ಆ್ಯಪ್ನಗರ

ವಂಚನೆ ಆರೋಪ: ಬೆಳಗಾವಿ ಜಿಪಂ ಅಧ್ಯಕ್ಷೆಯ ಪತಿ ಬಂಧನ

ಬೆಳಗಾವಿ: ನಿವೇಶನ ಕೊಡುವುದಾಗಿ ಹಣ ಪಡೆದು ವಂಚಿಸಿದ ಆರೋಪದ ಮೇಲೆ ಅಥಣಿ ಪಟ್ಟಣದ ಪ್ರಶಾಂತ್‌ ಐಹೊಳೆ ಅವರನ್ನು ಶುಕ್ರವಾರ ಅಥಣಿ ಠಾಣೆ ಪೊಲೀಸರು ಬಂಧಿಸಿ ನ್ಯಾಯಾಂಗ ...

Vijaya Karnataka 18 May 2019, 5:00 am
ಬೆಳಗಾವಿ : ನಿವೇಶನ ಕೊಡುವುದಾಗಿ ಹಣ ಪಡೆದು ವಂಚಿಸಿದ ಆರೋಪದ ಮೇಲೆ ಅಥಣಿ ಪಟ್ಟಣದ ಪ್ರಶಾಂತ್‌ ಐಹೊಳೆ ಅವರನ್ನು ಶುಕ್ರವಾರ ಅಥಣಿ ಠಾಣೆ ಪೊಲೀಸರು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ. ಬಂಧಿತ ಪ್ರಶಾಂತ್‌ ಬೆಳಗಾವಿ ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಆಶಾ ಐಹೊಳೆ ಅವರ ಪತಿ.
Vijaya Karnataka Web belgavi zp presidents husbund arrested for fraud
ವಂಚನೆ ಆರೋಪ: ಬೆಳಗಾವಿ ಜಿಪಂ ಅಧ್ಯಕ್ಷೆಯ ಪತಿ ಬಂಧನ


''ಮಹಾಲಕ್ಷ್ಮಿ ಎಸ್ಟೇಟ್ಸ್‌ ಮೂಲಕ ನಿವೇಶನ ನೀಡುವುದಾಗಿ ನಂಬಿಸಿ ಪ್ರಶಾಂತ್‌ ಐಹೊಳೆ 2 ಲಕ್ಷ ರೂ. ಹಣ ಪಡೆದುಕೊಂಡಿದ್ದರು. ಆದರೆ, ನಿವೇಶನ ನೀಡದೆ ಹಣ ಕೂಡ ಮರುಪಾವತಿಸದೆ ವಂಚನೆ ಮಾಡಿದ್ದಾರೆ', ಎಂದು ಅಥಣಿ ಪಟ್ಟಣದ ಸಂಜಯ್‌ ಸಂಕಪಾಲಕರ್‌ ಏ.27ರಂದು ಪೊಲೀಸ್‌ ದೂರು ದಾಖಲಿಸಿದ್ದರು. ಈ ಹಿನ್ನೆಲೆಯಲ್ಲಿ ತನಿಖೆ ಕೈಗೊಂಡ ಪೊಲೀಸರು ವಂಚನೆ ಕುರಿತು ದಾಖಲೆ ಸಂಗ್ರಹಿಸಿ ಶುಕ್ರವಾರ ಪ್ರಶಾಂತ್‌ ಐಹೊಳೆ ಅವರನ್ನು ಬಂಧಿಸಿದ್ದಾರೆ'', ಎಂದು ಜಿಲ್ಲಾ ಪೊಲೀಸ್‌ ವರಿಷ್ಠ ಸುಧೀರ್‌ಕುಮಾರ್‌ ರೆಡ್ಡಿ ತಿಳಿಸಿದ್ದಾರೆ.

2011ರಲ್ಲೂ ದೂರು: ಮಹಾಲಕ್ಷ್ಮೇ ಮಲ್ಟಿ ಟ್ರೇಡ್‌ ಡಿಸ್ಟ್ರಿಬ್ಯೂಷನ್‌ ಕಂಪನಿಯಲ್ಲಿ ಠೇವಣಿ ಇಟ್ಟರೆ ದ್ವಿಗುಣ ಮಾಡಿಕೊಡುವುದಾಗಿ ನಂಬಿಸಿ ಪ್ರಶಾಂತ್‌ ಐಹೊಳೆ 50 ಸಾವಿರ ರೂ. ವಂಚಿಸಿದ್ದಾರೆ ಎಂದು ಉಗಾರ ಬುದ್ರುಕ ಗ್ರಾಮದ ಧರೆಪ್ಪ ಕುಸನಾಳೆ ಮತ್ತು ದಾದಾ ಕುಸನಾಳೆ ಕೂಡ 2011ರಲ್ಲಿ ಅಥಣಿ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಈ ಕುರಿತು ತನಿಖೆ ನಡೆಸಲಾಗುತ್ತಿದ್ದು, ದಾಖಲಾತಿ ಸಂಗ್ರಹಿಸಲಾಗುತ್ತಿದೆ ಎಂದು ಅಥಣಿ ಠಾಣೆ ಪೊಲೀಸರು ತಿಳಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ