ಆ್ಯಪ್ನಗರ

ರೈತನ ಮೇಲೆ ಕರಡಿ ದಾಳಿ

ಖಾನಾಪುರ (ಬೆಳಗಾವಿ): ತಾಲೂಕಿನ ಭೀಮಗಡ ಅರಣ್ಯ ವಲಯದ ಮೆಂಡಿಲ್‌ ಗ್ರಾಮದ ಬಳಿ ಹೊಲದಿಂದ ಮನೆಗೆ ಹೊರಟಿದ್ದ ರೈತ ಸೂರ್ಯಾಜಿ ಫಟ್ಟು ಪಾಟೀಲ (55) ಅವರ ಮೇಲೆ ...

Vijaya Karnataka 7 Dec 2018, 5:00 am
ಖಾನಾಪುರ (ಬೆಳಗಾವಿ) : ತಾಲೂಕಿನ ಭೀಮಗಡ ಅರಣ್ಯ ವಲಯದ ಮೆಂಡಿಲ್‌ ಗ್ರಾಮದ ಬಳಿ ಹೊಲದಿಂದ ಮನೆಗೆ ಹೊರಟಿದ್ದ ರೈತ ಸೂರ್ಯಾಜಿ ಫಟ್ಟು ಪಾಟೀಲ (55) ಅವರ ಮೇಲೆ ಗುರುವಾರ ಕರಡಿ ದಾಳಿ ಮಾಡಿ ಗಾಯಗೊಳಿಸಿದೆ.
Vijaya Karnataka Web BEL-6KHANAPUR1


ಘಟನೆಯಿಂದ ಸೂರ್ಯಾಜಿ ಅವರ ಕೈಗೆ ಗಾಯವಾಗಿದ್ದು, ತಕ್ಷಣ ಅವರು ಕರಡಿ ಕಣ್ಣಿಗೆ ಮಣ್ಣು ಸೋಕಿ ಪ್ರಾಣ ರಕ್ಷಿಸಿಕೊಂಡಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಘಟನಾ ಸ್ಥಳಕ್ಕೆ ಧಾವಿಸಿದ ಆರ್‌ಎಫ್‌ಒ ಎಸ್‌.ಎಸ್‌ ನಿಂಗಾಣಿ, ಡಿಆರ್‌ಎಫ್‌ಒ ಎಂ.ಜಿ ನಂದೆಪ್ಪಗೋಳ, ಅರಣ್ಯ ರಕ್ಷ ಕ ಎ.ಐ. ಹನಸಿ ಮತ್ತು ಅರಣ್ಯ ಇಲಾಖೆಯ ಸಿಬ್ಬಂದಿ ಸೂರ್ಯಾಜಿ ಅವರಿಗೆ ಪಟ್ಟಣದ ಸಾರ್ವಜನಿಕ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ಕೊಡಿಸಿ ಹೆಚ್ಚಿನ ಚಿಕಿತ್ಸೆಗಾಗಿ ಬೆಳಗಾವಿಯ ಜಿಲ್ಲಾ ಆಸ್ಪತ್ರೆಗೆ ಕಳಿಸಿದ್ದಾರೆ. ಸೂರ್ಯಾಜಿ ಅವರು ಪ್ರಾಣಾಪಾಯದಿಂದ ಪಾರಾಗಿ ಚೇತರಿಸಿಕೊಳ್ಳುತ್ತಿದ್ದಾರೆ ಎಂದು ಅರಣ್ಯ ಇಲಾಖೆಯ ಮೂಲಗಳು ತಿಳಿಸಿವೆ.

ಗಾಯಾಳು ಸೂರ್ಯಾಜಿ ಅವರನ್ನು ಭೇಟಿ ಮಾಡಿದ ಅರಣ್ಯ ಇಲಾಖೆಯ ಉಪ ಅರಣ್ಯ ಸಂರಕ್ಷಣಾಧಿಕಾರಿ ಎಂ.ವಿ.ಅಮರನಾಥ್‌, ಖಾನಾಪುರ ಎಸಿಎಫ್‌ ಸಿ.ಬಿ. ಪಾಟೀಲ, ಶಾಸಕಿ ಡಾ.ಅಂಜಲಿ ನಿಂಬಾಳಕರ ಮತ್ತಿತರರು ಆರೋಗ್ಯ ವಿಚಾರಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ