ಆ್ಯಪ್ನಗರ

ಲಾರಿಗೆ ಬಡಿದು ಬೈಕ್‌ ಸವಾರ ಸಾವು

ನಿಪ್ಪಾಣಿ: ಇಲ್ಲಿನ ನಿಪ್ಪಾಣಿ ಮುರ್ಗುಡ್‌ ರಸ್ತೆಯಲ್ಲಿ ಲಾರಿ ...

Vijaya Karnataka 11 Mar 2020, 5:00 am
ನಿಪ್ಪಾಣಿ: ಇಲ್ಲಿನ ನಿಪ್ಪಾಣಿ ಮುರ್ಗುಡ್‌ ರಸ್ತೆಯಲ್ಲಿಲಾರಿ ಮತ್ತು ದ್ವಿಚಕ್ರ ವಾಹನದ ಮಧ್ಯೆ ಮಂಗಳವಾರ ಸಂಭವಿಸಿದ ರಸ್ತೆ ಅಪಘಾತದಲ್ಲಿದ್ವಿಚಕ್ರ ವಾಹನ ಸವಾರರೊಬ್ಬರು ಸ್ಥಳದಲ್ಲೇ ಮೃತಪಟ್ಟಿದ್ದಾರೆ.
Vijaya Karnataka Web 10 NPN 7 P_53
ವಿಠ್ಠಲ ಬೋಂಗಾರ್ಡೆ


ತಾಲೂಕಿನ ಗಾಯಕವಾಡಿ ಗ್ರಾಮದ ರೈತ ವಿಠ್ಠಲ ರಾಮಚಂದ್ರ ಬೋಂಗಾರ್ಡೆ(45)ಮೃತಪಟ್ಟವರು. ನಗರದಿಂದ ಗಾಯಕವಾಡಿಗೆ ತೆರಳುತ್ತಿದ್ದ ಸಂದರ್ಭದಲ್ಲಿವಿಠ್ಠಲ್‌ ಲಾರಿ ಹಿಂದೆ ಇದ್ದರು.

ದೇವಚಂದ್‌ ಕಾಲೇಜ್‌ ಸಮೀಪ ಬಳಿ ಚಾಲಕ ಆಕಸ್ಮಿಕವಾಗಿ ಲಾರಿಯನ್ನು ಬಲಬದಿಗೆ ತಿರುಗಿಸಿದಾಗ ದ್ವಿಚಕ್ರ ವಾಹನ ಲಾರಿಗೆ ಅಪ್ಪಳಿಸಿದ್ದರಿಂದ ಈ ಅಪಘಾತ ಸಂಭವಿಸಿದೆ ಎಂದು ಸ್ಥಳೀಯ ಶಹರ್‌ ಪೊಲೀಸ್‌ ಠಾಣೆಯಲ್ಲಿಪ್ರಕರಣ ದಾಖಲಾಗಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ