ಆ್ಯಪ್ನಗರ

‘ಜಾಲಿ ರೈಡ್‌’ ಮಾಡಿ ತಾಯಿ ಮಡಿಲು ಸೇರಿದ ಮಗು! ಬೆಳಗಾವಿಯಲ್ಲೊಂದು 'ಬೇಬೀಸ್ ಡೇ ಔಟ್'

ಇಂಗ್ಲೀಷ್‌ನ ಬೇಬೀಸ್ ಡೇ ಔಟ್ ಸಿನೆಮಾ ನೀವು ನೋಡಿರಬಹುದು. ಮಗುವೊಂದು ತನಗಿಷ್ಟವಾದ ಜಾಗಕ್ಕೆ ಪೋಷಕರ ನೆರವಿಲ್ಲದೆ ಏಕಾಏಕಿ ಹೊರಟು ಬಳಿಕ ಸುರಕ್ಷಿತವಾಗಿ ಮನೆಗೆ ಮರಳುತ್ತೆ. ಅಂಥದ್ದೇ ಒಂದು ಘಟನೆ ಬೆಳಗಾವಿಯಲ್ಲಿ ನಡೆದಿದೆ!

Vijaya Karnataka 14 Oct 2019, 8:24 pm
ಬೈಲಹೊಂಗಲ (ಬೆಳಗಾವಿ): ಆಕಸ್ಮಿಕವಾಗಿ ಬಸ್‌ ಏರಿ 'ಜಾಲಿ ರೈಡ್‌' ಮಾಡಿದ ಒಂದೂವರೆ ವರ್ಷದ ಮಗುವೊಂದು 35 ಕಿಮೀ ದೂರ ಪ್ರಯಾಣಿಸಿದ ಬಳಿಕ ಸಹೃದಯರು ಮತ್ತು ಸೋಷಿಯಲ್‌ ಮೀಡಿಯಾ ನೆರವಿನಿಂದ ಸುರಕ್ಷಿತವಾಗಿ ತಾಯಿಯ ಮಡಿಲು ಸೇರಿರುವ ಕುತೂಹಲಕಾರಿ ಘಟನೆ ಬೈಲಹೊಂಗಲ ಬಸ್‌ ನಿಲ್ದಾಣದಲ್ಲಿನಡೆದಿದೆ.
Vijaya Karnataka Web bus child caricature


ಗಂಡು ಮೆಟ್ಟಿದ ನಾಡಲ್ಲಿ ರೌಡಿ ಸಾಮ್ರಾಜ್ಯ! ರೌಡಿಗಳ ಹುಟ್ಟಡಗಿಸಲು ಮತ್ತೆ ಬಂತು ರೌಡಿ ನಿಗ್ರಹ ಪಡೆ

ಆಗಿದ್ದೇನು?: ಸೋಮವಾರ ಮಧ್ಯಾಹ್ನ ಧಾರವಾಡದಿಂದ ಬೈಲಹೊಂಗಲಕ್ಕೆ ಬಂದ ಕೆಎಸ್‌ಆರ್‌ಟಿಸಿ ಬಸ್‌ನಲ್ಲಿ ಮಗುವೊಂದು ತನ್ನ ಪಾಡಿಗೆ ಆಟವಾಡುತ್ತಿತ್ತು. ಇದನ್ನು ಗಮನಿಸಿದ ಪ್ರಯಾಣಿಕರೊಬ್ಬರು ಸುತ್ತಮುತ್ತ ಪಾಲಕರು ಯಾರೂ ಕಾಣಿಸದಿದ್ದಾಗ ಮಗುವನ್ನು ಬಸ್‌ ನಿಲ್ದಾಣದ ಕಂಟ್ರೋಲರ್‌ಗೆ ಒಪ್ಪಿಸಿದ್ದರು.

'ದಾಖಲೆ'ಯ ಹಾವು ಹಿಡಿದ ಸ್ನೇಕ್ ಶ್ಯಾಮ್..!

ಸಮೀಪದಲ್ಲೇ ಇದ್ದ ಆಟೋ ರಿಕ್ಷಾ ಸಂಘದವರಿಗೂ ಈ ವಿಷಯ ತಿಳಿಯಿತು. ಅವರು ಮಗುವನ್ನು ಉಪಚರಿಸಿ, ಮಗುವಿನ ಫೋಟೊ ತೆಗೆದು ಜಾಲತಾಣಗಳಿಗೆ ರವಾನಿಸಿದರು. ಕೆಲವೇ ಕ್ಷಣದಲ್ಲಿ ಮಗುವಿನ ಫೋಟೋ ವೈರಲ್‌ ಆಯಿತು. ಫೋಟೊ ಜತೆ ಹಾಕಿದ್ದ ಮೊಬೈಲ್‌ ನಂಬರ್‌ಗೆ ಕೆಲ ಹೊತ್ತಿನಲ್ಲೇ ಮಗುವಿನ ಪಾಲಕರ ಕರೆ ಬಂತು. ಮಗು ತಮ್ಮದು ಎಂದು ಅವರು ತಿಳಿಸಿದರು. ಫರ್ಹಾನ್‌ ಹೆಸರಿನ ಆ ಮಗು ಧಾರವಾಡ ಜಿಲ್ಲೆ ಉಪ್ಪಿನ ಬೆಟಗೇರಿ ಗ್ರಾಮದ್ದು ಎಂದು ಗೊತ್ತಾಯಿತು. ಪಾಲಕರಿಗೆ ಬೈಲಹೊಂಗಲ ಬಸ್‌ ನಿಲ್ದಾಣಕ್ಕೆ ಬರಲು ತಿಳಿಸಲಾಯಿತು.

ಆಟೋ ರಿಕ್ಷಾ ಚಾಲಕರ ಸಂಘದ ಅಧ್ಯಕ್ಷ ರಫೀಕ್‌ ಬಡೇಘರ, ಸದಸ್ಯರು, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಅಧಿಕಾರಿಗಳು ಹಾಗೂ ಪೊಲೀಸರ ಸಮ್ಮುಖದಲ್ಲಿ ಮಗುವನ್ನು ತಾಯಿ ಖುರ್ಷಿದಾಬಾನು ಹಳದಿ ಅವರಿಗೆ ಒಪ್ಪಿಸಲಾಯಿತು. ಬಸ್‌ ಪ್ರಯಾಣಿಕ ತೋರಿದ ಕಾಳಜಿ ಮತ್ತು ಆಟೋ ರಿಕ್ಷಾ ಸಂಘದವರ ಮಾನವೀಯತೆಯಿಂದ ಮಗು ಅಪಾಯದಿಂದ ಪಾರಾಗಿ ತಾಯಿಯ ಮಡಿಲು ಸೇರಿತು.

ಒಂದೇ ವೇದಿಕೆಯಲ್ಲಿ ಬದ್ಧವೈರಿಗಳು! ಸಿದ್ದು-ಶ್ರೀನಿವಾಸ್ ಪ್ರಸಾದ್ ಮುಖಾಮುಖಿ

ಮಗು ಬಸ್‌ ಏರಿದ್ದು ಹೇಗೆ?

ಉಪ್ಪಿನ ಬೆಟಗೇರಿ ಬಸ್‌ ನಿಲ್ದಾಣ ಪಕ್ಕದಲ್ಲೇ ಮಗು ಫರ್ಹಾನ್‌ ಮನೆ ಇದೆ. ಸೋಮವಾರ ಬೆಳಗ್ಗೆ ಅಲ್ಲೇ ಆಟವಾಡಿಕೊಂಡಿದ್ದ ಮಗು ಬೈಲಹೊಂಗಲಕ್ಕೆ ತೆರಳುವ ಬಸ್‌ ಹತ್ತಿರ ತೆರಳಿತ್ತು. ಪ್ರಯಾಣಿಕರೊಬ್ಬರು ಬಸ್‌ನೊಳಗೆ ಪಾಲಕರಿರಬಹುದು ಎಂಬ ಅಂದಾಜಿನಲ್ಲಿ ಮಗುವನ್ನು ಸಹಜವಾಗಿ ಬಸ್‌ ಹತ್ತಿಸಿದ್ದರು. ಬಸ್‌ ಏರಿದ ಮಗು ಅಲ್ಲೇ ಆಟವಾಡಿಕೊಂಡಿತ್ತು. ಬಸ್‌ ಪ್ರಯಾಣ ಆರಂಭಿಸಿದಾಗಲೂ ಮಗುವಿನ ಪಾಲಕರು ಬಸ್‌ನಲ್ಲೇ ಇರಬಹುದು ಎಂದು ತಿಳಿದ ಇತರ ಪ್ರಯಾಣಿಕರೂ ಸುಮ್ಮನಾಗಿದ್ದರು. ಹೀಗೆ ಬಸ್‌ ಏರಿದ ಮಗು ಬೈಲಹೊಂಗಲಕ್ಕೆ ಬಂದಿದೆ. ಪ್ರಯಾಣಿಕರೆಲ್ಲರೂ ಬಸ್‌ ಇಳಿದ ಬಳಿಕವೂ ಮಗು ಮಾತ್ರ ಇರುವುದನ್ನು ಗಮನಿಸಿದವರು ಅದನ್ನು ಕಂಟ್ರೋಲರ್‌ ಬಳಿ ಬಿಟ್ಟಿದ್ದರು.

‘ಹಿಂದೂ ದೇಗುಲ ಕಂಬದ ಮೇಲೆ ಮಸೀದಿ’: ಅಯೋಧ್ಯೆ ಉತ್ಖನನ ವೇಳೆ ಮುಸ್ಲಿಂ ಅಧಿಕಾರಿ ಭಾಗಿಯಾಗಿದ್ದು ಸತ್ಯ!

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ