ಆ್ಯಪ್ನಗರ

ನಿಂತ ಲಾರಿಗೆ ಬೈಕ್‌ ಡಿಕ್ಕಿ; ನಾಲ್ವರ ಸಾವು

ಅಗಸಗಿ (ಬೆಳಗಾವಿ): ಇಲ್ಲಿನ ರಾಷ್ಟ್ರೀಯ ...

Vijaya Karnataka 9 Dec 2019, 5:00 am
ಅಗಸಗಿ (ಬೆಳಗಾವಿ): ಇಲ್ಲಿನ ರಾಷ್ಟ್ರೀಯ ಹೆದ್ದಾರಿ-4ರಲ್ಲಿನಿಂತಿದ್ದ ಲಾರಿಗೆ ಬೈಕ್‌ ಡಿಕ್ಕಿ ಹೊಡೆದು ಮೂವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ.
Vijaya Karnataka Web bike collides with a standing truck the death of four
ನಿಂತ ಲಾರಿಗೆ ಬೈಕ್‌ ಡಿಕ್ಕಿ; ನಾಲ್ವರ ಸಾವು


ಕೇದನೂರು ಗ್ರಾಮದ ಕಲ್ಮೇಶ್ವರಗಲ್ಲಿಯ ಸಂಜು ರಾಜಾಯಿ (29), ಸಂಭಾಜಿ ಗಲ್ಲಿಯ ಪ್ರಕಾಶ ಅಲಿಯಾಸ್‌ ಪಪ್ಪು ಕಲ್ಲಪ್ಪಾ ಚಂಡಕಿ (27), ಪ್ರಭುದೇವ ಗಲ್ಲಿಯ ಅಡಿವೆಪ್ಪಾ ಗುಜ್ಜನವರ (32) ಮೃತಪಟ್ಟವರು.

ಇವರು ಖಾನಾಪುರ ತಾಲೂಕಿನ ನಂದಿಹಳ್ಳಿ ಗ್ರಾಮದ ಸಂಬಂಧಿಕರ ಭತ್ತದ ಒಕ್ಕಲು ಮುಗಿಸಿ ಬೆಳಗಾವಿ ತಾಲೂಕಿನ ಕೇದನೂರ ಗ್ರಾಮಕ್ಕೆ ಬೈಕ್‌ನಲ್ಲಿತೆರಳುತ್ತಿದ್ದರು. ಭಾನುವಾರ ಬೆಳಗಿನ ಜಾವ 1 ಗಂಟೆ ವೇಳೆಗೆ ಇವರ ಬೈಕ್‌ ನಿಂತಿದ್ದ ಲಾರಿಗೆ ಡಿಕ್ಕಿ ಹೊಡೆದಿದೆ. ಎಪಿಎಂಸಿ ಮತ್ತು ಕಂಗ್ರಾಳಿ ಕೆಎಚ್‌ ಗ್ರಾಮದ ರಸ್ತೆ ದುರಸ್ತಿ ಕೆಲಸ ನಡೆದಿದ್ದರಿಂದ ಮೂವರು ರಾಷ್ಟ್ರೀಯ ಹೆದ್ದಾರಿ-4ರ ಮೂಲಕ ಕಾಕತಿ - ಹೊನಗಾ ಕಡೆಯಿಂದ ಊರಿಗೆ ಹೊರಟಿದ್ದರು ಎನ್ನಲಾಗಿದೆ. ಬೆಳಗಾವಿ ಉತ್ತರ ಸಂಚಾರಿ ಠಾಣೆಯಲ್ಲಿಪ್ರಕರಣ ದಾಖಲಾಗಿದೆ.

ವಿದ್ಯಾರ್ಥಿ ಸಾವು
ಬೆಳಗಾವಿ ತಾಲೂಕಿನ ಹೊನಗಾ ಬಳಿ ಶನಿವಾರ ರಾತ್ರಿ ನಿಂತ ಲಾರಿಗೆ ಬೈಕ್‌ ಡಿಕ್ಕಿ ಹೊಡೆದ ಪರಿಣಾಮ ಓರ್ವ ವಿದ್ಯಾರ್ಥಿ ಮೃತಪಟ್ಟಿದ್ದು, ಇನ್ನೋರ್ವ ಗಾಯಗೊಂಡಿದ್ದಾನೆ.

ಗೋಕಾಕ ತಾಲೂಕು ಧುಪದಾಳದ ಅಕ್ಷಯ ಹುಂಡೇಕರ(23) ಮೃತ ವಿದ್ಯಾರ್ಥಿ. ಹುಕ್ಕೇರಿ ತಾಲೂಕು ಸಂಕೇಶ್ವರ ಸಮೀಪದ ಕೇಸ್ತಿ ನಿವಾಸಿ ಸಚಿನ್‌ ಕುಲಕುರ್ಣಿ(23) ಗಾಯಗೊಂಡಿದ್ದು, ಚಿಕಿತ್ಸೆಗಾಗಿ ನಗರದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಇವರು ಊಟಕ್ಕೆಂದು ಹೊನಗಾದಲ್ಲಿರುವ ದಾಭಾಕ್ಕೆ ಬೈಕ್‌ ಮೂಲಕ ಹೋಗುತ್ತಿದ್ದಾಗ ಅಪಘಾತ ಸಂಭವಿಸಿದೆ. ಅಕ್ಷಯ ಹುಂಡೇಕರ ಎಂ. ಟೆಕ್‌ ಅಂತಿಮ ವರ್ಷದಲ್ಲಿವ್ಯಾಸಂಗ ಮಾಡುತ್ತಿದ್ದರು. ಈ ಕುರಿತು ಕಾಕತಿ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ