ಆ್ಯಪ್ನಗರ

ಬೆಳಗಾವಿ ಪಾಲಿಕೆಯಲ್ಲಿ ಹೆಚ್ಚಿದ ಚುನಾವಣಾ ಕಾವು..! ಬಿಜೆಪಿ-ಕಾಂಗ್ರೆಸ್‌ಗೆ‌ ಪ್ರತಿಷ್ಠೆ, ಎಂಇಎಸ್‌ಗೆ‌ ಹೆಣಗಾಟ

ಬೆಳಗಾವಿ ಮಹಾನಗರ ಪಾಲಿಕೆ ವಾರ್ಡ್‌ಗಳಿಗೆ ಮೀಸಲಾತಿ ಪ್ರಕಟಿಸಿ ಬೆನ್ನಲ್ಲಿಯೇ ಗಡಿಯಲ್ಲಿ ಚುನಾವಣಾ ಕಾವು ಹೆಚ್ಚಾಗಿದ್ದು, ರಾಜಕೀಯ ಪಕ್ಷಗಳಿಗೆ ಪ್ರತಿಷ್ಠೆಯಾಗಿದೆ. ಎರಡು ವರ್ಷದ ಬಳಿಕ ಚುನಾವಣೆಯ ಮೂಡ್‌ ಸೃಷ್ಟಿಯಾಗಿದ್ದು, ಗಲ್ಲಿಗಲ್ಲಿಗಳಲ್ಲಿ ಆಕಾಂಕ್ಷಿಗಳ ಓಡಾಟ ಜೋರಾಗಿದೆ.

Vijaya Karnataka Web 20 Jan 2021, 8:25 pm
ಬೆಳಗಾವಿ: ಬೆಳಗಾವಿ ಮಹಾನಗರ ಪಾಲಿಕೆ ವಾರ್ಡ್‌ಗಳಿಗೆ ರಾಜ್ಯ ಸರಕಾರ ಮೀಸಲಾತಿ ಪ್ರಕಟಿಸಿದ ಬೆನ್ನಲ್ಲೇ ನಗರದಲ್ಲಿ ಚುನಾವಣಾ ತಯಾರಿ ಚುರುಕುಗೊಂಡಿದೆ.
Vijaya Karnataka Web Belagavi City Corporation
ಬೆಳಗಾವಿ ಮಹಾನಗರ ಪಾಲಿಕೆ (ಸಂಗ್ರಹ ಚಿತ್ರ)


ಎರಡು ವರ್ಷಗಳಿಂದ ಚುನಾವಣೆ ಎದುರು ನೋಡುತ್ತಿರುವ ಆಕಾಂಕ್ಷಿಗಳಿಗೆ ಮೀಸಲಾತಿ ಪ್ರಕಟಣೆ ಮೂಲಕ ಸಿಕ್ಕ ಚುನಾವಣೆ ಮುನ್ಸೂಚನೆ ಬಾಯಾರಿದ ಬಾಯಿಗೆ ಹನಿ ನೀರು ಬಿದ್ದಂತಾಗಿದೆ. ನಗರವಾಸಿಗಳಲ್ಲಿಯೂ ಚುನಾವಣೆ ಮೂಡ್‌ ಸೃಷ್ಟಿಸಿದೆ. ಗಲ್ಲಿಗಲ್ಲಿಗಳಲ್ಲಿ ಆಕಾಂಕ್ಷಿಗಳ ಓಡಾಟ ಜೋರಾಗಿದೆ.

ಬೆಳಗಾವಿ ಮಹಾನಗರ ಪಾಲಿಕೆಯ ನಗರಸೇವಕರ ಅಧಿಕಾರ ಅವಧಿ 2019ರ ಮಾರ್ಚ್‌ನಲ್ಲಿ ಮುಕ್ತಾಯಗೊಂಡಿತ್ತು. ಅದಾದ ಬಳಿ ವಾರ್ಡ್‌ ವಿಂಗಡನೆ ಆಗಿದ್ದರಿಂದ ಅದನ್ನು ಆಕ್ಷೇಪಿಸಿ ಕೆಲವರು ನ್ಯಾಯಾಲಯದ ಮೊರೆ ಹೋಗಿದ್ದರು. ಶೀಘ್ರದಲ್ಲಿ ನ್ಯಾಯಾಲಯ ಚುನಾವಣೆ ಮುಗಿಸುವಂತೆ ಸೂಚನೆ ನೀಡಿದ್ದರಿಂದ ರಾಜ್ಯ ಸರಕಾರ ವಾರ್ಡ್‌ಗಳಿಗೆ ಮೀಸಲಾತಿ ಪ್ರಕಟಿಸಿ ಆಕ್ಷೇಪಣೆ ಆಹ್ವಾನಿಸಿದೆ. ಈ ಎಲ್ಲ ಪ್ರಕ್ರಿಯೆ ಮುಗಿಯುತ್ತಿದ್ದಂತೆಯೇ ಚುನಾವಣೆ ಹಾದಿ ಸುಗಮ ಆಗಲಿದೆ.

ಆದರೆ, ಇದರ ನಡುವೆಯೇ ಬೆಳಗಾವಿ ಲೋಕಸಭೆ ಚುನಾವಣೆ ನಡೆಯಬೇಕಿದೆ. ರಾಜ್ಯದಲ್ಲಿ ತಾಲೂಕು ಪಂಚಾಯಿತಿ, ಜಿಲ್ಲಾ ಪಂಚಾಯಿತಿ ಚುನಾವಣೆ ನಡೆಯಬೇಕಿದೆ. ಹಾಗಾಗಿ ಚುನಾವಣೆ ಗುಂಗು ನಿಧಾನವಾಗಿ ಏರುತ್ತಿದೆ.
ಕನ್ನಡದ ನೆಲದಲ್ಲಿ ನಿಂತು ದ್ರೋಹ ಬಗೆಯೋ ನಾಡದ್ರೋಹಿಗಳ ಬಾಯಿಗೆ ಬೀಗ ಹಾಕೋರು ಯಾರು?ಪಕ್ಷಗಳ ಚಾಲೆಂಜ್‌
ಬೆಳಗಾವಿ ಪಾಲಿಕೆ ಚುನಾವಣೆ ಎದುರು ನೋಡುತ್ತಿರುವ ಆಕಾಂಕ್ಷಿಗಳಿಗೆ ಈ ಬಾರಿ ರಾಜಕೀಯ ಪಕ್ಷಗಳು ಮತ್ತು ವಿವಿಧ ಸಂಘಟನೆಗಳ ಅಭ್ಯರ್ಥಿಗಳ ಸವಾಲು ಎದುರಿಸುವ ಸಂದರ್ಭ ಎದುರಾಗಲಿದೆ. ಬೆಳಗಾವಿ ಚುನಾವಣೆಯಲ್ಲಿ ಅಭ್ಯರ್ಥಿಗಳನ್ನು ಕಣಕ್ಕಿಳಿಸುವ ಬಗ್ಗೆ ಬಿಜೆಪಿ ಈಗಾಗಲೇ ಬಹಿರಂಗವಾಗಿ ಹೇಳಿಕೊಂಡಿದೆ. ಹಾಗಾಗಿ ಈ ವಿಚಾರದಲ್ಲಿಯೂ ರಾಜಕೀಯ ಪಕ್ಷಗಳ ಕಾರ್ಯಕರ್ತರು ಚುನಾವಣೆಯ ಕನಸು ಕಾಣುತ್ತಿದ್ದಾರೆ. ಆ ನಿಟ್ಟಿನಲ್ಲಿ ಮತದಾರರು ಗುಡ್ಡೆ ಹಾಕಿಕೊಳ್ಳುವ, ಮನವೊಲಿಸಿಕೊಳ್ಳುವ ತಯಾರಿ ತೆರೆಮರೆಯಲ್ಲಿ ಶುರುವಾಗಿದೆ.
ಬಿಜೆಪಿ ಜನಸೇವಕ ಸಮಾರೋಪದಲ್ಲಿ ಕೋವಿಡ್‌ ಮಾರ್ಗಸೂಚಿ ಉಲ್ಲಂಘನೆ: ಎಫ್ಐಆರ್ ಗೆ ಆಗ್ರಹ!ಎಂಇಎಸ್‌ ಹೆಣಗಾಟಬೆಳಗಾವಿ ಪಾಲಿಕೆ ಚುನಾವಣೆ ಪ್ರಕ್ರಿಯೆ ಶುರುವಾಗುತ್ತಿದ್ದಂತೆ ನಿರೀಕ್ಷೆಯಂತೆ ಶಿವಸೇನೆ ಭಾಷೆ ವಿಷಯದಲ್ಲಿ ಉದ್ಧಟತನ ಮಾಡಿ ಮರಾಠಿಗರನ್ನು ರಾಜಕೀಯವಾಗಿ ಬಳಸಿಕೊಳ್ಳಲು ಯತ್ನಿಸುತ್ತಿದೆ. ಕೊನೆಯಾಗುತ್ತಿದ್ದ ಎಂಇಎಸ್‌ ಕೂಡ ಇದರಿಂದ ಜೀವ ಉಳಿಸಿಕೊಳ್ಳಲು ಹೆಣಗಾಟಕ್ಕೆ ಮುಂದಾಗಿದೆ. ಉದ್ಧವ್‌ ಠಾಕ್ರೆ ಗಡಿ ಹೇಳಿಕೆ ಹಾಗೂ ಅದಕ್ಕೆ ಇಲ್ಲಿನ ಎಂಇಎಸ್‌ ನಾಯಕರ ಪ್ರತಿಕ್ರಿಯೆಯನ್ನು ಚುನಾವಣೆ ಹಿನ್ನೆಲೆಯಲ್ಲೇ ವಿಶ್ಲೇಷಿಸಲಾಗುತ್ತಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ