ಆ್ಯಪ್ನಗರ

36 ಮಂದಿಯಲ್ಲಿ ಕೊನೆಗೆ ಉಳಿದಿದ್ದು 17 ಮಾತ್ರ ! ರಮೇಶ್ ಬಾಯಿಂದ ಮತ್ತೆ ಆಪರೇಷನ್ ರಹಸ್ಯ

ಸಚಿವನಾಗಿ ಪ್ರಮಾಣವಚನ ಸ್ವೀಕಾರ ಮಾಡಿದ ದಿನದಂದು ನಾನು ಖುಷಿಯಾಗಿ ಇರಲಿಲ್ಲ ಎಂದು ಸಚಿವ ರಮೇಶ್ ಜಾರಕಿಹೊಳಿ ಹೇಳಿದ್ದಾರೆ. ಗೋಕಾಕ್‌ನಲ್ಲಿ ನಡೆದ ಸನ್ಮಾನ ಸಮಾರಂಭದಲ್ಲಿ ಮಾತನಾಡಿ, ನನ್ನ ಕಣ್ಣ ಮುಂದೆ ಮಹೇಶ್ ಕುಮಟಳ್ಳಿ, ಮುನಿರತ್ನಂ, ಆರ್.ಶಂಕರ್, ಪ್ರತಾಪ್‌ಗೌಡ ಪಾಟೀಲ್‌ ಕಾಣಿಸುತ್ತಿದ್ದರು ಎಂದರು.

Vijaya Karnataka Web 9 Feb 2020, 3:29 pm
ಬೆಳಗಾವಿ: ನಾನು ಆರಂಭದಲ್ಲಿ 36 ಮಂದಿ ಶಾಸಕರಿದ್ದೆವು ಆದರೆ ಕೊನೆಗೆ ಉಳಿದಿದ್ದು 17 ಮಂದಿ ಶಾಸಕರು ಮಾತ್ರ ಎಂದು ಸಚಿವ ರಮೇಶ್ ಜಾರಕಿಹೊಳಿ ಮತ್ತೆ ಆಪರೇಷನಲ್ ಕಮಲದ ರಹಸ್ಯವನ್ನು ಬಿಚ್ಚಿಟ್ಟಿದ್ದಾರೆ.
Vijaya Karnataka Web bjp minister ramesh jarakiholi reaction on cabinet expansion
36 ಮಂದಿಯಲ್ಲಿ ಕೊನೆಗೆ ಉಳಿದಿದ್ದು 17 ಮಾತ್ರ ! ರಮೇಶ್ ಬಾಯಿಂದ ಮತ್ತೆ ಆಪರೇಷನ್ ರಹಸ್ಯ


ಆಪರೇಷನ್ ಕಮಲಕ್ಕೆ ಒಳಗಾಗಿ ಕಾಂಗ್ರೆಸ್ ಹಾಗೂ ಜೆಡಿಎಸ್‌ನ 17 ಮಂದಿ ಬಿಜೆಪಿಗೆ ಸೇರ್ಪಡೆಯಾಗಿದ್ದಾರೆ. ಆದರೆ ಕಾರ್ಯಾಚರಣೆ ಸಂದರ್ಭದಲ್ಲಿ 36 ಶಾಸಕರು ಜೊತೆಗಿದ್ದರು ಎಂಬ ಮಾಹಿತಿಯನ್ನು ಇದೀಗ ರಮೇಶ್ ಜಾರಕಿಹೊಳಿ ಬಹಿರಂಗಪಡಿಸಿದ್ದಾರೆ.

ಇದೇ ವೇಳೆ ಮಾಜಿ ಸಚಿವ ಡಿಕೆ ಶಿವಕುಮಾರ್‌ ಅವರಿಗೆ ಧನ್ಯವಾದ ಸಲ್ಲಿಸಿದ ರಮೇಶ್ ಜಾರಕಿಹೊಳಿ, ಡಿಕೆಶಿ ಅಂದು ವಿರೋಧ ಮಾಡಿದಕ್ಕಾಗಿ ನಾನು ಇಂದು ನಾಯಕನಾದೆ. ಒಂದು ವೇಳೆ ಅವರು ಅಪ್ಪಿಕೊಂಡಿದ್ದರೆ ಇದು ಸಾಧ್ಯವಾಗುತ್ತಿರಲಿಲ್ಲ ಎಂದು ವ್ಯಂಗ್ಯವಾಗಿ ಕುಟುಕಿದರು.

ಉಮೇಶ್‌ ಕತ್ತಿಗೆ ಕೈ ತಪ್ಪಿದ ಸಚಿವ ಸ್ಥಾನ , ಕಾರಣ ಬಿಚ್ಚಿಟ್ಟ ಬಿಎಸ್‌ವೈ

ಸಂಪುಟ ವಿಸ್ತರಣೆ ದಿನದಂದು ಖುಷಿಯಾಗಿರಲಿಲ್ಲ

ಸಂಪುಟ ವಿಸ್ತರಣೆಯಾದ ದಿನದಂದು ನಾನು ಖುಷಿಯಾಗಿ ಇರಲಿಲ್ಲ ಎಂದಿದ್ದಾರೆ ರಮೇಶ್ ಜಾರಕಿಹೊಳಿ. ಸಂಪುಟ ವಿಸ್ತರಣೆಯ ಒಂದು ದಿನ ಮೊದಲು ನನಗೆ ಸಚಿವ ಸ್ಥಾನ ಬೇಡ ಎಂದು ಗೋಕಾಕ್‌ ಕಡೆಗೆ ಹೊರಟಿದ್ದೆ.

ಆದರೆ ಅಂದು ರಾತ್ರಿ ಬಾಲಚಂದ್ರ ಜಾರಕಿಹೊಳಿ ಹಾಗೂ ಮಹೇಶ್ ಕುಮಟಳ್ಳಿ ಮನೆಗೆ ಬಂದು ಸಚಿವರಾಗಿ ಪ್ರಮಾಣವಚನ ಸ್ವೀಕಾರ ಮಾಡುವಂತೆ ಒತ್ತಾಯಿಸಿದರು. ಕುಮಟಳ್ಳಿ ಕಾಳಿಗೆ ಮನಸ್ಕರಿಸಿ ಒತ್ತಾಯಿಸಿದರು. ಆ ಕಾರಣಕ್ಕಾಗಿ ಪ್ರಮಾಣ ವಚನ ಸ್ವೀಕಾರ ಮಾಡಿದೆ.

ಹೀಗಿದ್ದರೂ ಪ್ರಮಾಣ ವಚನ ಮಾಡಿದ ದಿನದಂದು ಖುಷಿಯಾಗಿರಲಿಲ್ಲ. ನನ್ನ ಕಣ್ಣ ಮುಂದೆ ಮಹೇಶ್ ಕುಮಟಳ್ಳಿ, ಆರ್. ಶಂಕರ್, ಮುನಿರತ್ನಂ, ಪ್ರತಾಪ್‌ ಗೌಡ ಪಾಟೀಲ್ ಕಾಣುತ್ತಿದ್ದರು ಎಂದು ಪರೋಕ್ಷವಾಗಿ ಅಸಮಧಾನವನ್ನು ವ್ಯಕ್ತಪಡಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ