ಆ್ಯಪ್ನಗರ

ಗಡಿಭಾಗದ ಸರಕಾರಿ ಶಾಲೆಗಳಿಗೆ ಮೂಲ ಸೌಲಭ್ಯ

ಕಾಗವಾಡ: ಬರುವ ತಾಲೂಕಿನ ಸರಕಾರಿ ಶಾಲೆಗೆ ಮೂಲ ಸೌಲಭ್ಯ ಕಲ್ಪಿಸಲಾಗುವುದು ಎಂದು ಶಾಸಕ ಶ್ರೀಮಂತ ಪಾಟೀಲ ಭರವಸೆ ನೀಡಿದ್ದಾರೆ...

Vijaya Karnataka 2 Jul 2019, 5:00 am
ಕಾಗವಾಡ: ಬರುವ ತಾಲೂಕಿನ ಸರಕಾರಿ ಶಾಲೆಗೆ ಮೂಲ ಸೌಲಭ್ಯ ಕಲ್ಪಿಸಲಾಗುವುದು ಎಂದು ಶಾಸಕ ಶ್ರೀಮಂತ ಪಾಟೀಲ ಭರವಸೆ ನೀಡಿದ್ದಾರೆ.
Vijaya Karnataka Web BEL-01 KAGWAD 1 NEWS PHOTO


ಕಾಗವಾಡ ಮತ್ತು ಉಗಾರ ಬುದ್ರುಕ ಗ್ರಾಮದ ಸರಕಾರಿ ಪ್ರಾಥಮಿಕ ಶಾಲೆಗಳಲ್ಲಿ ಶಾಸಕ ಅನುದಾನದಲ್ಲಿ ನಿರ್ಮಿಸಲಾದ ನೂತನ ಕೊಠಡಿಗಳನ್ನು ಉದ್ಘಾಟಿಸಿ ಅವರು ಮಾತನಾಡಿ, ಗಡಿಭಾಗದಲ್ಲಿನ ಕನ್ನಡ ಉಳಿಸಿಕೊಳ್ಳಲು ಸರಕಾರ ಎಲ್ಲ ರೀತಿಯ ಸಹಕಾರ ನೀಡುತ್ತಿದೆ. ಈಗಾಗಲೇ 40 ನೂತನ ಕೋಣೆಗಳಿಗೆ ಮಂಜೂರಾತಿ ದೊರೆತಿದೆ ಎಂದರು.

ಕ್ಷೇತ್ರ ಶಿಕ್ಷ ಣಾಧಿಕಾರಿ ಎ.ಎಸ್‌. ಜೋಡಗೇರಿ ಮಾತನಾಡಿದರು. ಉಗಾರ ತಾಪಂ ಸದಸ್ಯ ವಸಂತ ಖೋತ, ಲೋಕೋಪಯೋಗಿ ಇಲಾಖೆ ಎಂಜಿನಿಯರ್‌ ಎಂ.ಎಸ್‌. ವಡೆಯರ, ಸಹಾಯಕ ಎಂಜಿನಿಯರ್‌ ಆರ್‌.ಪಿ. ಅವತಾಡೆ, ಗ್ರಾಪಂ ಅಧ್ಯಕ್ಷ ಶೈನಾಜ್‌ ಜಮಖಾನೆ, ಉಪಾಧ್ಯಕ್ಷ ಪ್ರಕಾಶ ಸಾಜನೆ, ಕಾಂಗ್ರೆಸ್‌ ಘಟಕ ಆಧ್ಯಕ್ಷ ಮಹಾದೇವ ಕೋರೆ, ದಾದಾ ಪಾಟೀಲ, ಸುಭಾಷ ಕುಸನಾಳೆ, ವಿಫುಲ ಪಾಟೀಲ, ಮುಖ್ಯಾಧ್ಯಾಪಕ ಎಂ.ಕೆ.ಪೂಜಾರಿ, ಅಣ್ಣಾಸಾಬ ಖೋತ, ಭರತ ಹೊಸೂರೆ, ರುಕ್ಮುದ್ದಿನ ಜಮಖಾನೆ, ಸಂದೀಪ ಕಾಟಕರ, ಶಿಶೀರ ಕಾಂಬಳೆ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ