ಆ್ಯಪ್ನಗರ

ಸರ್ಕಾರ ದಿವಾಳಿಯಾಗಿದೆ ಎಂದ ಸಿದ್ದುಗೆ 'ಹಳದಿ ಕಣ್ಣು': ರಮೇಶ್‌ ಜಾರಕಿಹೊಳಿ ಟಾಂಗ್

ಬೆಳಗಾವಿ ಜಿಲ್ಲೆಯ ನೂತನ ಉಸ್ತುವಾರಿ ಸಚಿವರಾದ ಬಳಿಕ ಕೊರೊನಾ ವೈರಸ್ ಹಾಗೂ ಪ್ರವಾಹ ಕುರಿತಂತೆ ಮೊದಲ ಬಾರಿಗೆ ಅಧಿಕಾರಿಗಳ ಸಭೆ ನಡೆಸಿದರು ರಮೇಶ್‌ ಜಾರಕಿಹೊಳಿ. ಸಭೆ ಬಳಿಕ ರಾಜಕೀಯದ ಕುರಿತಾಗಿ ಸಾಕಷ್ಟು ಮಾತುಗಳನ್ನು ಆಡಿದ್ದಾರೆ.

Vijaya Karnataka Web 5 Jun 2020, 4:24 pm
ಬೆಳಗಾವಿ: ಮಾಜಿ ಸಿಎಂ ಸಿದ್ದರಾಮಯ್ಯ ಅವರ ಕಣ್ಣು ಹಳದಿ ಎಂದು ಬೆಳಗಾವಿ ಜಿಲ್ಲೆಯ ನೂತನ ಉಸ್ತುವಾರಿ ಸಚಿವ ರಮೇಶ್‌ ಜಾರಕಿಹೊಳಿ ಟಾಂಗ್ ಕೊಟ್ಟಿದ್ದಾರೆ. ರಾಜ್ಯ ಸರ್ಕಾರ ಆರ್ಥಿಕ ದಿವಾಳಿಯಾಗಿದೆ ಎಂಬ ಸಿದ್ದರಾಮಯ್ಯನವರ ಹೇಳಿಕೆಗೆ ತಿರುಗೇಟು ನೀಡಿದ ರಮೇಶ್‌ ಜಾರಕಿಹೊಳಿ, ಅವರ ಕಣ್ಣು ಹಳದಿಯಾಗಿದೆ, ಹಾಗೇ ನೋಡಲಿ ಬಿಡಿ ಎಂದರು.
Vijaya Karnataka Web siddu ramesh
ಸರ್ಕಾರ ದಿವಾಳಿಯಾಗಿದೆ ಎಂದ ಸಿದ್ದುಗೆ 'ಹಳದಿ ಕಣ್ಣು': ರಮೇಶ್‌ ಜಾರಕಿಹೊಳಿ ಟಾಂಗ್


ಸಿದ್ದರಾಮಯ್ಯನವರು ಮಹಾನ್ ನಾಯಕರು. ಅವರ ಬಗ್ಗೆ ನನಗೆ ಗೌರವವಿದೆ ಎಂದೂ ರಮೇಶ್‌ ಜಾರಕಿಹೊಳಿ ಹೇಳಿದ್ದಾರೆ. ಇನ್ನು ಬಿಜೆಪಿ ಶಾಸಕರ ಜೊತೆಗಿನ ಸಿದ್ದು ಭೇಟಿ ಕುರಿತಾಗಿ ಅವರು ಏನು ಹೇಳಿದ್ದಾರೋ ನನಗೆ ಗೊತ್ತಿಲ್ಲ ಎಂದು ಈ ಬಗ್ಗೆ ಪ್ರತಿಕ್ರಿಯೆ ನೀಡಲು ಸಚಿವ ರಮೇಶ ಜಾರಕಿಹೊಳಿ ನಿರಾಕರಿಸಿದರು.

ಕೋವಿಡ್ ಮತ್ತು ಪ್ರವಾಹ ಕುರಿತ ಅಧಿಕಾರಿಗಳ ಸಭೆ ಬಳಿಕ ಮಾತನಾಡಿದ ಅವರು, ಈ ಮುನ್ನ ಜಗದೀಶ್ ಶೆಟ್ಟರ್ ಬೆಳಗಾವಿ ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದಾಗಲೂ ನಾನೇ ಉಸ್ತುವಾರಿ ಇದ್ದೆ. ಈಗ ನಾನೇ ಆಗಿರುವುದರಿಂದ ಅಷ್ಟೊಂದು ಬದಲಾವಣೆಯೇನೂ ಆಗಿಲ್ಲ ಎಂದರು. ಕಳೆದ ಬಾರಿ ಪ್ರವಾಹದಿಂದ ಆದ ತಪ್ಪು ಸರಿಪಡಿಸಲು ಸಭೆಯಲ್ಲಿ ಹೇಳಿರುವೆ ಎಂದು ಮಾಹಿತಿ ನೀಡಿದ ರಮೇಶ್‌ ಜಾರಕಿಹೊಳಿ, ತಮ್ಮ ಸಹೋದರ ಸತೀಶ್ ಜಾರಕಿಹೊಳಿ ಸೇರಿದಂತೆ ಯಾರೇ ಒಳ್ಳೆಯ ಸಲಹೆ ಕೊಟ್ಟರೂ ಅದನ್ನು ಪರಿಗಣಿಸಿ ಕೆಲಸ ಮಾಡುತ್ತೇನೆ ಎಂದರು. ಇದೇ ವೇಳೆ, ನೇಕಾರರ ಸಮಸ್ಯೆಗೆ ಸ್ಪಂದಿಸಲು ಕೇಂದ್ರ ಸಚಿವರ ನೇತೃತ್ವದಲ್ಲಿ ಸಿಎಂ ಭೇಟಿ ಮಾಡಿ ಪರಿಶೀಲನೆ ಮಾಡುವೆ ಎಂದೂ ಭರವಸೆ ನೀಡಿದರು.

ಉದ್ಯಮಿಗಳ ಸಾಲ ಮನ್ನಾ ಮಾಡಿರುವ ಮೋದಿಗೆ ರೈತರ ಸಾಲ ಕಾಣುತ್ತಿಲ್ಲವೆ? ; ಪ್ರಧಾನಿಗೆ ಸಿದ್ದು ಗುದ್ದು..!

ರಾಜ್ಯಸಭಾ ಚುನಾವಣೆ ವಿಚಾರ

ರಾಜ್ಯಸಭೆಗೆ ಅಭ್ಯರ್ಥಿ ಆಯ್ಕೆ ಸಂಬಂಧ ನಮ್ಮ‌ ಅನಿಸಿಕೆಯನ್ನ ಪಕ್ಷದ ನಾಯಕರಿಗೆ ಹೇಳಿದ್ದೇವೆ. ಅದನ್ನ ನಾನು ಬಹಿರಂಗವಾಗಿ ಹೇಳುವುದಿಲ್ಲ ಎಂದರು. ರಾಜ್ಯಸಭೆಗೆ ಯಾರನ್ನ ಆಯ್ಕೆ ಮಾಡಬೇಕು ಅನ್ನೋದನ್ನ ಬಿಜೆಪಿ ತೀರ್ಮಾನ ಮಾಡಲಿದೆ ಎಂದ ಜಾರಕಿಹೊಳಿ, ಬಿಜೆಪಿ ಮಾಡುವ ನಿರ್ಧಾರಕ್ಕೆ ನಾನು ಬದ್ಧನಾಗಿರುವೆ ಎಂದರು.

ಸಿದ್ದರಾಮಯ್ಯ ಮತ್ತೆ ಸಿಎಂ ಆಗಲು ಡಿಕೆಶಿ ಬಿಡುವುದಿಲ್ಲ: ನಳಿನ್‌ ಕುಮಾರ್‌ ಕಟೀಲ್‌

ಬಂಡಾಯದ ಕುರಿತಂತೆ ಕೇಳಿದ ಪ್ರಶ್ನೆಗೆ ಉತ್ತರಿಸಿದ ಸಚಿವ ರಮೇಶ್‌ ಜಾರಕಿಹೊಳಿ, ಸಿಎಂ ಯಡಿಯೂರಪ್ಪ ಮೊದಲಿನಿಂದಲೂ ಹೋರಾಟ ಮಾಡಿಕೊಂಡು ಬಂದವರು. ಈ ರೀತಿಯ ಸಮಸ್ಯೆಗಳಿಗೆ ಬಿಎಸ್‌ವೈ ಅಂಜುವುದಿಲ್ಲ ಎಂದರು. ಉಮೇಶ್ ಕತ್ತಿ ಡಿನ್ನರ್ ಪಾರ್ಟಿ ಮಾಡಿದ್ದಾರೆ ಹೊರತು, ಅದು ಬಂಡಾಯವಲ್ಲ ಎಂದು ಹೇಳಿದ ಜಾರಕಿಹೊಳಿ, ಹೊಟೇಲ್ ಬಂದ್ ಇದ್ದ ಕಾರಣ ಶಾಸಕರು ಅಲ್ಲಿ ಊಟ ಮಾಡಿದ್ದಾರೆ ಅಷ್ಟೇ ಎಂದರು. ನಾಲ್ಕು ಜನ ಶಾಸಕರು ನಮ್ಮ ಮನೆಗೆ ಬಂದು ಊಟ ಮಾಡಿದ ಮಾತ್ರಕ್ಕೆ ಅದನ್ನು ಬಂಡಾಯ ಅಂದ್ರೆ ನಾವೇನು ಮಾಡೋಣಾ ಎಂದು ಕೇಳಿದ ರಮೇಶ್‌ ಜಾರಕಿಹೊಳಿ, ಬೆಳಗಾವಿ ಜಿಲ್ಲೆಯ ಮೂವರು ಕಾಂಗ್ರೆಸ್ ಶಾಸಕರು ನನ್ನ ಸಂಪರ್ಕದಲ್ಲಿ ಇದ್ದಾರೆ ಎಂದರು.

ಸಿದ್ದರಾಮಯ್ಯ ಅವರು ದಿವಾಳಿತನ ಮನಃಸ್ಥಿತಿ ತೋರುತ್ತಿದ್ದಾರೆ: ಪ್ರಹ್ಲಾದ್‌ ಜೋಷಿ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ