊಬ್ಬರ ಜೀವನಕ್ಕೆ ದಾರಿದೀಪವಾಗಿವೆ ಎಂದು ವಿಧಾನ ಪರಿಷತ್‌ ಪ್ರತಿಪಕ್ಷ ದ ...

Vijaya Karnataka 29 Nov 2018, 5:00 am
ಚಿಕ್ಕೋಡಿ : 12ನೇ ಶತಮಾನದಲ್ಲಿನ ಬಸವಾದಿ ಶಿವಶರಣರ ವಚನ ಸಾಹಿತ್ಯ ಇಂದಿಗೂ ಪ್ರತಿಯೊಬ್ಬರ ಜೀವನಕ್ಕೆ ದಾರಿದೀಪವಾಗಿವೆ ಎಂದು ವಿಧಾನ ಪರಿಷತ್‌ ಪ್ರತಿಪಕ್ಷ ದ ಮುಖ್ಯ ಸಚೇತಕ ಮಹಾಂತೇಶ ಕವಟಗಿಮಠ ಹೇಳಿದರು.
Vijaya Karnataka Web BEL-28CKD3


ಅವರು ಇಲ್ಲಿನ ಸಿಎಲ್‌ಇ ಶಿಕ್ಷ ಣ ಸಂಸ್ಥೆಯ ಆವರಣದಲ್ಲಿ ಶ್ರೀ ಸಂಪಾದನಾ ಸ್ವಾಮಿಗಳ ದ್ವಾದಶ ಪೀಠಾರೋಹಣ ಸಮಾರಂಭದ ಹಿನ್ನಲೆಯಲ್ಲಿ 45 ದಿನಗಳ ಕಾಲ ಆಯೋಜಿಸಿದ್ದ ಬಸವಪುರಾಣದ ಪುಣ್ಯ ಪ್ರಸಂಗದ ಕಲ್ಯಾಣ ಮಹೋತ್ಸವದಲ್ಲಿ ದಂಪತಿ ಸಹಿತ ಕನ್ಯಾದಾನ ಮಾಡಿ ಮಾತನಾಡಿ, ಇಂದಿನ ಯುವಕರಲ್ಲಿ ಬಸವಣ್ಣನವರ ವಿಚಾರ, ಆಚಾರ, ಸಂಸ್ಕೃತಿ ಹಾಗೂ ಮಾನವೀಯ ಮೌಲ್ಯಗಳನ್ನು ತಂದೆ, ತಾಯಿ ಬೆಳೆಸಬೇಕು ಎಂದರು.

ಸಾನ್ನಿಧ್ಯ ವಹಿಸಿದ್ದ ಜಮಖಂಡಿ ಓಲೆಮಠದ ಡಾ.ಚನ್ನಬಸವ ಸ್ವಾಮಿಗಳು ಮಾತನಾಡಿ, ಬಸವಣ್ಣನವರು ಬರೆದ ವಚನ ಸಾಹಿತ್ಯ ಅಲ್ಲಲ್ಲಿ ಹರಿದು ಹಂಚಿಹೋಗಿದ್ದವು. ಅವುಗಳನ್ನು ಸಂಗ್ರಹ ಮಾಡುವ ಮೂಲಕ ಅದಕ್ಕೊಂದು ಮುದ್ರಣ ರೂಪ ನೀಡಿದ ಶ್ರೇಯಸ್ಸು ಫ.ಗು. ಹಳಕಟ್ಟಿಯವರಿಗೆ ಸಲ್ಲುತ್ತದೆ ಎಂದರು.

ಮುದಗಲ್ಲ ತಿಮ್ಮಾಪುರ ಕಲ್ಯಾಣಾಶ್ರಮದ ಶ್ರೀ ಮಹಾಂತ ಸ್ವಾಮಿಗಳು ಬಸವಪುರಾಣದಲ್ಲಿ ಬರುವ ಪ್ರಸಂಗದಲ್ಲಿನ ಕಲ್ಯಾಣ ಮಹೋತ್ಸವ ನುಡಿಗಳನ್ನು ಹೇಳಿದರು.

ಚಿಂಚಣಿಯ ಸಿದ್ದಸಂಸ್ಥಾನ ಮಠದ ಶ್ರೀ ಅಲ್ಲಮಪ್ರಭು ಸ್ವಾಮಿಗಳು, ಚಿಕ್ಕೋಡಿಯ ಶ್ರೀ ಸಂಪಾದನಾ ಸ್ವಾಮಿಗಳು ಸಾನ್ನಿಧ್ಯ ವಹಿಸಿದ್ದರು.

ಗದಗದ ಶರಣ ಶಿವಾನಂದ ಮಂದೇವಾಲ ಸಂಗೀತ ಸೇವೆ ನೀಡಿದರು. ವಯೊಲಿನ್‌ನಲ್ಲಿ ಶಿಗ್ಗಾಂವಿಯ ಹನುಮಂತಪ್ಪ ಕಾಮನಳ್ಳಿ ಹಾಗೂ ತಬಲಾದಲ್ಲಿ ಕುಷ್ಟಗಿಯ ಪ್ರತಾಪಕುಮಾರ ಹಿರೇಮಠ ಸಾಥ್‌ ನೀಡಿದರು.

ಟಿಎಪಿಸಿಎಂಎಸ್‌ ಅಧ್ಯಕ್ಷ ಸಮಿತಿ ಸದಸ್ಯ ಜಗದೀಶ ಕವಟಗಿಮಠ ಹಾಗೂ ವೀಣಾ ಕವಟಗಿಮಠ ದಂಪತಿಯಿಂದ ಕಾಂಡ ಪೂಜೆ ನೆರವೇರಿತು.

ಮಹೇಶ ಭಾತೆ, ಎಸ್‌.ಎಸ್‌.ಕವಲಾಪುರೆ, ರಾಜಶೇಖರ ಮಿರ್ಜಿ, ಈಶಪ್ಪಾ ಹಂಪಣ್ಣನವರ, ಎನ್‌.ಎಸ್‌.ವಂಟಮುತ್ತೆ, ಪ್ರಭು ಬೆಲ್ಲದ, ವೀರಣ್ಣಾ ಪುಠಾಣಿ, ಷಡಕ್ಷ ರಿ ಮೂಗೇರಿ, ಸಂಜಯ ಕವಟಗಿಮಠ, ಶಾಂತಾದೇವಿ ಕವಟಗಿಮಠ, ರಾಜೇಶ್ವರಿ ಕವಟಗಿಮಠ, ಎಸ್‌.ಬಿ.ಪಟ್ಟೇದ, ವಿ.ಎನ್‌.ಅಂಕಲಿಮಠ, ಉಮಾ ಮೂಗೇರಿ, ಶಕುಂತಲಾ ಡೋಣವಾಡೆ, ವಿದ್ಯಾ ಸೋಲಾಪುರೆ, ಬಿ.ಎ.ಪೂಜಾರಿ, ಶೇಖರ ಚಿತ್ತವಾಡಗಿ, ಜಗದೀಶ ಉಮಾ ಮಠದ, ಶೈಲಾ ವಂಟಮುತ್ತೆ, ಮೀನಾಕ್ಷಿ ಹಿರೇಮಠ, ಸುನೀತಾ ಮಿರ್ಜಿ, ರೋಹಿಣಿ ಮಿರ್ಜಿ, ರಾಜು ಹೊನ್ನವರ, ಎಸ್‌.ಎಸ್‌.ಹಿರೇಮಠ, ಸೋಮು ಗವನಾಳೆ, ಸಾಗರ ಬಿಸ್ಕೊಪ್ಪ, ಸಮಿತಿ ಸದಸ್ಯರು, ಅಕ್ಕನ ಬಳಗ, ಕದಳಿ ವೇದಿಕೆಯ ಸದಸ್ಯರು ಉಪಸ್ಥಿತರಿದ್ದರು.
ಪ್ರಾಚಾರ್ಯ ಸುರೇಶ ಉಕ್ಕಲಿ ಸ್ವಾಗತಿಸಿ,ನಿರೂಪಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ