ಆ್ಯಪ್ನಗರ

ನಿಪ್ಪಾಣಿ ನಗರದ ಹೊರವಲಯದಲ್ಲಿರುವ ರಾಷ್ಟ್ರೀಯ ಹೆದ್ದಾರಿಯಲ್ಲಿ ಕಂಟೇನರ್‌ಗೆ ಬೈಕ್‌ ಡಿಕ್ಕಿ; ಮಹಿಳೆ ಸಾವು

ನಿಪ್ಪಾಣಿ: ನಗರದ ಹೊರವಲಯದಲ್ಲಿರುವ ಪುಣೆ-ಬೆಂಗಳೂರು ...

Vijaya Karnataka 30 Jun 2020, 5:00 am
ನಿಪ್ಪಾಣಿ: ನಗರದ ಹೊರವಲಯದಲ್ಲಿರುವ ಪುಣೆ-ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿಸೋಮವಾರ ಕಂಟೇನರ್‌ಗೆ ಬೈಕ್‌ ಡಿಕ್ಕಿ ಹೊಡೆದ ಪರಿಣಾಮ ಬೈಕ್‌ನಲ್ಲಿದ್ದ ಮಹಿಳೆ ಸ್ಥಳದಲ್ಲೆಮೃತಪಟ್ಟಿದ್ದು ಅವರ ಪತಿ ಗಂಭೀರ ಗಾಯಗೊಂಡಿದ್ದಾರೆ.
Vijaya Karnataka Web download
ಸಾಂದರ್ಭಿಕ


ಕೊಲ್ಲಾಪುರ ಜಿಲ್ಲೆಯ ಆಜರಾ ತಾಲೂಕಿನ ಸುಳೆ ಗ್ರಾಮದ ವಿಮಲಾ ಗಂಗಾರಾಮ ಬರಾಟೆ(65) ಮೃತಪಟ್ಟವರು. ಗಂಭೀರವಾಗಿ ಗಾಯಗೊಂಡ ಗಂಗಾರಾಮ ರಾಮು ಬರಾಟೆ(70) ಅವರಿಗೆ ಕೊಲ್ಲಾಪುರದ ಸಿಪಿಆರ್‌ ಆಸ್ಪತ್ರೆಯಲ್ಲಿಚಿಕಿತ್ಸೆ ನೀಡಲಾಗುತ್ತಿದೆ. ಹೆಲ್ಮೆಟ್‌ ಧರಿಸಿದ್ದರಿಂದ ಅವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎನ್ನಲಾಗಿದೆ.

ಬರಾಟೆ ದಂಪತಿ ಕೊಲ್ಲಾಪುರದಲ್ಲಿರುವ ತಮ್ಮ ಮಗಳನ್ನು ಭೇಟಿಯಾಗಲು ತೆರಳಿದ್ದರು. ಮರಳಿ ನಗರದ ಮಾರ್ಗವಾಗಿ ಸ್ವಗ್ರಾಮಕ್ಕೆ ಹೋಗುವಾಗ ಅವರ ಬೈಕ್‌, ಮುಂಬಯಿಯಿಂದ ಬೆಂಗಳೂರಿಗೆ ಕಬ್ಬಿಣ ಸಾಗಿಸುತ್ತಿದ್ದ ಕಂಟೇನರ್‌ಗೆ ಹಿಂದಿನಿಂದ ಜೋರಾಗಿ ಅಪ್ಪಳಿಸಿದೆ. ಮುಂದಿದ್ದ ಕಂಟೇನರ್‌ ಚಾಲಕ ಆಕಸ್ಮಿಕವಾಗಿ ಬ್ರೆಕ್‌ ಹಾಕಿದ ಪರಿಣಾಮ ಅಪಘಾತವುಂಟಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಘಟನಾ ಸ್ಥಳಕ್ಕೆ ಪಿಎಸ್‌ಐ ಅನಿಲ ಕುಂಭಾರ ಹಾಗೂ ಸಿಬ್ಬಂದಿ ಧಾವಿಸಿ ಪರಿಶೀಲನೆ ನಡೆಸಿದರು. ಸ್ಥಳೀಯ ಶಹರ ಪೊಲೀಸ್‌ ಠಾಣೆಯಲ್ಲಿಪ್ರಕರಣ ದಾಖಲಾಗಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ