ಆ್ಯಪ್ನಗರ

ಕಬ್ಬು ಬೆಳೆದ ರೈತನಿಗೆ ಹೆಚ್ಚುವರಿ ಹಣಕ್ಕಾಗಿ ಬ್ಲ್ಯಾಕ್‌ಮೇಲ್‌ ಆರೋಪ

ಹುಕ್ಕೇರಿ : ಕಬ್ಬು ಕಟಾವು ಮಾಡಿ 10 ದಿನಗಳು ಕಳೆದರೂ ಕಾರ್ಖಾನೆಗೆ ಸಾಗಿಸದೆ ತಮ್ಮೊಂದಿಗೆ ಕಾರ್ಖಾನೆಯವರು, ತೋಡ್ನಿ ಗ್ಯಾಂಗ್‌ ಹಾಗೂ ಸಾರಿಗೆದಾರರು ...

Vijaya Karnataka 13 Dec 2018, 5:00 am
ಹುಕ್ಕೇರಿ : ಕಬ್ಬು ಕಟಾವು ಮಾಡಿ 10 ದಿನಗಳು ಕಳೆದರೂ ಕಾರ್ಖಾನೆಗೆ ಸಾಗಿಸದೆ ತಮ್ಮೊಂದಿಗೆ ಕಾರ್ಖಾನೆಯವರು, ತೋಡ್ನಿ ಗ್ಯಾಂಗ್‌ ಹಾಗೂ ಸಾರಿಗೆದಾರರು ಚೆಲ್ಲಾಟವಾಡುತ್ತಿರುವುದಾಗಿ ರೈತ ಮಲ್ಲಪ್ಪಾ ಖಂಡೋಬಾ ಎಂಬುವವರು ಆರೋಪಿಸಿದ್ದಾರೆ.
Vijaya Karnataka Web BEL-12 HUKKERI 01 B


ರೈತ ಒಂದು ವರ್ಷ ಕಷ್ಟಪಟ್ಟು ದುಡಿದು ಬೆಳೆಸಿದ ಕಬ್ಬು 10 ದಿಗಳಿಂದ ಕಟಾವು ಮಾಡಿ ಹೊಲದಲ್ಲಿಯೇ ಬಿಟ್ಟು ಹೋಗಿದ್ದಾರೆ.

ಹುಕ್ಕೇರಿ ಪಟ್ಟಣದ ಹೊರವಲಯದ ಗೋಕಾಕ ರಸ್ತೆಗೆ ಹೊಂದಿಕೊಂಡಿರುವ 1 ಎಕರೆ ಹೊಲವನ್ನು ರೈತ ಪಾಳೆಯದಲ್ಲಿ ಮಾಡಿದ್ದು ಬೆಳೆದ ಕಬ್ಬನ್ನು ಕೊಳವೆ ಗೋಕಾಕ ಶುಗರ್ಸ್‌ ಕಾರ್ಖಾನೆಯವರು ಡಿ. 4 ರಂದು ಕಟಾವು ಮಾಡಿದ್ದಾರೆ. ಅರ್ಧ ಭಾಗ ತೆಗೆದುಕೊಂಡು ಹೋಗಿ ಇನ್ನುಳಿದ ಕಬ್ಬನ್ನು ಅಲ್ಲಿಯೇ ಬಿಟ್ಟು ಹೋಗಿದ್ದಾರೆ ಎಂದು ಅವರು ದೂರಿದ್ದಾರೆ.

ಕಳೆದ 10 ದಿನಗಳಿಂದ ಬಿಸಿಲಿನ ತಾಪಕ್ಕೆ ಕಬ್ಬು ಒಣಗಿ ಹಗುರಾಗುತ್ತಿದ್ದರೂ ಈವರೆಗೆ ಕಾರ್ಖಾನೆಯವರು ಕಬ್ಬು ತೆಗೆದುಕೊಂಡು ಹೋಗಲು ಬಂದಿಲ್ಲ. ಕಬ್ಬು ಕಟ್ಟಾವು ಮಾಡುವ ತೊಡ್ನಿಗ್ಯಾಂಗ್‌ ಹಾಗೂ ಸಾರಿಗೆದಾರರಿಗೆ 1500 ರೂ ನೀಡಲಾಗಿದೆ. ಇನ್ನೂ ಹೆಚ್ಚು ಹಣ ಕೊಟ್ಟರೆ ಮಾತ್ರ ಕಬ್ಬು ಕಾರ್ಖಾನೆಗೆ ಸಾಗಾಣಿಕೆ ಮಾಡುತ್ತೇವೆ ಎಂದು ತೊಡ್ನಿ ಹಾಗೂ ಸಾರಿಗೆ ಮಾಲೀಕರು ಪೀಡಿಸುತ್ತಿದ್ದಾರೆ. ಹೆಚ್ಚಿನ ಹಣ ಕೊಡಲು ತಮ್ಮಿಂದ ಸಾಧ್ಯವಿಲ್ಲ ಎಂದು ಮಲ್ಲಪ್ಪಾ ಖಂಡೋಬಾ ಅಳಲು ತೋಡಿಕೊಂಡಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ