ಆ್ಯಪ್ನಗರ

ಪಿಂಚಣಿ ಯೋಜನೆ ರದ್ದತಿಗೆ ಆಗ್ರಹಿಸಿ ರಕ್ತದಾನ

ಚನ್ನಮ್ಮನ ಕಿತ್ತೂರು: ಸರಕಾರಿ ನೌಕರರಿಗೆ ಜಾರಿಗೊಳಿಸಿರುವ ನೂತನ ಪಿಂಚಣಿ ಯೋಜನೆ ರದ್ದುಗೊಳಿಸಿ ಹಳೆಯ ಪಿಂಚಣಿಯನ್ನೇ ಪುನಃ ಜಾರಿಗೊಳಿಸಬೇಕು ಎಂದು ಆಗ್ರಹಿಸಿ ...

Vijaya Karnataka 4 Oct 2018, 5:00 am
ಚನ್ನಮ್ಮನ ಕಿತ್ತೂರು: ಸರಕಾರಿ ನೌಕರರಿಗೆ ಜಾರಿಗೊಳಿಸಿರುವ ನೂತನ ಪಿಂಚಣಿ ಯೋಜನೆ ರದ್ದುಗೊಳಿಸಿ ಹಳೆಯ ಪಿಂಚಣಿಯನ್ನೇ ಪುನಃ ಜಾರಿಗೊಳಿಸಬೇಕು ಎಂದು ಆಗ್ರಹಿಸಿ ಪಟ್ಟಣದ ಸರಕಾರಿ ಶಾಲಾ ಶಿಕ್ಷಕರು, ನೌಕರರು ರಕ್ತದಾನ ಮಾಡುವ ಮೂಲಕ ವಿನೂತನ ಪ್ರತಿಭಟನೆ ಮಾಡಿದರು.
Vijaya Karnataka Web BEL-3 KITTUR PHOTO 1


ರಾಜ್ಯ ಸರಕಾರಿ ನೌಕರರ ಸಂಘ ಹಾಗೂ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘಗಳ ಸಂಯುಕ್ತಾಶ್ರದಲ್ಲಿ ನಡೆದ ರಕ್ತದಾನ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದ ಸರಕಾರಿ ನೌಕರರು ಬುಧವಾರ ಸ್ಥಳೀಯ ಶಕುಂತಲಾ ಗಡಗಿ ಆಸ್ಪತ್ರೆಯಲ್ಲಿ ಸಾಲು ಸಾಲಾಗಿ ಮಲಗಿ ರಕ್ತದಾನ ಮಾಡಿ 'ರಕ್ತ ಕೊಟ್ಟೇವು, ಪಿಂಚಣಿ ಬಿಡೆವು' ಎಂದು ಆಗ್ರಹಿಸಿದರು.

ನೂತನ ಪಿಂಚಣಿ ಯೋಜನೆ ಅಧ್ಯಕ್ಷ ಎಂ.ಎಸ್‌. ಗುರವೈನವರ, ಶಿಕ್ಷ ಕರ ಸಂಘದ ಅಧ್ಯಕ್ಷ ಎಂ.ಎಫ್‌. ಜಕಾತಿ, ಸರಕಾರಿ ನೌಕರರ ಸಂಘದ ಅಧ್ಯಕ್ಷ ಎಂ.ಎಸ್‌. ಕಲ್ಮಠ, ಆರ್‌.ಎಸ್‌. ಹಂಚಿನಮನಿ, ಜಗದೀಶ ಬಾರಕೇರ, ಅಕ್ಷ ತಾ ಹಿರೇಮಠ, ಸಂಜೀವಕುಮಾರ ಕಲವಾರ, ಮಂಜುನಾಥ ಅಳ್ನಾವರ, ಮಹೇಶ ಚನ್ನಂಗಿ, ಚನ್ನಪ್ಪ ತುರಮರಿ, ಸಂತೋಷ ಪಟ್ಟೇದ, ಎಲ್‌ ಶಿವದೀಪ, ವಿ.ಎಸ್‌. ನೇಸರಗಿ, ಎಸ್‌.ಪಿ. ಹಂಬರ ಇನ್ನಿತರರು ರಕ್ತದಾನ ಮಾಡಿದರು. ಚಂದ್ರಗೌಡ ಪೊಲೀಸ್‌ ಪಾಟೀಲ ರಕ್ತದಾನ ಪ್ರತಿಭಟನೆಯ ಉಸ್ತುವಾರಿ ವಹಿಸಿಕೊಂಡಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ