ಆ್ಯಪ್ನಗರ

ಪ್ರವಾಹದಲ್ಲಿ 2.5 ಕಿಮೀ ಈಜಿ , ಬೆಳ್ಳಿ ಪದಕ ಗೆದ್ದ ಬೆಳಗಾವಿಯ ಬಾಕ್ಸರ್

ಕುತ್ತಿಗೆ ಮಟ್ಟದ ಪ್ರವಾಹವೂ ತಡೆಯಲಿಲ್ಲ ಈತನ ಛಲವನ್ನು. ಬಾಕ್ಸರ್ ಯಶೋಗಾಥೆ ಇದು.

TIMESOFINDIA.COM 12 Aug 2019, 12:46 pm
ಬೆಳಗಾವಿ: ದೃಢ ಸಂಕಲ್ಪವಿದ್ದರೆ ಎಂತಹ ಅಡೆತಡೆಯನ್ನು ಸಹ ದಾಟಬಹುದು ಎನ್ನುತ್ತಾರೆ. ಇದಕ್ಕೊಂದು ತಾಜಾ ನಿದರ್ಶನ ಬೆಳಗಾವಿಯ ನಿವಾಸಿ ಈ ಬಾಕ್ಸರ್. ಬಡ ರೈತನ ಮಗನಾಗಿರುವ ಈತ ಅಂತಹ ಸಂಕಷ್ಟದ ಸಮಯದಲ್ಲಿ ಕೂಡ ಛಲ ಬಿಟ್ಟಿಲ್ಲ.
Vijaya Karnataka Web Boxer


ಜಿಲ್ಲೆಯ ಮನ್ನೂರ್ ನಿವಾಸಿಯಾದ 19 ವರ್ಷದ ನಿಶಾನ್ ಮನೋಹರ್ ಕದಂ ಸಹ ಪ್ರವಾಹದಲ್ಲಿ ಸಿಲುಕಿದ್ದವರಲ್ಲಿ ಒಬ್ಬರಾಗಿದ್ದರು. ಆಗಸ್ಟ್ 7 ರಂದು ಆತನಿಗೆ ಬೆಂಗಳೂರಲ್ಲಿ ನಡೆಯಲಿದ್ದ ಬಾಕ್ಸಿಂಗ್ ಚಾಂಪಿಯನ್‌ಶಿಪ್‌ನಲ್ಲಿ ಪಾಲ್ಗೊಳ್ಳಬೇಕಿತ್ತು. ಆದರೆ ಅವರ ಮನೆ ಸೇರಿದಂತೆ ಸಂಪೂರ್ಣ ಗ್ರಾಮ ನೀರಲ್ಲಿ ಮುಳುಗಿತ್ತು. ಕತ್ತು ಮಟ್ಟದ ನೀರು ತುಂಬಿತ್ತು. ಅವರ ಊರಿಗೆ ಸಂಪರ್ಕ ಕಲ್ಪಿಸುತ್ತಿದ್ದ ಮೂರು ರಸ್ತೆಗಳು ಸಹ ಹಾನಿಯಾಗಿದ್ದವು.

ನಿಶಾನ್ ಸ್ಪರ್ಧೆಯಲ್ಲಿ ಭಾಗವಹಿಸಲೇ ಬೇಕೆಂದು ಹಠ ತೊಟ್ಟಿದ್ದ. ಮಗನ ಆಸೆಗೆ ತಣ್ಣಿರೆರೆಚಲು ಬಯಸದ ತಂದೆ ತಂದೆ ಮನೋಹರ್ ಸರಿ ಹೋಗೆಂದು ಹುರಿದುಂಬಿಸಿದರು. ಬಾಕ್ಸಿಂಗ್ ಕಿಟ್ ಅನ್ನು ಬಿಗಿಯಾಗಿ ಪ್ಲಾಸ್ಟಿಕ್‌ನಲ್ಲಿ ಸುತ್ತಿದ ತಂದೆ, ಮಗ 45 ನಿಮಿಷ, 2.5 ಕಿಮೀ ಈಜಿ ಬೆಳಗಾವಿಗೆ ಸಂಪರ್ಕ ಕಲ್ಪಿಸುವ ರಸ್ತೆ ಬಳಿ ತಲುಪಲು ಸಫಲರಾದರು.

3.45ಕ್ಕೆ ತಂದೆಯೊಂದಿಗೆ ಈಜಲು ಆರಂಭಿಸಿದ್ದ ನಿಶಾನ್ 4.3ಕ್ಕೆ ರಸ್ತೆಗೆ ತಲುಪಿದರು. ಅಂದು ರಾತ್ರಿ ಇತರ 6 ಜನರೊಂದಿಗೆ ಬೆಂಗಳೂರಿಗೆ ಹೋಗಲು ರೈಲನ್ನೇರಿದ್ದರು.

ಕೊನೆಗೂ ಬೆಂಗಳೂರು ತಲುಪಿದ ನಿಶಾನ್ ಭಾನುವಾರ ನಡೆದ ಸ್ಪರ್ಧೆಯಲ್ಲಿ ಪಾಲ್ಗೊಂಡು ಬೆಳ್ಳಿ ಪದಕವನ್ನು ಗೆದ್ದುಕೊಳ್ಳಲು ಸಫಲರಾದರು.

ನಾನು ಈ ಸ್ಪರ್ಧೆಗೆಂದು ಬಹಳ ದಿನಗಳಿಂದ ಕಾದಿದ್ದೆ. ಆದರೆ ಕಲ್ಪನೆಗೂ ಬರದ ಸಂಕಷ್ಟವೊಂದು ಎದುರಾಗಿಬಿಟ್ಟಿತು. ಪ್ರವಾಹಕ್ಕೆ ಸಿಲುಕಿದ್ದ ನಮ್ಮೂರಿಗೆ ವಾಹನಗಳು ಬರಲು ಅವಕಾಶವೇ ಇರಲಿಲ್ಲ. ಹೀಗಾಗಿ ಈಜುವುದು ಅನಿವಾರ್ಯವಾಗಿತ್ತು. ದುರಾದೃಷ್ಟದಿಂದ ನಾನು ಈ ಬಾರಿ ನಾನು ಚಿನ್ನದ ಪದಕವನ್ನು ಮಿಸ್ ಮಾಡಿಕೊಂಡೆ. ಮುಂದಿವ ವರ್ಷ ನಿಜಕ್ಕೂ ಬಂಗಾರವನ್ನು ಗೆದ್ದೇ ಗೆಲ್ಲುತ್ತೇನೆ ಎಂದವರು ಆತ್ಮವಿಶ್ವಾಸದ ಮಾತುಗಳನ್ನಾಡುತ್ತಾರೆ.

ನಿಶಾನ್ ಬೆಳಗಾವಿಯ ಜ್ಯೋತಿ ಪಿಯು ಕಾಲೇಜಿನಲ್ಲಿ ದ್ವಿತೀಯ ಪಿಯುಸಿ ಓದುತ್ತಿದ್ದಾರೆ. ಅರ್ಜುನ ಪ್ರಶಸ್ತಿ ವಿಜೇತ ಕ್ಯಾಪ್ಟನ್ ಮುಕುಂದ ಕಿಲ್ಲೇಕರ್ ಸ್ಪೋರ್ಟ್ಸ್ ಅಕಾಡೆಮಿಯಲ್ಲವರು ಕಳೆದ 2 ವರ್ಷದ ಹಿಂದೆ ಬಾಕ್ಸಿಂಗ್ ತರಬೇತಿ ಪಡೆಯಲು ಆರಂಭಿಸಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ