ಬೆಳಗಾವಿ ಲೋಕಸಭೆ ಬೈಎಲೆಕ್ಷನ್ನಲ್ಲಿ ಮುಸ್ಲಿಮರಿಗೆ ಟಿಕೆಟ್ ನೀಡೋದಿಲ್ಲ; ಕೆಎಸ್ ಈಶ್ವರಪ್ಪ
ಸಿದ್ಧರಾಮಯ್ಯ ಅವರ ವರ್ಚಸ್ಸು ಎಲ್ಲಿದೆ ಎಂದು ಪ್ರಶ್ನಿಸಿದ ಈಶ್ವರಪ್ಪ, ಈಚೆಗೆ ನಡೆದ ಎರಡು ಕ್ಷೇತ್ರದ ಉಪಚುನಾವಣೆಯಲ್ಲಿ ಏನಾಯಿತು. ಬದಾಮಿಯಲ್ಲಿ ಸ್ವಲ್ಪ ಹೆಚ್ಚು ಕಡಿಮೆ ಆಗಿದ್ದರೆ ಸಿದ್ದರಾಮಯ್ಯ ರಾಜಕಾರಣದಲ್ಲಿ ಇರತ್ತಿರಲಿಲ್ಲ. ರಾಜಕೀಯವಾಗಿ ಬದುಕಿದ್ದೇವೆಂದು ತೋರಿಸಲು ಏನಾದರೂ ಹೇಳಿಕೆ ನೀಡುತ್ತಿದ್ದಾರೆ ಎಂದು ಟೀಕಿಸಿದರು.
Vijaya Karnataka Web 28 Nov 2020, 2:10 pm
ಬೆಳಗಾವಿ: ಬೆಳಗಾವಿ ಲೋಕಸಭೆ ಉಪಚುನಾವಣೆಯಲ್ಲಿ ಮುಸ್ಲಿಮರಿಗೆ ಬಿಜೆಪಿ ಟಿಕೆಟ್ ನೀಡುವುದಿಲ್ಲ. ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಕೆ.ಎಸ್.ಈಶ್ವರಪ್ಪ ಹೇಳಿದ್ದಾರೆ. ಬೆಳಗಾವಿ ನಗರದಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬೆಳಗಾವಿ ಹಿಂದುತ್ವದ ಕೇಂದ್ರ. ಹಾಗಾಗಿ ಮುಸ್ಲಿಮರಿಗೆ ಟಿಕೆಟ್ಕೊಡುವ ಪ್ರಶ್ನೆ ಉದ್ಭವಿಸುವುದಿಲ್ಲ. ಹಿಂದುತ್ವವಾದಿಗಳಿಗೆ ಟಿಕೆಟ್ ನೀಡತ್ತೇವೆ ಎಂದು ಸ್ಪಷ್ಟಪಡಿಸಿದ್ದಾರೆ.
ಅತೃಪ್ತರ ತ್ಯಾಗದಿಂದ ಸರ್ಕಾರ ಬಂದಿದೆ, ಅವರ ಋಣ ತೀರಿಸುವ ವಿಚಾರದಲ್ಲಿ ಗೊಂದಲವಿಲ್ಲ; ಈಶ್ವರಪ್ಪ
ಇದೇ ವೇಳೆ ಸಿದ್ಧರಾಮಯ್ಯ ಅವರ ವರ್ಚಸ್ಸು ಎಲ್ಲಿದೆ ಎಂದು ಪ್ರಶ್ನಿಸಿದ ಈಶ್ವರಪ್ಪ, ಈಚೆಗೆ ನಡೆದ ಎರಡು ಕ್ಷೇತ್ರದ ಉಪಚುನಾವಣೆಯಲ್ಲಿ ಏನಾಯಿತು. ಬದಾಮಿಯಲ್ಲಿ ಸ್ವಲ್ಪ ಹೆಚ್ಚು ಕಡಿಮೆ ಆಗಿದ್ದರೆ ಸಿದ್ದರಾಮಯ್ಯ ರಾಜಕಾರಣದಲ್ಲಿ ಇರತ್ತಿರಲಿಲ್ಲ. ರಾಜಕೀಯವಾಗಿ ಬದುಕಿದ್ದೇವೆಂದು ತೋರಿಸಲು ಏನಾದರೂ ಹೇಳಿಕೆ ನೀಡುತ್ತಿದ್ದಾರೆ ಎಂದು ಟೀಕಿಸಿದರು.
ಇನ್ನು ವಿಡಿಯೋ ಲಿಂಕ್ ಆಗಿದೆ. ಅದರಲ್ಲಿ ಶಾಸಕ, ವಿಧಾನ ಪರಿಷತ್ ಸದಸ್ಯ, ಸಚಿವರಿದ್ದಾರೆಂದು ಹೇಳಿಕೆ ಕೊಡುವುದಕ್ಕೆ ಡಿ.ಕೆ.ಶಿವಕುಮಾರ ಅವರಿಗೆ ನಾಚಿಕೆ ಆಗಬೇಕು ಎಂದ ಕೆಎಸ್ ಈಶ್ವರಪ್ಪ, ವಿಡಿಯೋದಲ್ಲಿ ಯಾರಿದ್ದಾರೆಂದು ಬಹಿರಂಗಪಡಿಸಿ, ಪ್ರಚಾರಕ್ಕಾಗಿ ರಾಜಕಾರಣ ಮಾಡುವುದನ್ನು ಬಿಡಬೇಕು. ಈ ರೀತಿಯ ಹೇಳಿಕೆ ಖಂಡಿಸುತ್ತೇನೆ. ವಿಡಿಯೋವೊಂದು ಲಿಂಕ್ ಆಗಿದೆ ಎಂಬ ಡಿ.ಕೆ. ಶಿವಕುಮಾರ್ ಅವರ ಹೇಳಿಕೆ ರಾಜ್ಯದ ಜನರನ್ನು ದಿಕ್ಕು ತಪ್ಪಿಸುವ ಕೆಲಸ ಎಂದು ಕಿಡಿಕಾರಿದರು.
ಗೋವಾದ ಲೀಲಾ ಪ್ಯಾಲೇಸ್ನಲ್ಲಿ ಅದ್ಧೂರಿಯಾಗಿ ನೆರವೇರಿದ ಲಕ್ಷ್ಮೀ ಹೆಬ್ಬಾಳ್ಕರ್ ಪುತ್ರನ ವಿವಾಹ
ಇನ್ನು ಅವರಿಗೆ ಗೊತ್ತು ಗುರಿಯಿಲ್ಲ. ಕಾಂಗ್ರೆಸ್ನಲ್ಲಿ ಎರಡು ಗುಂಪುಗಳಿವೆ. ರಾಜಕಾರಣದಲ್ಲಿ ಹೇಗೆ ಬದುಕಬೇಕೆಂದು ಏನಾದರೂ ಹುಟ್ಟು ಹಾಕುತ್ತಿದ್ದಾರೆ. ಏನಾದರೂ ಲಿಂಕ್ ಆಗಿರುವ ವಿಡಿಯೋ ಇದ್ದರೆ ಬಹಿರಂಗಪಡಿಸಲಿ. ಯಾವುದೇ ಆಪಾದನೆ ಮಾಡಬೇಕೆಂದರೆ ಸೂಕ್ತ ದಾಖಲೆಗಳು ಬೇಕಲ್ಲ. ಡಿ.ಕೆ ಶಿವಕುಮಾರ ಅವರದ್ದು ಮುಟ್ಟಾಳತನದ ಹೇಳಿಕೆ ಎಂದು ಟೀಕಿಸಿದರು. ಅಲ್ಲದೇ ದೇಶ ಮತ್ತು ರಾಜ್ಯದಲ್ಲಿ ಕಾಂಗ್ರೆಸ್ ನೆಲಕಚ್ಚಿ ಹೋಗಿದೆ. ಕೆಟ್ಟ ರಾಜಕಾರಣ ಮಾಡುವುದನ್ನು ಕಾಂಗ್ರೆಸ್ ನವರು ಬಿಡಬೇಕು. ಬಿಜೆಪಿಯಲ್ಲಿ ಬಿಟ್ಟರೆ ಬೇರೆ ಯಾವುದೇ ಪಾರ್ಟಿಯಲ್ಲಿ ಪ್ರಜಾಪ್ರಭುತ್ವ ವ್ಯವಸ್ಥೆಯಿಲ್ಲ ಎಂದರು.
ಅತೃಪ್ತರ ತ್ಯಾಗದಿಂದ ಸರ್ಕಾರ ಬಂದಿದೆ, ಅವರ ಋಣ ತೀರಿಸುವ ವಿಚಾರದಲ್ಲಿ ಗೊಂದಲವಿಲ್ಲ; ಈಶ್ವರಪ್ಪ
ಇದೇ ವೇಳೆ ಸಿದ್ಧರಾಮಯ್ಯ ಅವರ ವರ್ಚಸ್ಸು ಎಲ್ಲಿದೆ ಎಂದು ಪ್ರಶ್ನಿಸಿದ ಈಶ್ವರಪ್ಪ, ಈಚೆಗೆ ನಡೆದ ಎರಡು ಕ್ಷೇತ್ರದ ಉಪಚುನಾವಣೆಯಲ್ಲಿ ಏನಾಯಿತು. ಬದಾಮಿಯಲ್ಲಿ ಸ್ವಲ್ಪ ಹೆಚ್ಚು ಕಡಿಮೆ ಆಗಿದ್ದರೆ ಸಿದ್ದರಾಮಯ್ಯ ರಾಜಕಾರಣದಲ್ಲಿ ಇರತ್ತಿರಲಿಲ್ಲ. ರಾಜಕೀಯವಾಗಿ ಬದುಕಿದ್ದೇವೆಂದು ತೋರಿಸಲು ಏನಾದರೂ ಹೇಳಿಕೆ ನೀಡುತ್ತಿದ್ದಾರೆ ಎಂದು ಟೀಕಿಸಿದರು.
ಇನ್ನು ವಿಡಿಯೋ ಲಿಂಕ್ ಆಗಿದೆ. ಅದರಲ್ಲಿ ಶಾಸಕ, ವಿಧಾನ ಪರಿಷತ್ ಸದಸ್ಯ, ಸಚಿವರಿದ್ದಾರೆಂದು ಹೇಳಿಕೆ ಕೊಡುವುದಕ್ಕೆ ಡಿ.ಕೆ.ಶಿವಕುಮಾರ ಅವರಿಗೆ ನಾಚಿಕೆ ಆಗಬೇಕು ಎಂದ ಕೆಎಸ್ ಈಶ್ವರಪ್ಪ, ವಿಡಿಯೋದಲ್ಲಿ ಯಾರಿದ್ದಾರೆಂದು ಬಹಿರಂಗಪಡಿಸಿ, ಪ್ರಚಾರಕ್ಕಾಗಿ ರಾಜಕಾರಣ ಮಾಡುವುದನ್ನು ಬಿಡಬೇಕು. ಈ ರೀತಿಯ ಹೇಳಿಕೆ ಖಂಡಿಸುತ್ತೇನೆ. ವಿಡಿಯೋವೊಂದು ಲಿಂಕ್ ಆಗಿದೆ ಎಂಬ ಡಿ.ಕೆ. ಶಿವಕುಮಾರ್ ಅವರ ಹೇಳಿಕೆ ರಾಜ್ಯದ ಜನರನ್ನು ದಿಕ್ಕು ತಪ್ಪಿಸುವ ಕೆಲಸ ಎಂದು ಕಿಡಿಕಾರಿದರು.
ಗೋವಾದ ಲೀಲಾ ಪ್ಯಾಲೇಸ್ನಲ್ಲಿ ಅದ್ಧೂರಿಯಾಗಿ ನೆರವೇರಿದ ಲಕ್ಷ್ಮೀ ಹೆಬ್ಬಾಳ್ಕರ್ ಪುತ್ರನ ವಿವಾಹ
ಇನ್ನು ಅವರಿಗೆ ಗೊತ್ತು ಗುರಿಯಿಲ್ಲ. ಕಾಂಗ್ರೆಸ್ನಲ್ಲಿ ಎರಡು ಗುಂಪುಗಳಿವೆ. ರಾಜಕಾರಣದಲ್ಲಿ ಹೇಗೆ ಬದುಕಬೇಕೆಂದು ಏನಾದರೂ ಹುಟ್ಟು ಹಾಕುತ್ತಿದ್ದಾರೆ. ಏನಾದರೂ ಲಿಂಕ್ ಆಗಿರುವ ವಿಡಿಯೋ ಇದ್ದರೆ ಬಹಿರಂಗಪಡಿಸಲಿ. ಯಾವುದೇ ಆಪಾದನೆ ಮಾಡಬೇಕೆಂದರೆ ಸೂಕ್ತ ದಾಖಲೆಗಳು ಬೇಕಲ್ಲ. ಡಿ.ಕೆ ಶಿವಕುಮಾರ ಅವರದ್ದು ಮುಟ್ಟಾಳತನದ ಹೇಳಿಕೆ ಎಂದು ಟೀಕಿಸಿದರು. ಅಲ್ಲದೇ ದೇಶ ಮತ್ತು ರಾಜ್ಯದಲ್ಲಿ ಕಾಂಗ್ರೆಸ್ ನೆಲಕಚ್ಚಿ ಹೋಗಿದೆ. ಕೆಟ್ಟ ರಾಜಕಾರಣ ಮಾಡುವುದನ್ನು ಕಾಂಗ್ರೆಸ್ ನವರು ಬಿಡಬೇಕು. ಬಿಜೆಪಿಯಲ್ಲಿ ಬಿಟ್ಟರೆ ಬೇರೆ ಯಾವುದೇ ಪಾರ್ಟಿಯಲ್ಲಿ ಪ್ರಜಾಪ್ರಭುತ್ವ ವ್ಯವಸ್ಥೆಯಿಲ್ಲ ಎಂದರು.