ಆ್ಯಪ್ನಗರ

ಭಿಷ್ಠಾದೇವಿ ಜಾತ್ರೆ ಪ್ರಾಣಿಬಲಿ ರಹಿತ: ದಯಾನಂದ ಸ್ವಾಮೀಜಿ

ಖಾನಾಪುರ: ವರ್ಷಕ್ಕೊಮ್ಮೆ ಜರುಗುವ ತಾಲೂಕಿನ ಕಕ್ಕೇರಿ ಬಿಷ್ಠಾದೇವಿಯ ಜಾತ್ರೆ ಗುರುವಾರ ನಸುಕಿನ ಜಾವ ಬಹುತೇಕ ಪ್ರಾಣಿ ಬಲಿ ರಹಿತವಾಗಿ ...

Vijaya Karnataka 20 Oct 2018, 5:00 am
ಖಾನಾಪುರ: ವರ್ಷಕ್ಕೊಮ್ಮೆ ಜರುಗುವ ತಾಲೂಕಿನ ಕಕ್ಕೇರಿ ಬಿಷ್ಠಾದೇವಿಯ ಜಾತ್ರೆ ಗುರುವಾರ ನಸುಕಿನ ಜಾವ ಬಹುತೇಕ ಪ್ರಾಣಿ ಬಲಿ ರಹಿತವಾಗಿ ಸಂಪನ್ನಗೊಂಡಿದೆ. ಜಾತ್ರೆಯಲ್ಲಿ ದೇವಾಲಯದ ಬಳಿ ಪ್ರಾಣಿಬಲಿಯನ್ನು ತಡೆಯುವಲ್ಲಿ ಪೊಲೀಸ್‌ ಇಲಾಖೆ ಹಾಗೂ ತಾಲೂಕು ಆಡಳಿತ ಯಶಸ್ವಿಯಾಗಿದೆ ಎಂದು ವಿಶ್ವ ಪ್ರಾಣಿ ಕಲ್ಯಾಣ ಮಂಡಳಿ ಅಧ್ಯಕ್ಷ ದಯಾನಂದ ಸ್ವಾಮಿ ತಿಳಿಸಿದರು.
Vijaya Karnataka Web bhishta devi fair is free of animal sacrifice dayanand swamiji
ಭಿಷ್ಠಾದೇವಿ ಜಾತ್ರೆ ಪ್ರಾಣಿಬಲಿ ರಹಿತ: ದಯಾನಂದ ಸ್ವಾಮೀಜಿ


ಪಟ್ಟಣದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜಾತ್ರೆಗೆ ಸಾಕಷ್ಟು ಮೊದಲೇ ತಾಲೂಕು ಆಡಳಿತ ಈ ಜಾತ್ರೆಯನ್ನು ಪ್ರಾಣಿಬಲಿ ರಹಿತವಾಗಿ ಆಚರಿಸಬೇಕೆಂದು ಕರೆ ನೀಡಿ ಹಲವಾರು ಸಭೆಗಳನ್ನು ನಡೆಸಿ ಪ್ರಾಣಿ ಬಲಿ ಮಾಡದಂತೆ ಮನವಿ ಮಾಡಿತ್ತು. ಗ್ರಾಮದ ಮಧ್ಯದಲ್ಲಿರುವ ಭಿಷ್ಠಾದೇವಿ ದೇವಸ್ಥಾನದ ಸುತ್ತಮುತ್ತ ಪ್ರಾಣಿ ಬಲಿಯನ್ನು ನಿಷೇಧಿಸಿ ಆದೇಶ ಜಾರಿಗೊಳಿಸಿತ್ತು. ಆದರೆ ಗ್ರಾಮದಿಂದ ಮೂರ್ನಾಲ್ಕು ಕಿಮೀ ದೂರದ ಬೀಡಿ ರಸ್ತೆ ಮತ್ತು ಅಳ್ನಾವರ ರಸ್ತೆಗಳ ಅಕ್ಕಪಕ್ಕದ ಹೊಲಗಳಲ್ಲಿ ಭಕ್ತರು ದೇವಿಯ ಹೆಸರಲ್ಲಿ ಪ್ರಾಣಿಬಲಿ ನಡೆಸಿದರು ಎಂದು ತಿಳಿಸಿದರು.

ಕಕ್ಕೇರಿ ಜಾತ್ರೆಯಲ್ಲಿ ತಾವು ಪ್ರಾಣಿಬಲಿ ನಿಷೇಧದ ಬಗ್ಗೆ ಜಾಗೃತಿ ಮೂಡಿಸುತ್ತಿದ್ದ ಸಂದರ್ಭದಲ್ಲಿ ಕೆಲ ಭಕ್ತರು ತಮಗೆ ತಾಲೂಕಿನ ಗುಂಜಿ, ಭೂತನಾಥ, ರಾವಳಕಟ್ಟಾ ಪ್ರದೇಶದಲ್ಲಿ ಮತ್ತು ಬೆಳಗಾವಿ ತಾಲೂಕು ನಂದಿಹಳ್ಳಿಯ ವಾಕಡೆವಡ್ಡ ಮತ್ತು ಉಚಗಾಂವ ಬಳಿಯ ಮಳೇಕರಣಿ ದೇವಾಲಯದಲ್ಲೂ ಪ್ರಾಣಿಬಲಿ ನಿರಾತಂಕವಾಗಿ ನಡೆಯುತ್ತಿರುವ ಬಗ್ಗೆ ಮಾಹಿತಿ ನೀಡಿದ್ದಾರೆ. ಅಲ್ಲಿಗೂ ಭೇಟಿ ನೀಡಿ ಪ್ರಾಣಿಬಲಿ ನಿಷೇಧಕ್ಕೆ ಪ್ರಯತ್ನಿಸುವುದಾಗಿ ಅವರು ತಿಳಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ