ಆ್ಯಪ್ನಗರ

ನಿಂತ ಟ್ರ್ಯಾಕ್ಟರ್‌ಗೆ ಡಿಕ್ಕಿ: ಬೈಕ್‌ ಸವಾರ ಸಾವು

ಸುರೇಬಾನ: ರಾಮದುರ್ಗ-ಕೊಣ್ಣೂರ ಮಾರ್ಗದಲ್ಲಿ ಶಬರಿ ದೇವಸ್ಥಾನ ಮಹಾದ್ವಾರದ ಬಳಿ ನಿಂತ ಕಬ್ಬಿನ ಟ್ರ್ಯಾಕ್ಟರ್‌ಗೆ ಡಿಕ್ಕಿಯಾಗಿ ಬೈಕ್‌ ಸವಾರನೊಬ್ಬ ...

Vijaya Karnataka 21 Jan 2019, 5:00 am
ಸುರೇಬಾನ : ರಾಮದುರ್ಗ-ಕೊಣ್ಣೂರ ಮಾರ್ಗದಲ್ಲಿ ಶಬರಿ ದೇವಸ್ಥಾನ ಮಹಾದ್ವಾರದ ಬಳಿ ನಿಂತ ಕಬ್ಬಿನ ಟ್ರ್ಯಾಕ್ಟರ್‌ಗೆ ಡಿಕ್ಕಿಯಾಗಿ ಬೈಕ್‌ ಸವಾರನೊಬ್ಬ ಸಾವಿಗೀಡಾಗಿದ್ದಾನೆ.
Vijaya Karnataka Web bike collide with parked tractor two riders death
ನಿಂತ ಟ್ರ್ಯಾಕ್ಟರ್‌ಗೆ ಡಿಕ್ಕಿ: ಬೈಕ್‌ ಸವಾರ ಸಾವು


ಗೊಣ್ಣಾಗರ ಗ್ರಾಮದ ಬಸಪ್ಪ ಸಿದ್ದಪ್ಪ ಹಳ್ಳಿ (35) ಮೃತಪಟ್ಟ ವ್ಯಕ್ತಿ. ಭಾನುವಾರ ರಾತ್ರಿ 9.30ಕ್ಕೆ ಸುರೇಬಾನ ಕಡೆಯಿಂದ ತಮ್ಮ ಮನೆಗೆ ತೆರಳುತ್ತಿದ್ದ ವೇಳೆ ಈ ದುರ್ಘಟನೆ ಸಂಭವಿಸಿದೆ. ಈ ಬೈಕಿನಲ್ಲಿ ಹಿಂಬದಿ ಕುಳಿತಿದ್ದ ಲಕ್ಷ ್ಮಣ ಫಕೀರಪ್ಪ ಹಳ್ಳಿ (24) ಹಾಗೂ ಚಂದ್ರಗೌಡ ಹನಮಂತಗೌಡ ಚಿಕ್ಕಣ್ಣವರ (28) ಗಾಯಗೊಂಡಿದ್ದಾರೆ. ಅವರನ್ನು ರಾಮದುರ್ಗ ತಾಲೂಕು ಆಸ್ಪತ್ರೆಯಲ್ಲಿ ದಾಖಲಿಸಲಾಗಿದ್ದು, ಒಬ್ಬನ ಸ್ಥಿತಿ ಚಿಂತಾಜನಕವಾಗಿದೆ.

ಘಟನಾ ಸ್ಥಳಕ್ಕೆ ಸುರೇಬಾನ ಪೊಲೀಸ್‌ ಉಪ ಠಾಣೆಯ ಹವಾಲ್ದಾರ ಬಿ.ಕೆ.ರಂಗಣ್ಣವರ ಭೇಟಿ ನೀಡಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ