ಆ್ಯಪ್ನಗರ

ಸಿದ್ದರಾಯಜ್ಜನವರ ಜಾತ್ರೆಯಲ್ಲಿ ಭಂಡಾರದೋಕುಳಿ

ರಾಮದುರ್ಗ: ತಾಲೂಕಿನ ಕಟಕೋಳದ ಸಿದ್ಧರಾಯಜ್ಜನವರ ಜಾತ್ರಾ ...

Vijaya Karnataka 21 Oct 2019, 5:00 am
ರಾಮದುರ್ಗ: ತಾಲೂಕಿನ ಕಟಕೋಳದ ಸಿದ್ಧರಾಯಜ್ಜನವರ ಜಾತ್ರಾ ಮಹೋತ್ಸವವು ಭಕ್ತಸಾಗರದ ನಡುವೆ ವಿಜೃಂಭಣೆಯಿಂದ ಜರುಗಿತು.
Vijaya Karnataka Web 20 KTL 1 01_53


ಭಕ್ತಾದಿಗಳು ಅಭಿನವ ಸಿದ್ದರಾಯಜ್ಜನವರಿಗೆ ಉಣ್ಣೆ, ಭಂಡಾರ ಹಾರಿಸಿ ಭಕ್ತಿ ಸಮರ್ಪಿಸಿದರು. ಅಜ್ಜನವರು ವಾಲಗ ಹಾಡಿದರು. ಡೊಳ್ಳು ಕುಣಿತ, ಕರಗೋಲ ಕುಣಿತ, ಜಾಂಜ್‌ ಪಥಕ್‌ ಸೇರಿ ಅನೇಕ ವಾದ್ಯಮೇಳ, ನಾನಾ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು. ಬೆಳಗ್ಗೆ 11 ರಿಂದ ಸಂಜೆ 5 ಗಂಟೆಯವರೆಗೂ ಸುಕ್ಷೇತ್ರ ಭಂಡಾರ ಮಯವಾಗಿತ್ತು.

ಭಕ್ತರು ಪ್ರಸಾದ ಸ್ವೀಕರಿಸಿ ಪುನೀತರಾದರು. ಶುಕ್ರವಾರ ನಾನಾ ಗ್ರಾಮಗಳಿಂದ ಡೊಳ್ಳುಗಳು ಕೂಡಿದ್ದವು. ಶನಿವಾರ ಭಂಡಾರ ಜಾತ್ರೆ, ಭಾನುವಾರ ಅಜ್ಜನವರ ಜಡೆ ತೊಳೆಯುವ ಕಾರ್ಯಕ್ರಮ ಜರುಗಿತು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ