ಆ್ಯಪ್ನಗರ

ಪ್ರವಾಹದ ಪಾಲಾಯ್ತು ಬದುಕು: ಆತ್ಮಹತ್ಯೆಗೆ ಯತ್ನಿಸಿದ ಮತ್ತೊಬ್ಬ ನೆರೆ ಸಂತ್ರಸ್ತ

ಇಡೀ ಬದುಕೇ ಪ್ರವಾಹದಲ್ಲಿ ಕೊಚ್ಚಿ ಹೋಗಿರುವಾಗ, ಪ್ರವಾಹ ಸಂತ್ರಸ್ತರಿಗೆ ಸರ್ಕಾರವೇ ದಿಕ್ಕು. ಇಂಥಾ ಹೊತ್ತಲ್ಲಿ ಸರ್ಕಾರವೂ ಸ್ಪಂದಿಸದೇ ಇದ್ದರೆ ದೇವರೇ ದಿಕ್ಕು! ಹೀಗಾಗಿ, ಪ್ರವಾಹ ಸಂತ್ರಸ್ತರ ಆತ್ಮಹತ್ಯಾ ಸರಣಿ ಮುಂದುವರೆದಿದೆ. ಇದಕ್ಕೆ ಬ್ರೇಕ್ ಹಾಕಬೇಕಾದ ಸರ್ಕಾರ ಏನ್ಮಾಡ್ತಿದೆ ಅನ್ನೋದೇ ಸದ್ಯದ ಪ್ರಶ್ನೆ.

Vijaya Karnataka Web 10 Oct 2019, 3:46 pm
ಬೆಳಗಾವಿ: ನೆರೆ ಪರಿಹಾರ ಸಿಗದ ಹಿನ್ನಲೆಯಲ್ಲಿ ಪ್ರವಾಹ ಸಂತ್ರಸ್ತನೊಬ್ಬ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ ಘಟನೆ ಕಾಗವಾಡ ತಾಲೂಕಿನ ಜೂಗುಳ ಪಂಚಾಯತಿಯಲ್ಲಿ ನಡೆದಿದೆ. 35 ವರ್ಷದ ರವೀಂದ್ರ ಗುಣಕೆ ಎಂಬಾತ ಆತ್ಮಹತ್ಯೆಗೆ ಯತ್ನಿಸಿದ ವ್ಯಕ್ತಿ. ಇವರನ್ನು ಸ್ಥಳೀಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.
Vijaya Karnataka Web flood victim suicide


ನೆರೆ ಸಂತ್ರಸ್ತರಿಗಾಗಿ ಬೀದಿಗಿಳಿದ ಜೆಡಿಎಸ್: ಅಧಿವೇಶನದಲ್ಲೂ ಹೋರಾಟದ ಎಚ್ಚರಿಕೆ ನೀಡಿದ ಎಚ್ಡಿಕೆ

ಗ್ರಾಮ ಪಂಚಾಯಿತಿ ಸಿಬ್ಬಂದಿ ಸರಿಯಾದ ಸಮೀಕ್ಷೆ ಮಾಡುತ್ತಿಲ್ಲ. ಸರ್ಕಾರದಿಂದ ಪರಿಹಾರ ಸಹ ಬರುತ್ತಿಲ್ಲ ಎಂದು ಗ್ರಾಮ ಪಂಚಾಯಿತಿಗೆ ಹೋಗಿದ್ದ. ಪಂಚಾಯಿತಿ ಸಿಬ್ಬಂದಿ ಸರಿಯಾಗಿ ಸ್ಪಂದಿಸದ ಕಾರಣಕ್ಕೆ ಅಲ್ಲಿಯೇ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಾನೆ ಎಂದು ಸ್ಥಳೀಯರು ತಿಳಿಸಿದ್ದಾರೆ.

ರಾಜ್ಯದ ನೆರೆ ಸಂತ್ರಸ್ತರ ಬದುಕು ಮೂರಾಬಟ್ಟೆಯಾಗಿದೆ. ತಾತ್ಕಾಲಿಕ ಪ್ರವಾಹ ಪರಿಹಾರ ರೂಪದಲ್ಲಿ ಪ್ರತಿ ಕುಟುಂಬಕ್ಕೆ 10 ಸಾವಿರ ರೂ. ನೀಡಲಾಗಿದೆ. ಆದ್ರೆ, ಮನೆ, ಬೆಳೆ, ಜಾನುವಾರು ಕಳೆದುಕೊಂಡ ಜನರಿಗೆ ಪೂರ್ಣ ಪ್ರಮಾಣದ ಪರಿಹಾರ ಇನ್ನೂ ಗಗನ ಕುಸುಮವಾಗಿದೆ. ಕೇಂದ್ರ ಸರ್ಕಾರ ನೀಡಿರುವ 1200 ಕೋಟಿ ರೂ. ಮಧ್ಯಂತರ ಪರಿಹಾರ, ಬಕಾಸುರನ ಹೊಟ್ಟೆಗೆ ಅರೆಕಾಸಿನ ಮಜ್ಜಿಗೆ ಎನ್ನುವಂತಾಗಿದೆ.

ಇದೀಗ ವಿಧಾನಮಂಡಲ ಅಧಿವೇಶನದಲ್ಲೂ ಪ್ರವಾಹ ಪರಿಹಾರದ ವಿಚಾರವೇ ಸದ್ದು ಮಾಡಲಿದೆ. ಆದ್ರೆ, ಪ್ರವಾಹ ಪರಿಹಾರದ ವಿಚಾರಕ್ಕಿಂತಾ ಕಾಂಗ್ರೆಸ್ ನಾಯಕರ ಮೇಲೆ ನಡೆದ ಐಟಿ ದಾಳಿಯೇ ಮುನ್ನಲೆಗೆ ಬಂದಿದೆ. ಇದರ ಮಧ್ಯೆಯೂ ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸಲು ಕಾಂಗ್ರೆಸ್ ನಿರ್ಧರಿಸಿದೆ. ಅಧಿವೇಶನಕ್ಕೂ ಮುನ್ನ ಜೆಡಿಎಸ್‌ ಬೆಂಗಳೂರಿನಲ್ಲಿ ಬೀದಿಗಳಿದು ಹೋರಾಟ ನಡೆಸಿತು. ಇದೇ ಹೋರಾಟವನ್ನು ಸದನದ ಒಳಗೂ ಮುಂದುವರೆಸುವ ಭರವಸೆಯನ್ನೂ ಜೆಡಿಎಸ್ ನೀಡಿದೆ.

ಶಾಸಕರು ಬಾರದ ಸುವರ್ಣ ಸೌಧದಲ್ಲಿ ಕುರಿಗಳ ಅಧಿವೇಶನ! ವಾಟಾಳ್ ಯತ್ನಕ್ಕೆ ಖಾಕಿ ಬ್ರೇಕ್

ಇವೆಲ್ಲಾ ಏನೇ ಇರಲಿ, ಪ್ರವಾಹದಿಂದ ತಮ್ಮದೆಲ್ಲವನ್ನೂ ಕಳೆದುಕೊಂಡ ಸಂತ್ರಸ್ತರ ನೆರವಿಗೆ ಸರ್ಕಾರ ಧಾವಿಸಬೇಕಿದೆ. ಅಧಿಕಾರಿಗಳೂ ಕೂಡಾ ಸಂತ್ರಸ್ತರ ನೋವನ್ನು ಮಾನವೀಯತೆಯಿಂದ ಆಲಿಸಬೇಕಿದೆ. ಈ ಮೂಲಕ, ಪ್ರವಾಹ ಸಂತ್ರಸ್ತರ ಆತ್ಮಹತ್ಯಾ ಸರಣಿಗೆ ಬ್ರೇಕ್ ಬೀಳಬೇಕಿದೆ.

ಪರಂ, ಜಾಲಪ್ಪಗೆ ಐಟಿ ಶಾಕ್! ಅಧಿವೇಶನದ ಹೊತ್ತಲ್ಲೇ 'ಕೈ' ಕಟ್, ಬಾಯ್ ಮುಚ್?

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ