ಗುರುದತ್ತ ಭಟ್
ಬೆಳಗಾವಿ: ಭೌಗೋಳಿಕವಾಗಿ ಆಯಕಟ್ಟಿನ ಸ್ಥಳವಾಗಿರುವ ಬೆಳಗಾವಿ ಜಿಲ್ಲೆ ಕೈಗಾರಿಕೆ, ಶೈಕ್ಷಣಿಕ, ಆರೋಗ್ಯ ಕ್ಷೇತ್ರದಲ್ಲಿ ವೇಗವಾಗಿ ಬೆಳೆಯುತ್ತಿದ್ದರೂ ರಾಜ್ಯ ಮತ್ತು ದೇಶದ ವಿವಿಧ ಪ್ರಮುಖ ನಗರಗಳಿಂದ ಬೆಳಗಾವಿಗೆ ನೇರ ರೈಲು ಸಂಪರ್ಕವೇ ಇಲ್ಲ. ಬೆಳಗಾವಿಗೆ ಸಂಚರಿಸುತ್ತಿದ್ದ ಹಲವಾರು ರೈಲುಗಳನ್ನು ಕೋವಿಡ್ ಸಂದರ್ಭದಲ್ಲಿ ಬಂದ್ ಮಾಡಲಾಗಿದ್ದರೆ ಇನ್ನು ಕೆಲ ರೈಲುಗಳ ವೇಳಾ ಪಟ್ಟಿಯನ್ನೇ ಬದಲು ಮಾಡಿದ್ದು ಪ್ರಯಾಣಿಕರಿಗೆ ಸಂಕಷ್ಟ ತಂದೊಡ್ಡಿದೆ. ಮರಾಠಾ ಲೈಟ್ ಇನ್ಫೆಂಟ್ರಿ ರೆಜಿಮೆಂಟ್ (ಎಂಎಲ್ಐಆರ್ಸಿ), ಇಂಡೋ ಟಿಬೇಟಿಯನ್ ಬಾರ್ಡರ್ ಪೊಲೀಸ್ (ಐಟಿಬಿಪಿ), ಭಾರತೀಯ ವಾಯು ಸೇನೆಯ ಏರ್ ಮೆನ್ ತರಬೇತಿ ಕೇಂದ್ರ ಸೇರಿದಂತೆ ರಕ್ಷಣಾ ಇಲಾಖೆಯ ಪ್ರಮುಖ ನೆಲೆಗಳು ಬೆಳಗಾವಿಯಲ್ಲಿದ್ದು ಸಾವಿರಾರು ಜನ ದೇಶದ ವಿವಿಧೆಡೆಗಳಿಂದ ಬೆಳಗಾವಿಗೆ ಬರುತ್ತಾರೆ. ರಾಜ್ಯದಲ್ಲೇ ಅತಿ ಹೆಚ್ಚು ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳು ಬೆಳಗಾವಿಯಲ್ಲಿವೆ. ಹಾಗಾಗಿ ವ್ಯಾಪಾರ, ವ್ಯವಹಾರ, ಉದ್ಯೋಗದ ನಿಮಿತ್ತ ಬೆಳಗಾವಿಗೆ ಪ್ರಯಾಣಿಸುವವರ ಸಂಖ್ಯೆ ಹೆಚ್ಚು.
ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ, ಕೆಎಲ್ಇ, ಜಿಐಟಿ ಸೇರಿದಂತೆ ವಿಶ್ವ ದರ್ಜೆಯ ಶಿಕ್ಷಣ ಸಂಸ್ಥೆಗಳು, ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗಳು ಇಲ್ಲಿದ್ದು ಉತ್ತರ ಕರ್ನಾಟಕದ ಬಹುತೇಕ ಜಿಲ್ಲೆಗಳ ಜನ ಬೆಳಗಾವಿ ಅವಲಂಬಿಸಿದ್ದಾರೆ. ತಂಬಾಕು, ದ್ರಾಕ್ಷಿ, ಕಬ್ಬು, ತರಕಾರಿ ಬೆಳೆಗಳನ್ನು ರಾಜ್ಯದಲ್ಲೇ ಅತಿ ಹೆಚ್ಚು ಬೆಳೆಯುವ ಜಿಲ್ಲೆ ಬೆಳಗಾವಿಯಾಗಿದ್ದು ಕೃಷಿ ಸಂಬಂಧಿತ ವ್ಯವಹಾರಗಳಿಗೆ ಬರುವವರೂ ಸಹಸ್ರಾರು ಸಂಖ್ಯೆಯಲ್ಲಿದ್ದಾರೆ.
ಆಯಕಟ್ಟಿನ ಸ್ಥಳ
ಬೆಳಗಾವಿ ಜಿಲ್ಲೆ ಮಹಾರಾಷ್ಟ್ರ ಮತ್ತು ಗೋವಾ ರಾಜ್ಯಗಳೊಂದಿಗೆ ಗಡಿ ಹಂಚಿಕೊಂಡಿದೆ. ಅಲ್ಲದೆ ಮೆಗಾ ಸಿಟಿಗಳಾದ ಬೆಂಗಳೂರು, ಹೈದರಾಬಾದ್ ಮತ್ತು ಮುಂಬಯಿಗೆ ಸಮಾನ ಅಂತರದಲ್ಲಿದ್ದು, ಭವಿಷ್ಯದಲ್ಲಿ ಕೈಗಾರಿಕೆ ಕಾರಿಡಾರ್ ಸೇರಿದಂತೆ ಅಭಿವೃದ್ಧಿ ಯೋಜನೆಗಳ ಕೇಂದ್ರವಾಗುವ ಅರ್ಹತೆ ಪಡೆದಿದೆ. ದಕ್ಷಿಣ ಮಹಾರಾಷ್ಟ್ರ ಮತ್ತು ಗೋವಾ ರಾಜ್ಯದ ಜನ ಶಿಕ್ಷಣ ಮತ್ತು ಆರೋಗ್ಯದ ವಿಷಯದಲ್ಲಿ ಬೆಳಗಾವಿಯನ್ನೇ ಅವಲಂಬಿಸಿದ್ದಾರೆ.
ಇಷ್ಟಿದ್ದರೂ ಬೆಳಗಾವಿ ಜಿಲ್ಲೆ ರೈಲ್ವೆ ಸಂಪರ್ಕದಲ್ಲಿ ಇನ್ನೂ ಹಿಂದುಳಿದಿದೆ. ಶೀಘ್ರ ಬಹುಬೇಡಿಕೆಯ ರೈಲುಗಳ ಸಂಚಾರವನ್ನು ಪ್ರಾರಂಭಿಸುವುದರ ಜತೆಗೆ ಜಿಲ್ಲೆಯ ವಿವಿಧ ನಗರಗಳ ರೈಲ್ವೆ ನಿಲ್ದಾಣಗಳ ಅಭಿವೃದ್ಧಿ, ಬೆಳಗಾವಿ ನಗರದಲ್ಲಿ 4ನೇ ರೈಲ್ವೆ ಗೇಟ್ ಮೇಲ್ಸೇತುವೆ, ರೈಲುಗಳಿಗೆ ನಿಲುಗಡೆ ವ್ಯವಸ್ಥೆ ಸೇರಿದಂತೆ ಹತ್ತು ಹಲವು ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳಬೇಕು ಎಂಬುದು ಜಿಲ್ಲೆಯ ಜನರ ಆಗ್ರಹ.
ಹಲವು ರೈಲುಗಳಿಗೆ ಬೇಡಿಕೆ
ಬೆಳಗಾವಿ: ಭೌಗೋಳಿಕವಾಗಿ ಆಯಕಟ್ಟಿನ ಸ್ಥಳವಾಗಿರುವ ಬೆಳಗಾವಿ ಜಿಲ್ಲೆ ಕೈಗಾರಿಕೆ, ಶೈಕ್ಷಣಿಕ, ಆರೋಗ್ಯ ಕ್ಷೇತ್ರದಲ್ಲಿ ವೇಗವಾಗಿ ಬೆಳೆಯುತ್ತಿದ್ದರೂ ರಾಜ್ಯ ಮತ್ತು ದೇಶದ ವಿವಿಧ ಪ್ರಮುಖ ನಗರಗಳಿಂದ ಬೆಳಗಾವಿಗೆ ನೇರ ರೈಲು ಸಂಪರ್ಕವೇ ಇಲ್ಲ. ಬೆಳಗಾವಿಗೆ ಸಂಚರಿಸುತ್ತಿದ್ದ ಹಲವಾರು ರೈಲುಗಳನ್ನು ಕೋವಿಡ್ ಸಂದರ್ಭದಲ್ಲಿ ಬಂದ್ ಮಾಡಲಾಗಿದ್ದರೆ ಇನ್ನು ಕೆಲ ರೈಲುಗಳ ವೇಳಾ ಪಟ್ಟಿಯನ್ನೇ ಬದಲು ಮಾಡಿದ್ದು ಪ್ರಯಾಣಿಕರಿಗೆ ಸಂಕಷ್ಟ ತಂದೊಡ್ಡಿದೆ.
ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ, ಕೆಎಲ್ಇ, ಜಿಐಟಿ ಸೇರಿದಂತೆ ವಿಶ್ವ ದರ್ಜೆಯ ಶಿಕ್ಷಣ ಸಂಸ್ಥೆಗಳು, ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗಳು ಇಲ್ಲಿದ್ದು ಉತ್ತರ ಕರ್ನಾಟಕದ ಬಹುತೇಕ ಜಿಲ್ಲೆಗಳ ಜನ ಬೆಳಗಾವಿ ಅವಲಂಬಿಸಿದ್ದಾರೆ. ತಂಬಾಕು, ದ್ರಾಕ್ಷಿ, ಕಬ್ಬು, ತರಕಾರಿ ಬೆಳೆಗಳನ್ನು ರಾಜ್ಯದಲ್ಲೇ ಅತಿ ಹೆಚ್ಚು ಬೆಳೆಯುವ ಜಿಲ್ಲೆ ಬೆಳಗಾವಿಯಾಗಿದ್ದು ಕೃಷಿ ಸಂಬಂಧಿತ ವ್ಯವಹಾರಗಳಿಗೆ ಬರುವವರೂ ಸಹಸ್ರಾರು ಸಂಖ್ಯೆಯಲ್ಲಿದ್ದಾರೆ.
ಆಯಕಟ್ಟಿನ ಸ್ಥಳ
ಬೆಳಗಾವಿ ಜಿಲ್ಲೆ ಮಹಾರಾಷ್ಟ್ರ ಮತ್ತು ಗೋವಾ ರಾಜ್ಯಗಳೊಂದಿಗೆ ಗಡಿ ಹಂಚಿಕೊಂಡಿದೆ. ಅಲ್ಲದೆ ಮೆಗಾ ಸಿಟಿಗಳಾದ ಬೆಂಗಳೂರು, ಹೈದರಾಬಾದ್ ಮತ್ತು ಮುಂಬಯಿಗೆ ಸಮಾನ ಅಂತರದಲ್ಲಿದ್ದು, ಭವಿಷ್ಯದಲ್ಲಿ ಕೈಗಾರಿಕೆ ಕಾರಿಡಾರ್ ಸೇರಿದಂತೆ ಅಭಿವೃದ್ಧಿ ಯೋಜನೆಗಳ ಕೇಂದ್ರವಾಗುವ ಅರ್ಹತೆ ಪಡೆದಿದೆ. ದಕ್ಷಿಣ ಮಹಾರಾಷ್ಟ್ರ ಮತ್ತು ಗೋವಾ ರಾಜ್ಯದ ಜನ ಶಿಕ್ಷಣ ಮತ್ತು ಆರೋಗ್ಯದ ವಿಷಯದಲ್ಲಿ ಬೆಳಗಾವಿಯನ್ನೇ ಅವಲಂಬಿಸಿದ್ದಾರೆ.
ಇಷ್ಟಿದ್ದರೂ ಬೆಳಗಾವಿ ಜಿಲ್ಲೆ ರೈಲ್ವೆ ಸಂಪರ್ಕದಲ್ಲಿ ಇನ್ನೂ ಹಿಂದುಳಿದಿದೆ. ಶೀಘ್ರ ಬಹುಬೇಡಿಕೆಯ ರೈಲುಗಳ ಸಂಚಾರವನ್ನು ಪ್ರಾರಂಭಿಸುವುದರ ಜತೆಗೆ ಜಿಲ್ಲೆಯ ವಿವಿಧ ನಗರಗಳ ರೈಲ್ವೆ ನಿಲ್ದಾಣಗಳ ಅಭಿವೃದ್ಧಿ, ಬೆಳಗಾವಿ ನಗರದಲ್ಲಿ 4ನೇ ರೈಲ್ವೆ ಗೇಟ್ ಮೇಲ್ಸೇತುವೆ, ರೈಲುಗಳಿಗೆ ನಿಲುಗಡೆ ವ್ಯವಸ್ಥೆ ಸೇರಿದಂತೆ ಹತ್ತು ಹಲವು ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳಬೇಕು ಎಂಬುದು ಜಿಲ್ಲೆಯ ಜನರ ಆಗ್ರಹ.
ಹಲವು ರೈಲುಗಳಿಗೆ ಬೇಡಿಕೆ
- ಕರಾವಳಿಯ ಪ್ರಮುಖ ನಗರವಾದ ಮಂಗಳೂರಿಗೆ ಬೆಳಗಾವಿಯಿಂದ ನೇರ ರೈಲು ಸಂಪರ್ಕವಿಲ್ಲ. 1994ರವರೆಗೆ ಈ ಮಾರ್ಗದಲ್ಲಿ ಮಹಾಲಕ್ಷ್ಮೀ ಎಕ್ಸ್ಪ್ರೆಸ್ ರೈಲು ಸಂಚಾರ ಇತ್ತು. ಗೇಜ್ ಪರಿವರ್ತನೆಯ ಬಳಿಕ ಈ ರೈಲು ರದ್ದಾಗಿದೆ.
- ಸಾಂಸ್ಕೃತಿಕ ನಗರಿ ಮೈಸೂರಿಗೆ ವಾರಕ್ಕೆ ಒಮ್ಮೆ ಮಾತ್ರ ರೈಲು ಸಂಚಾರವಿದೆ. ಮೈಸೂರಿಗೆ ರೈಲು ಹೆಚ್ಚಬೇಕಿದೆ.
- ಕೋವಿಡ್ ಬಳಿಕ ಬೆಳಗಾವಿ- ವಾಸ್ಕೊ ರೈಲು ಸಂಚಾರ ಸಮಯ ಬದಲಾವಣೆ ಮಾಡಲಾಗಿದ್ದು ಪ್ರಯಾಣಿಕರಿಗೆ ಈ ರೈಲು ಇದ್ದರೂ ಪ್ರಯೋಜನವಿಲ್ಲದಂತಾಗದೆ.
- ಬೆಳಗಾವಿಯಿಂದ ಬಳ್ಳಾರಿಗೆ ಇಂಟರ್ಸಿಟಿ ರೈಲು, ವಿಜಯಪುರಕ್ಕೆ ಸಂಪರ್ಕ ಕಲ್ಪಿಸುವ ರೈಲಿಗೆ ವ್ಯಾಪಕ ಬೇಡಿಕೆ ಇದೆ.
- ಬೆಳಗಾವಿ- ಚೆನ್ನೈ ನಡುವೆ ಟ್ರೈ ವೀಕ್ಲಿರೈಲು ಸಂಚಾರ ಆರಂಭಿಸಲು ಪ್ರಯಾಣಿಕರು ಹಲವು ವರ್ಷಗಳಿಂದ ಬೇಡಿಕೆ ಮುಂದಿಟ್ಟಿದ್ದಾರೆ.
- ಬೆಳಗಾವಿ- ಧಾರವಾಡ ನಡುವೆ ನೇರ ರೈಲು ಸಂಪರ್ಕ ಕಲ್ಪಿಸುವ ನಿಟ್ಟಿನಲ್ಲಿನಡೆದಿರುವ ಕಾಮಗಾರಿ ಭೂ ಸ್ವಾಧೀನ ಸಮಸ್ಯೆಯಿಂದ ಕುಂಟುತ್ತ ಸಾಗಿದೆ.
ಬೆಂಗಳೂರು-ದಿಲ್ಲಿ ಮಾರ್ಗದಲ್ಲಿ ಏರ್ಟ್ರಾಫಿಕ್, ವಾರ್ಷಿಕ 22.51 ಲಕ್ಷ ಪ್ರಯಾಣಿಕರ ಸಂಚಾರಬೆಳಗಾವಿ ನಾನಾ ಕ್ಷೇತ್ರಗಳಲ್ಲಿ ಕ್ಷಿಪ್ರವಾಗಿ ಅಭಿವೃದ್ಧಿ ಹೊಂದುತ್ತಿದ್ದರೂ ರಾಜ್ಯದ ಪ್ರಮುಖ ನಗರಗಳಿಂದ ನೇರ ರೈಲು ಸಂಪರ್ಕ ಇಲ್ಲದಿರುವುದು ದೊಡ್ಡ ಕೊರತೆ. ಆದಷ್ಟು ಶೀಘ್ರ ಜಿಲ್ಲೆಯ ಜನಪ್ರತಿನಿಧಿಗಳು ಸರಕಾರದ ಮೇಲೆ ಒತ್ತಡ ತಂದು ಬೇಡಿಕೆಯ ರೈಲುಗಳ ಸಂಚಾರ ಆರಂಭಿಸಲು ಕ್ರಮ ವಹಿಸಬೇಕು.-ವಿಜಯಕುಮಾರ ಪಾಟೀಲ, ನ್ಯಾಯವಾದಿ, ಬೆಳಗಾವಿ