ಆ್ಯಪ್ನಗರ

3 ವರ್ಷ ಬಿಜೆಪಿ ಸರಕಾರ ಭದ್ರ ಎಂದು ಸತೀಶ್‌!

ಗೋಕಾಕ: ''ಮೂರು ವರ್ಷ ಬಿಜೆಪಿ ಸರಕಾರ ...

Vijaya Karnataka 25 Nov 2019, 5:00 am
ಗೋಕಾಕ: ''ಮೂರು ವರ್ಷ ಬಿಜೆಪಿ ಸರಕಾರ ಸುಭದ್ರವಾಗಿರುತ್ತದೆ. ಯಡಿಯೂರಪ್ಪ ಅವರ ಸಿಎಂ ಖುರ್ಚಿಯೂ ಗಟ್ಟಿಯಾಗಿರುತ್ತದೆ''.
Vijaya Karnataka Web bjp government is stable for 3 years says satish
3 ವರ್ಷ ಬಿಜೆಪಿ ಸರಕಾರ ಭದ್ರ ಎಂದು ಸತೀಶ್‌!


ಹೀಗೆ ಹೇಳಿದ್ದು ಕಾಂಗ್ರೆಸ್‌ ಮುಖಂಡ, ಶಾಸಕ ಸತೀಶ ಜಾರಕಿಹೊಳಿ!

ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ''ರಮೇಶ ಜಾರಕಿಹೊಳಿಗೆ ಮತ ಹಾಕುವುದಕ್ಕೂ, ಬಿಜೆಪಿ ಮೂರು ವರ್ಷ ಸುಭದ್ರ ಆಡಳಿತ ನಡೆಸುವುದಕ್ಕೂ ಸಂಬಂಧ ಇಲ್ಲ. ಮೂರು ವರ್ಷ ಯಡಿಯೂರಪ್ಪ ಅವರ ಸಿಎಂ ಖುರ್ಚಿ ಗಟ್ಟಿಯಾಗಿರುತ್ತದೆ. ಎಚ್‌.ಡಿ. ಕುಮಾರಸ್ವಾಮಿ ಸರಕಾರ ಕೆಡವುದಿಲ್ಲಎಂದು ಹೇಳಿದ್ದಾರೆ. ಕಾಂಗ್ರೆಸ್‌ ಮತ್ತೆ ಜೆಡಿಎಸ್‌ ಜೊತೆ ಕೈ ಜೋಡಿಸುವುದಿಲ್ಲ. ನಾವೇನಿದ್ದರೂ ಮುಂಬರುವ ಸಾರ್ವತ್ರಿಕ ಚುನಾವಣೆಯಲ್ಲಿಬಹುಮತದೊಂದಿಗೆ ಅಧಿಕಾರಕ್ಕೆ ಬರುವ ಯೋಜನೆ ಮಾಡಿಕೊಂಡಿದ್ದೇವೆ'' ಎಂದು ಹೇಳಿದರು.

ಸರಕಾರ ಉಳಿಸಲು ರಮೇಶ ಜಾರಕಿಹೊಳಿಗೆ ಮತ ನೀಡಿ ಎನ್ನುವ ಸಿಎಂ ಬಿ.ಎಸ್‌. ಯಡಿಯೂರಪ್ಪ ಅವರ ಹೇಳಿಕೆಗೆ ಕುರಿತು ಪ್ರಶ್ನಿಸಿದಾಗ ಈ ರೀತಿ ಉತ್ತರಿಸಿದರು.

''ಬಾಲಚಂದ್ರ ಜಾರಕಿಹೊಳಿ ಅವರು ಗೋಕಾಕ ಮತಕ್ಷೇತ್ರದ ಉಸ್ತುವಾರಿ ತಮಗೆ ಕೊಡಿ ಎನ್ನುವ ಮೂಲಕ ಗೋಕಾಕ ಶಾಸಕರು (ರಮೇಶ ಜಾರಕಿಹೊಳಿ) ಕೆಲಸ ಮಾಡೋದಿಲ್ಲಎಂಬ ವಿಚಾರವನ್ನು ಒಪ್ಪಿಕೊಂಡಿದ್ದಾರೆ'' ಎಂದು ಹೇಳಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ