ಆ್ಯಪ್ನಗರ

ಬೈಕ್‌ ಮುಖಾಮುಖಿ ಡಿಕ್ಕಿ: ಓರ್ವ ಸಾವು

ಸುರೇಬಾನ: ಸಮೀಪದ ಅವರಾದಿ-ಸಂಗಳ ಮಾರ್ಗದ ಮಧ್ಯೆ ಬೈಕ್‌ಗಳ ಮುಖಾಮುಖಿ ಡಿಕ್ಕಿಯಲ್ಲಿ ಸವಾರನೊಬ್ಬ ಮಂಗಳವಾರ ರಾತ್ರಿ ಅಪಘಾತದಲ್ಲಿ ಮೃತಪಟ್ಟಿದ್ದಾನೆ...

Vijaya Karnataka 9 Jan 2019, 5:00 am
ಸುರೇಬಾನ : ಸಮೀಪದ ಅವರಾದಿ-ಸಂಗಳ ಮಾರ್ಗದ ಮಧ್ಯೆ ಬೈಕ್‌ಗಳ ಮುಖಾಮುಖಿ ಡಿಕ್ಕಿಯಲ್ಲಿ ಸವಾರನೊಬ್ಬ ಮಂಗಳವಾರ ರಾತ್ರಿ ಅಪಘಾತದಲ್ಲಿ ಮೃತಪಟ್ಟಿದ್ದಾನೆ.
Vijaya Karnataka Web bike accident rider killed
ಬೈಕ್‌ ಮುಖಾಮುಖಿ ಡಿಕ್ಕಿ: ಓರ್ವ ಸಾವು


ರಾಮದುರ್ಗ ತಾಲೂಕಿನ ಕಲಹಾಳ ಗ್ರಾಮದ ನೀಲಪ್ಪಗೌಡ ಗದಿಗೆಪ್ಪಗೌಡ ಅಜಗುಂಡಿ(22) ಮೃತಪಟ್ಟವ. ಸುರೇಬಾನ ಕಡೆಯಿಂದ ತನ್ನ ಮನೆಗೆ ತೆರಳುತ್ತಿದ್ದ ವೇಳೆ ಈ ಅಪಘಾತ ಸಂಭವಿಸಿದೆ. ಗಾಯಗೊಂಡಿರುವ ಚುರಚಪ್ಪ ಶಿವಪ್ಪ ಯಾವಗಲ್ಲ(35) ಕೆಎಸ್‌ಆರ್‌ಟಿಸಿ ಸಿಬ್ಬಂದಿ ಬಸವರಾಜ ಪಡೆಯಪ್ಪನವರ(24) ರಾಮದುರ್ಗ ತಾಲೂಕು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು ಅವರ ಸ್ಥಿತಿ ಚಿಂತಾಜನಕವಾಗಿದೆ. ಘಟನೆಯಕುರಿತು ಯಾವುದೇ ಮಾಹಿತಿ ಲಭ್ಯವಾಗಿಲ್ಲ.

ಘಟನಾ ಸ್ಥಳಕ್ಕೆ ರಾಮದುರ್ಗ ಪ್ರೊಬೆಷನರಿ ಡಿಎಸ್‌ಪಿ ಪ್ರವೀಣ ಹಾಗೂ ಪಿಎಸ್‌ಐ ಆರ್‌.ಎಂ.ಸಂಕನಾಳ ಘಟನೆ ಕುರಿತು ತನಿಖೆ ನಡೆಸಿದ್ದಾರೆ. ಹವಾಲ್ದಾರಗಳಾದ ಟಿ.ಕೆ.ವಾಲಿಕಾರ, ಬಿ.ಕೆ.ರಂಗಣ್ಣವರ ಹಾಗೂ ಪಿಸಿ ಶಿವಾನಂದ ಭಾಂಗಿ ಇದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ