ಬೆಳಗಾವಿ: ರೈಲ್ವೆ ಖಾತೆ ರಾಜ್ಯ ಸಚಿವ ಸುರೇಶ್ ಅಂಗಡಿ ನಿಧನದಿಂದ ತೆರವಾಗಿರುವ ಬೆಳಗಾವಿ ಲೋಕಸಭೆ ಕ್ಷೇತ್ರದಲ್ಲಿ ಉಪ ಚುನಾವಣೆ ನಡೆಯಬೇಕಿದೆ. ಇದಕ್ಕಾಗಿ ಶೋಕಾಚರಣೆ ಮುಗಿಯುವ ಮುಂಚೆಯೇ ಪೈಪೋಟಿ ಆರಂಭವಾಗಿದೆ! ಟಿಕೆಟ್ಗಾಗಿ ಅಭ್ಯರ್ಥಿಗಳು ಹಾತೊರೆಯುತ್ತಿದ್ದಾರೆ. ಶೋಕಾಚರಣೆ ನಡುವೆಯೇ ಅಭ್ಯರ್ಥಿಗಳ ಹೆಸರು ಹರಿಬಿಟ್ಟು ಪೈಪೋಟಿ ಆರಂಭಿಸಿರೋದು, ತೀವ್ರ ಚರ್ಚೆಗೆ ಕಾರಣವಾಗಿದೆ. ಸುರೇಶ್ ಅಂಗಡಿ ಅವರು ರೈಲ್ವೆ ಖಾತೆ ರಾಜ್ಯ ಸಚಿವ ಸ್ಥಾನ ಪಡೆದ ಬಳಿಕ ಮಹತ್ವದ ಯೋಜನೆಗಳಿಗೆ ಗ್ರೀನ್ ಸಿಗ್ನಲ್ ಪಡೆದುಕೊಳ್ಳುವಲ್ಲಿ ಯಶಸ್ವಿಯಾಗಿದ್ದರು. ಈ ಕಾರಣದಿಂದ ಬೆಳಗಾವಿ ಲೋಕಸಭಾ ಕ್ಷೇತ್ರದ ಸದಸ್ಯ ಸ್ಥಾನಕ್ಕೆ ವಿಶೇಷ ಮಹತ್ವವಿದೆ.
ಬಿಜೆಪಿಯಲ್ಲಿ ಆಕಾಂಕ್ಷಿಗಳ ಸಂಖ್ಯೆ ಹನುಮಂತನ ಬಾಲದಂತೆ ಬೆಳೆಯುತ್ತಿದ್ದರೆ, ಕಾಂಗ್ರೆಸ್ನಲ್ಲೂ ಒಳಒಳಗೇ ಮಾತುಕತೆ ನಡೆಯುತ್ತಿದೆ. ಸುರೇಶ್ ಅಂಗಡಿ ನಿಧನದ ಸುದ್ದಿ ತಿಳಿಯುತ್ತಿದ್ದಂತೆಯೇ ಬಿಜೆಪಿಯ ಕೆಲ ಮುಖಂಡರು ಸುರೇಶ ಅಂಗಡಿ ಅವರ ಮನೆ ಬಾಗಿಲಲ್ಲಿ ನಿಂತು ಉಪ ಚುನಾವಣೆಗೆ 'ನಾನು ರೆಡಿ' ಎಂಬ ಸಂದೇಶ ನೀಡಿದ್ದಾರೆ.
ಸುರೇಶ್ ಅಂಗಡಿ ಅಂತ್ಯಕ್ರಿಯೆ ವಿಡಿಯೋ ವೈರಲ್: ಮರುಗಿದ ನಟ ಜಗ್ಗೇಶ್
ಈ ಮೊದಲು ಅಂತರ ಕಾಯ್ದುಕೊಂಡಿದ್ದ ಕಾರ್ಯಕರ್ತರನ್ನು ತಮ್ಮ ಬಳಿ ಕರೆದು ಆತ್ಮೀಯವಾಗಿ ಮಾತುಕತೆ ನಡೆಸಲಾರಂಭಿಸಿದ್ದಾರೆ. ಆದರೆ, ಇತ್ತೀಚಿನ ಬೆಳವಣಿಗೆಗಳಲ್ಲಿ ಬಿಜೆಪಿ ವರಿಷ್ಠರು ಅಭ್ಯರ್ಥಿಗಳ ಆಯ್ಕೆ ವಿಚಾರದಲ್ಲಿ ಆಶ್ಚರ್ಯಕರ ಹೆಜ್ಜೆ ಇಟ್ಟಿರುವುದು ಆಕಾಂಕ್ಷಿಗಳ ಬಹಿರಂಗ ಪೈಪೋಟಿಗೆ ದೊಡ್ಡ ಅಡ್ಡಿಯಾಗುತ್ತಿದೆ.
ಕೇಳಿ ಬರುತ್ತಿರುವ ಹೆಸರುಗಳು..
ಬೆಳಗಾವಿ ಗ್ರಾಮೀಣ ಕ್ಷೇತ್ರದ ಮಾಜಿ ಶಾಸಕ ಸಂಜಯ ಪಾಟೀಲ, ಬೈಲಹೊಂಗಲದ ಮಾಜಿ ಶಾಸಕ ಡಾ.ವಿ.ಐ. ಪಾಟೀಲ, ಉದ್ಯಮಿ ಶಶಿಕಾಂತ ಸಿದ್ನಾಳ, ನ್ಯಾಯವಾದಿಗಳಾದ ಎಂ.ಬಿ.ಝಿರಲಿ, ರಮೇಶ ದೇಶಪಾಂಡೆ ಹೆಸರುಗಳು ಹರಿದಾಡುತ್ತಿದ್ದರೆ, ರಾಜ್ಯ ಸರಕಾರದ ದೆಹಲಿ ಪ್ರತಿನಿಧಿಯಾಗಿರುವ ಶಂಕರಗೌಡ ಪಾಟೀಲ ಹೆಸರು ಮುಂಚೂಣಿಯಲ್ಲಿದೆ.
ಬೆಳಗಾವಿ ಲೋಕಸಭಾ ಕ್ಷೇತ್ರದಲ್ಲಿ ಸತತ ಸೋಲು ಕಂಡಿರುವ ಕಾಂಗ್ರೆಸ್ ಪಾಳಯದಲ್ಲಿ ಈ ಬಾರಿ ಚುನಾವಣೆಗೆ ಸ್ಪರ್ಧಿಸುವ ಆಸಕ್ತಿಗಿಂತ 'ಗಟ್ಟಿತನದ ಅಭ್ಯರ್ಥಿ' ಆಯ್ಕೆ ಬಗ್ಗೆಯೇ ಚರ್ಚೆ ಆರಂಭಗೊಂಡಿದೆ. ಉಪ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಗೆ ಪೆಟ್ಟು ನೀಡಲು ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್ ಒಬ್ಬರೇ ತಕ್ಕ ಅಭ್ಯರ್ಥಿ ಎಂಬ ಮಾತೂ ಕೇಳಿ ಬರುತ್ತಿದೆ. ರಾಮದುರ್ಗದ ಮಾಜಿ ಶಾಸಕ ಅಶೋಕ ಪಟ್ಟಣ, ಕಾಂಗ್ರೆಸ್ ಮುಖಂಡ ಲಖನ್ ಜಾರಕಿಹೊಳಿ ಹೆಸರು ಕೂಡ ಕಾಂಗ್ರೆಸ್ ವಲಯದಲ್ಲಿ ತೇಲುತ್ತಿವೆ.
ಕೊರೊನಾ ಮಾರ್ಗಸೂಚಿಯಂತೆ ದೆಹಲಿಯಲ್ಲಿ ಸಂಜೆ ಸುರೇಶ ಅಂಗಡಿ ಅಂತ್ಯಕ್ರಿಯೆ: ಜಗದೀಶ್ ಶೆಟ್ಟರ್
ಅಭಿವೃದ್ಧಿ... ಅನುಕಂಪ...
ಸುರೇಶ್ ಅಂಗಡಿ ಕೇಂದ್ರದಲ್ಲಿ ಸಚಿವ ಸ್ಥಾನಕ್ಕೇರಿದ್ದರೂ ಅವರ ಕುಟುಂಬ ಸದಸ್ಯರು ರಾಜಕೀಯದಲ್ಲಿ ಕಾಣಿಸಿಕೊಂಡಿಲ್ಲ. ಅಲ್ಲಲ್ಲಿ ಸನ್ಮಾನ ಸಮಾರಂಭಗಳಲ್ಲಿ ಸುರೇಶ್ ಅಂಗಡಿ ಪತ್ನಿ ಮಂಗಲಾ ಅವರು ಪಾಲ್ಗೊಳ್ಳುತ್ತಿದ್ದರು.
ಅವರು ಉಪ ಚುನಾವಣೆಗೆ ಸ್ಪರ್ಧಿಸಿದರೆ ಅನುಕಂಪ ಮತ್ತು ಅಂಗಡಿ ಅವರ ಸಾಧನೆಗಳು ಗೆಲುವು ತಂದು ಕೊಡುವುದು ಖಾತ್ರಿ ಎನ್ನುವ ಮಾತು ಕೇಳಿ ಬರುತ್ತಿವೆ. ಕಿರಿಯ ಪುತ್ರಿ, ಸಣ್ಣ ಕೈಗಾರಿಕೆ ಸಚಿವ ಜಗದೀಶ ಶೆಟ್ಟರ್ ಸೊಸೆಯಾಗಿರುವುದರಿಂದ ಅಂಗಡಿ ಕುಟುಂಬದ ಹಿಂದೆ ರಾಜಕೀಯ ಶಕ್ತಿಯಿದೆ. ಹೀಗಾಗಿ ಉಪಚುನಾವಣೆಯ ಅಭ್ಯರ್ಥಿ ಬಗ್ಗೆ ಬಿಜೆಪಿ ಕಾರ್ಯಕರ್ತರಿಗೂ ಗೊಂದಲ ಇದ್ದೇ ಇದೆ.
ಕೇಂದ್ರ ಸಚಿವ ಸುರೇಶ್ ಅಂಗಡಿ ಅವರಿಗೆ ವಿಧಾನಸಭೆಯಲ್ಲಿ ಶ್ರದ್ಧಾಂಜಲಿ
ಬಿಜೆಪಿಯಲ್ಲಿ ಆಕಾಂಕ್ಷಿಗಳ ಸಂಖ್ಯೆ ಹನುಮಂತನ ಬಾಲದಂತೆ ಬೆಳೆಯುತ್ತಿದ್ದರೆ, ಕಾಂಗ್ರೆಸ್ನಲ್ಲೂ ಒಳಒಳಗೇ ಮಾತುಕತೆ ನಡೆಯುತ್ತಿದೆ. ಸುರೇಶ್ ಅಂಗಡಿ ನಿಧನದ ಸುದ್ದಿ ತಿಳಿಯುತ್ತಿದ್ದಂತೆಯೇ ಬಿಜೆಪಿಯ ಕೆಲ ಮುಖಂಡರು ಸುರೇಶ ಅಂಗಡಿ ಅವರ ಮನೆ ಬಾಗಿಲಲ್ಲಿ ನಿಂತು ಉಪ ಚುನಾವಣೆಗೆ 'ನಾನು ರೆಡಿ' ಎಂಬ ಸಂದೇಶ ನೀಡಿದ್ದಾರೆ.
ಸುರೇಶ್ ಅಂಗಡಿ ಅಂತ್ಯಕ್ರಿಯೆ ವಿಡಿಯೋ ವೈರಲ್: ಮರುಗಿದ ನಟ ಜಗ್ಗೇಶ್
ಈ ಮೊದಲು ಅಂತರ ಕಾಯ್ದುಕೊಂಡಿದ್ದ ಕಾರ್ಯಕರ್ತರನ್ನು ತಮ್ಮ ಬಳಿ ಕರೆದು ಆತ್ಮೀಯವಾಗಿ ಮಾತುಕತೆ ನಡೆಸಲಾರಂಭಿಸಿದ್ದಾರೆ. ಆದರೆ, ಇತ್ತೀಚಿನ ಬೆಳವಣಿಗೆಗಳಲ್ಲಿ ಬಿಜೆಪಿ ವರಿಷ್ಠರು ಅಭ್ಯರ್ಥಿಗಳ ಆಯ್ಕೆ ವಿಚಾರದಲ್ಲಿ ಆಶ್ಚರ್ಯಕರ ಹೆಜ್ಜೆ ಇಟ್ಟಿರುವುದು ಆಕಾಂಕ್ಷಿಗಳ ಬಹಿರಂಗ ಪೈಪೋಟಿಗೆ ದೊಡ್ಡ ಅಡ್ಡಿಯಾಗುತ್ತಿದೆ.
ಕೇಳಿ ಬರುತ್ತಿರುವ ಹೆಸರುಗಳು..
ಬೆಳಗಾವಿ ಗ್ರಾಮೀಣ ಕ್ಷೇತ್ರದ ಮಾಜಿ ಶಾಸಕ ಸಂಜಯ ಪಾಟೀಲ, ಬೈಲಹೊಂಗಲದ ಮಾಜಿ ಶಾಸಕ ಡಾ.ವಿ.ಐ. ಪಾಟೀಲ, ಉದ್ಯಮಿ ಶಶಿಕಾಂತ ಸಿದ್ನಾಳ, ನ್ಯಾಯವಾದಿಗಳಾದ ಎಂ.ಬಿ.ಝಿರಲಿ, ರಮೇಶ ದೇಶಪಾಂಡೆ ಹೆಸರುಗಳು ಹರಿದಾಡುತ್ತಿದ್ದರೆ, ರಾಜ್ಯ ಸರಕಾರದ ದೆಹಲಿ ಪ್ರತಿನಿಧಿಯಾಗಿರುವ ಶಂಕರಗೌಡ ಪಾಟೀಲ ಹೆಸರು ಮುಂಚೂಣಿಯಲ್ಲಿದೆ.
ಬೆಳಗಾವಿ ಲೋಕಸಭಾ ಕ್ಷೇತ್ರದಲ್ಲಿ ಸತತ ಸೋಲು ಕಂಡಿರುವ ಕಾಂಗ್ರೆಸ್ ಪಾಳಯದಲ್ಲಿ ಈ ಬಾರಿ ಚುನಾವಣೆಗೆ ಸ್ಪರ್ಧಿಸುವ ಆಸಕ್ತಿಗಿಂತ 'ಗಟ್ಟಿತನದ ಅಭ್ಯರ್ಥಿ' ಆಯ್ಕೆ ಬಗ್ಗೆಯೇ ಚರ್ಚೆ ಆರಂಭಗೊಂಡಿದೆ. ಉಪ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಗೆ ಪೆಟ್ಟು ನೀಡಲು ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್ ಒಬ್ಬರೇ ತಕ್ಕ ಅಭ್ಯರ್ಥಿ ಎಂಬ ಮಾತೂ ಕೇಳಿ ಬರುತ್ತಿದೆ. ರಾಮದುರ್ಗದ ಮಾಜಿ ಶಾಸಕ ಅಶೋಕ ಪಟ್ಟಣ, ಕಾಂಗ್ರೆಸ್ ಮುಖಂಡ ಲಖನ್ ಜಾರಕಿಹೊಳಿ ಹೆಸರು ಕೂಡ ಕಾಂಗ್ರೆಸ್ ವಲಯದಲ್ಲಿ ತೇಲುತ್ತಿವೆ.
ಕೊರೊನಾ ಮಾರ್ಗಸೂಚಿಯಂತೆ ದೆಹಲಿಯಲ್ಲಿ ಸಂಜೆ ಸುರೇಶ ಅಂಗಡಿ ಅಂತ್ಯಕ್ರಿಯೆ: ಜಗದೀಶ್ ಶೆಟ್ಟರ್
ಅಭಿವೃದ್ಧಿ... ಅನುಕಂಪ...
ಸುರೇಶ್ ಅಂಗಡಿ ಕೇಂದ್ರದಲ್ಲಿ ಸಚಿವ ಸ್ಥಾನಕ್ಕೇರಿದ್ದರೂ ಅವರ ಕುಟುಂಬ ಸದಸ್ಯರು ರಾಜಕೀಯದಲ್ಲಿ ಕಾಣಿಸಿಕೊಂಡಿಲ್ಲ. ಅಲ್ಲಲ್ಲಿ ಸನ್ಮಾನ ಸಮಾರಂಭಗಳಲ್ಲಿ ಸುರೇಶ್ ಅಂಗಡಿ ಪತ್ನಿ ಮಂಗಲಾ ಅವರು ಪಾಲ್ಗೊಳ್ಳುತ್ತಿದ್ದರು.
ಅವರು ಉಪ ಚುನಾವಣೆಗೆ ಸ್ಪರ್ಧಿಸಿದರೆ ಅನುಕಂಪ ಮತ್ತು ಅಂಗಡಿ ಅವರ ಸಾಧನೆಗಳು ಗೆಲುವು ತಂದು ಕೊಡುವುದು ಖಾತ್ರಿ ಎನ್ನುವ ಮಾತು ಕೇಳಿ ಬರುತ್ತಿವೆ. ಕಿರಿಯ ಪುತ್ರಿ, ಸಣ್ಣ ಕೈಗಾರಿಕೆ ಸಚಿವ ಜಗದೀಶ ಶೆಟ್ಟರ್ ಸೊಸೆಯಾಗಿರುವುದರಿಂದ ಅಂಗಡಿ ಕುಟುಂಬದ ಹಿಂದೆ ರಾಜಕೀಯ ಶಕ್ತಿಯಿದೆ. ಹೀಗಾಗಿ ಉಪಚುನಾವಣೆಯ ಅಭ್ಯರ್ಥಿ ಬಗ್ಗೆ ಬಿಜೆಪಿ ಕಾರ್ಯಕರ್ತರಿಗೂ ಗೊಂದಲ ಇದ್ದೇ ಇದೆ.
ಕೇಂದ್ರ ಸಚಿವ ಸುರೇಶ್ ಅಂಗಡಿ ಅವರಿಗೆ ವಿಧಾನಸಭೆಯಲ್ಲಿ ಶ್ರದ್ಧಾಂಜಲಿ