ಆ್ಯಪ್ನಗರ

ಬೈಸಿಕಲ್‌ ಸ್ಪರ್ಧೆ: ಕೋಲಾರದ ಎಲ್ಗೂರೇಶ ಗಡ್ಡಿ ಪ್ರಥಮ

ನಿಪ್ಪಾಣಿ: ಮಹಾಶಿವರಾತ್ರಿ ಅಂಗವಾಗಿ ಇಲ್ಲಿನ ಮಹಾದೇವ ಗಲ್ಲಿಯ ಮಹಾದೇವ ಮಂದಿರ ಸಮಿತಿಯಿಂದ ಆಯೋಜಿಸಿದ್ದ ಬೈಸಿಕಲ್‌ ಸ್ಪರ್ಧೆಯಲ್ಲಿ ಕೋಲಾರದ ಎಲ್ಗೂರೇಶ ಗಡ್ಡಿ ...

Vijaya Karnataka 5 Mar 2019, 5:00 am
ನಿಪ್ಪಾಣಿ : ಮಹಾಶಿವರಾತ್ರಿ ಅಂಗವಾಗಿ ಇಲ್ಲಿನ ಮಹಾದೇವ ಗಲ್ಲಿಯ ಮಹಾದೇವ ಮಂದಿರ ಸಮಿತಿಯಿಂದ ಆಯೋಜಿಸಿದ್ದ ಬೈಸಿಕಲ್‌ ಸ್ಪರ್ಧೆಯಲ್ಲಿ ಕೋಲಾರದ ಎಲ್ಗೂರೇಶ ಗಡ್ಡಿ ಪ್ರಥಮ ಸ್ಥಾನ ಪಡೆದು 21 ಸಾವಿರ ರೂ.ನಗದು ಬಹುಮಾನ ಗಿಟ್ಟಿಸಿಕೊಂಡರು.
Vijaya Karnataka Web BEL-4CKD2


ಅವರು ನಗರದಿಂದ ಚಿಂಚಣಿಯವರೆಗಿನ ಸುಮಾರು 32 ಕಿಮೀ ಅಂತರದ ಸ್ಪರ್ಧೆಯನ್ನು 44. 40ನಿಮಿಷಗಳಲ್ಲಿ ಪೂರ್ಣಗೊಳಿಸಿದರು. ಧರ್ಮಟ್ಟಿಯ ಬಸಪ್ಪ ದಳವಾಯಿ 44.42 ನಿಮಿಷ ಗಳಲ್ಲಿ ಪೂರ್ಣಗೊಳಿಸಿ ದ್ವಿತೀಯ ಸ್ಥಾನದೊಂದಿಗೆ 15 ಸಾವಿರ ರೂ.ಬಹುಮಾನ, ವಿಜಯಪುರದ ಬಸಪ್ಪ ತೇರದಾಳ 44.43 ನಿಮಿಷಗಳಲ್ಲಿ ಪೂರ್ಣಗೊಳಿಸಿ ತೃತೀಯ ಸ್ಥಾನದೊಂದಿಗೆ 11 ಸಾವಿರ ರೂ.ಬಹುಮಾನ ಗಳಿಸಿದರು.

ಗಡಹಿಂಗ್ಲಜ್‌ನ ಶಿವಾನಂದ ಖಾಪರೆ ಮತ್ತು ಜಮಖಂಡಿಯ ಶ್ರೀಧರ ಸಾವನೂರ ಅನುಕ್ರಮವಾಗಿ 4 ಮತ್ತು 5ನೇ ಸ್ಥಾನ ಗಳಿಸಿದರು. ಕರ್ನಾಟಕ ಮತ್ತು ಮಹಾರಾಷ್ಟ್ರ ರಾಜ್ಯಗಳ ಅಪಾರ ಕ್ರೀಡಾಪಟುಗಳು ಸ್ಪರ್ಧೆಯಲ್ಲಿ ಭಾಗವಹಿಸಿದ್ದರು.

ಶಿವಕಾಂತ ಚಂದ್ರಕುಡೆ, ಲಕ್ಷ ್ಮಣ ಠಗರೆ ಸ್ಪರ್ಧೆ ಉದ್ಘಾಟಿಸಿದರು. ತೀರ್ಪುಗಾರರಾಗಿ ಎಸ್‌.ಆರ್‌. ಗಾವಡೆ, ಸಂಜಯ ದೇಸಾಯಿ, ವಿನಾಯಕ ಕೆರಿಮನಿ, ಶಶಿರಾಜ ತೇಲಿ ಕಾರ್ಯನಿರ್ವಹಿಸಿದರು. ಸಮಿತಿ ಅಧ್ಯಕ್ಷ ಮಾಜಿ ನಗರಸಭೆ ಉಪಾಧ್ಯಕ್ಷ ಸುನೀಲ ಪಾಟೀಲ, ವಿ.ಎಸ್‌.ಎಂ. ಸಂಚಾಲಕ ಸಂಜಯ ಮೊಳವಾಡೆ, ರವಿಂದ್ರ ಕೋಠಿವಾಲೆ, ಬಸವರಾಜ ವಸೇದಾರ, ಪಾಂಡುರಂಗ ಸಆವಂತ, ರವಿಂದ್ರ ಚಂದ್ರಕುಡೆ, ಡಾ. ಮಹೇಶ ಐನಾಪುರೆ, ಸೋಮನಾಥ ಚಂದ್ರಕುಡೆ, ಮನಿಷಾ ಉಪಾಧ್ಯೆ, ಮೊದಲಾದವರು ವಿಜೇತರಿಗೆ ಬಹುಮಾನ ವಿತರಿಸಿದರು.

ಮಲ್ಲಿಕಾರ್ಜುನ ಗಡಕರಿ, ಸದಾಶಿವ ಧುಮಾಳೆ, ಬಾಬಾಸಾಹೇಬ ಚಂದ್ರಕುಡೆ, ಅಪ್ಪಯ್ಯ ಚೌಗುಲೆ, ಚಂದ್ರಕಾಂತ ಚೌಗುಲೆ, ಬಾಬಾಸಾಹೇಬ ಸಾಜಣ್ಣವರ, ಬಾಳಕೃಷ್ಣ ವಸೇದಾರ, ಪ್ರಮೋದ ಪಣದೆ, ಮೊದಲಾದವರು ಉಪಸ್ಥಿತರಿದ್ದರು.

ಮ್ಯಾರಾಥಾನ್‌ ಸ್ಪರ್ಧೆ:
ಸಮಿತಿಯಿಂದ ಆಯೋಜಿಸಿದ 21 ಕಿಮೀ ಅಂತರದ ಮ್ಯಾರಾಥಾನ್‌ ಸ್ಪರ್ಧೆಯಲ್ಲಿ ಸತತ ನಾಲ್ಕನೇ ಬಾರಿ ಗಡಹಿಂಗ್ಲಜ್‌ನ ಪರಷುರಾಮ ಭೋಯಿ 1.8 ತಾಸಿನಲ್ಲಿ ಪೂರ್ಣಗೊಳಿಸಿ ಪ್ರಥಮ ಸ್ಥಾನದ 11 ಸಾವಿರ ರೂ. ಪಡೆದರು. ಕೊಲ್ಲಾಪುರ ಜಿಲ್ಲೆಯ ಮ್ಹಾಕವೆಯ ತಾನಾಜಿ ಚೌಗುಲೆ 1.9 ತಾಸಿನಲ್ಲಿ ಕ್ರಮಿಸಿ ದ್ವಿತೀಯ ಸ್ಥಾನದೊಂದಿಗೆ 8 ಸಾವಿರ ರೂ., ಹುನ್ನೂರನ ಸಿದ್ದಪ್ಪ ದುಂಡಗೆ 1.11ತಾಸಿನಲ್ಲಿ ಕ್ರಮಿಸಿ ತೃತೀಯ ಸ್ಥಾನದೊಂದಿಗೆ 7 ಸಾವಿರ ರೂ. ಬಹುಮಾನ ಪಡೆದರು. ಐನಾಪುರದ ಶಿವಾನಂದ ದೊಡ್ಡಮನಿ 4ನೇ ಮತ್ತು ತಾಲೂಕಿನ ಶ್ರೀಪೇವಾಡಿಯ ಆನಂದ 5ನೇ ಸ್ಥಾನ ಪಡೆದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ