ಆ್ಯಪ್ನಗರ

ವಿಶ್ವ ಯೋಗ ದಿನದ ಜಾಗೃತಿಗಾಗಿ ಬೈಕ್‌ ರಾರ‍ಯಲಿ

ಅಥಣಿ: ವಿಶ್ವ ಯೋಗ ದಿನಾಚರಣೆ ಜಾಗೃತಿಗಾಗಿ ಪಟ್ಟಣದಲ್ಲಿ ಗುರುವಾರ ಯೋಗ ಶಿಕ್ಷ ಕರು, ಶಿಬಿರಾರ್ಥಿಗಳಿಂದ ಯೋಗ ಗುರು ಎಬಿ...

Vijaya Karnataka 21 Jun 2019, 5:00 am
ಅಥಣಿ: ವಿಶ್ವ ಯೋಗ ದಿನಾಚರಣೆ ಜಾಗೃತಿಗಾಗಿ ಪಟ್ಟಣದಲ್ಲಿ ಗುರುವಾರ ಯೋಗ ಶಿಕ್ಷ ಕರು, ಶಿಬಿರಾರ್ಥಿಗಳಿಂದ ಯೋಗ ಗುರು ಎ.ಬಿ. ಪಾಟೀಲ ನೇತೃತ್ವದಲ್ಲಿ ಬೈಕ್‌ ರಾರ‍ಯಲಿ ನಡೆಯಿತು.
Vijaya Karnataka Web BEL-20 ATHANI-01


ಜೆ.ಎ. ಹೈಸ್ಕೂಲ್‌ ಆವರಣದಲ್ಲಿ ರಾರ‍ಯಲಿಗೆ ಡಾ. ದೊಡ್ಡನಿಂಗಪ್ಪಗೋಳ, ಡಾ. ವಿ.ಎಂ. ಚಿಂಚೋಳಿಮಠ ಚಾಲನೆ ನೀಡಿದರು.

ರಾರ‍ಯಲಿ ಮೂಲಕ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಹಾಗು ವಿವಿಧ ಉಪನಗರಗಳಲ್ಲಿ ಸಂಚರಿಸಿ ಘೋಷಣೆಗಳ ಮೂಲಕ ಜನರಲ್ಲಿ ಜಾಗೃತಿ ಮೂಡಿಸಲಾಯಿತು.

ಸ್ಥಳೀಯ ಭೋಜರಾಜ ಕ್ರೀಡಾಂಗಣದಲ್ಲಿ ಶುಕ್ರವಾರ ಬೆಳಗ್ಗೆ 6ಕ್ಕೆ ವಿಶ್ವಯೋಗ ದಿನಾಚರಣೆ ನಡೆಯಲಿದ್ದು ಜನತೆ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ಮನವಿ ಮಾಡಲಾಯಿತು.

ಯೋಗ ಶಿಕ್ಷ ಕರಾದ ಸುರೇಶ ಚಿಕ್ಕಟ್ಟಿ, ಅಪ್ಪಾಸಾಹೇಬ ತಾಂಬಟ, ಸುರೇಖಾ ತಾಂಬಟ, ವಿಶಾಲಾಕ್ಷಿ ಅಂಬಿ, ನಾಗರಾಜ ದಾಸರ, ರವಿ ಉಳಾಗಡ್ಡಿ, ಸದಾಶಿವ ಚಿಕ್ಕಟ್ಟಿ, ಎ.ಸಿ. ಬಾಗಿ, ಜೋಶಿ, ಎಂ.ಡಿ. ಬಸಗೌಡರ ಮುಂತಾದವರು ರಾರ‍ಯಲಿಯಲ್ಲಿ ಭಾಗವಹಿಸಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ