ಆ್ಯಪ್ನಗರ

ನಾಯಿ ಉಪಟಳ ತಡೆಯಲು ಕೆನ್ನೀರು ಬಾಟಲಿ ಪ್ರಯೋಗ!

ನಾಯಿ ಮಾಡುವ ಹೇಸಿಗೆಯನ್ನು ತಪ್ಪಿಸಲು ಬೆಳಗಾವಿ ಭಾಗದ ಜನತೆ ಹೊಸ ಐಡಿಯಾ ಕಂಡುಕೊಂಡಿದ್ದಾರೆ. ಮನೆಯ ಮುಂದೆ ಕೆನ್ನೀರು ಬಾಟಲಿ ಇಟ್ಟು ನಿಟ್ಟುಸಿರು ಬಿಡುತ್ತಿದ್ದಾರೆ. ಇದು ಈಗ ಇತರ ಕೇರಿಗಳು ಹಬ್ಬಿದೆ.

Vijaya Karnataka Web 22 Nov 2019, 10:30 am
ಸರಳಾ ಸಾತ್ಪುತೆ
Vijaya Karnataka Web dog

ಬೆಳಗಾವಿ:
‘‘ಉಪ್ಪರಗಿ ಮ್ಯಾಲ ಕೂರಿಸಿದ್ರೂ ನಾಯಿ ತನ್ನ ಬುದ್ದಿ ಬಿಡೋದಿಲ್ಲ’’ ಎಂದು ಗೊಣಗಾಡುತ್ತಾ ಮನೆ ಮುಂದೆ ನಾಯಿಗಳು ಮಾಡುವ ಹೇಸಿಗೆಯನ್ನು ಸ್ವಚ್ಛ ಮಾಡುತ್ತಿದ್ದ ಬೆಳಗಾವಿ ಮಂದಿ ಇದೀಗ ಹೊಸ ಐಡಿಯಾ ಕಂಡುಕೊಂಡಿದ್ದಾರೆ.

ಮನೆಯ ಮುಂದೆ ಕುಂಕುಮ ಮಿಶ್ರಿತ ನೀರಿನ ಬಾಟಲ್‌ ಇಟ್ಟು ನಿಟ್ಟುಸಿರು ಬಿಟ್ಟಿದ್ದಾರೆ. ಇದನ್ನು ಕಂಡವರು ತಮ್ಮ ಊರು ಕೇರಿಗಳಲ್ಲಿಇದೇ ಪ್ರಯೋಗ ಮಾಡುತ್ತಿದ್ದಾರೆ.

ನೊಣದಿಂದ ನಾಯಿ ತನಕ ‘‘ಯಳ್ಳೂರ, ಧಾಮಣೆಯಿಂದ ಈ ಸನ್ನಿ ಆರಂಭವಾಗಿದೆ’’, ಎನ್ನುವ ವಡಗಾವಿ ಪಶು ಚಿಕಿತ್ಸಾಲಯದ ಮುಖ್ಯ ವೈದ್ಯಾಧಿಕಾರಿ ಡಾ. ವಿನಯಕುಮಾರ ಸಂಗ್ರೋಳೆ, ‘‘ಸದ್ಯ ರಾಜಹಂಸಗಡ, ನಂದಿಹಳ್ಳಿ, ನಾಗೇನಹಟ್ಟಿ ವರೆಗೂ ಈ ಸನ್ನಿ ಹರಡಿದೆ’’, ಎನ್ನುತ್ತಾರೆ.

ವಡಗಾವಿ, ಖಾಸಬಾಗ ಪ್ರದೇಶಗಳಲ್ಲಂತೂ ಎಲ್ಲರೂ ಈ ಪ್ರಯೋಗ ಮಾಡುತ್ತಿದ್ದಾರೆ. ಮೊದಮೊದಲು ಹಳ್ಳಿಗಳಲ್ಲಿ ನೊಣಗಳ ಕಾಟ ತಪ್ಪಿಸಲು ಕುಂಕುಮ ಮಿಶ್ರಣದ ನೀರನ್ನು ಬಾಟಲಿಗಳಲ್ಲಿ ತುಂಬಿಡಲು ಆರಂಭಿಸಿದ ಜನ, ಈಗ ನಾಯಿ ಹೇಸಿಗೆ ಮಾಡುವುದನ್ನು ತಪ್ಪಿಸಲೂ ಈ ಮಾರ್ಗೋಪಾಯ ಕಂಡುಕೊಂಡಿದ್ದಾರೆ.

ಇದು ಪೆಟ್ರೋಲ್‌ ಎಂದು ತಿಳಿದು ನಾಯಿಗಳು ಓಡಿ ಹೋಗುತ್ತವೆ ಎಂಬುದು ಕಲರ್‌ ನೀರು ತುಂಬಿಸಿಡುತ್ತಿರುವವರ ಜಾಣ ತರ್ಕ. ಬಣ್ಣದ ನೀರು ನೋಡಿ ನಾಯಿ ಹೇಸಿಗೆ ಮಾಡೋದಿಲ್ಲಎಂಬುದಕ್ಕೆ ಯಾವುದೇ ಲಾಜಿಕ್‌ ಇಲ್ಲಎನ್ನುತ್ತಾರೆ ಪಶು ತಜ್ಞರು. ಆದರೆ ಈ ಪ್ರಯೋಗಕ್ಕೆ ಮಾರು ಹೋಗಿರುವ ಮಂದಿ ಇದನ್ನು ಒಪ್ಪುತ್ತಿಲ್ಲ. ನೀರ ಇಟ್ಟಮೇಲೆ ನಮ್ಮ ಮನೆ ಅಂಗಣ ಶುಚಿಯಾಗಿದೆ ಎಂದು ದೃಢವಾಗಿ ಹೇಳುತ್ತಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ