ಆ್ಯಪ್ನಗರ

ಬೆಳಗಾವಿ: ಬಳ್ಳಾರಿ ನಾಲಾದ ನೀರಿನ ಸೆಳೆತಕ್ಕೆ ಕೊಚ್ಚಿ ಹೋಗಿದ್ದ ಯುವಕನ ಶವ ಪತ್ತೆ

ಬೆಳಗಾವಿ: ಬಳ್ಳಾರಿ ನಾಲಾದ ನೀರಿನ ಸೆಳೆತಕ್ಕೆ ಸಿಲುಕಿ ...

Vijaya Karnataka 10 Aug 2020, 5:00 am
ಬೆಳಗಾವಿ: ಬಳ್ಳಾರಿ ನಾಲಾದ ನೀರಿನ ಸೆಳೆತಕ್ಕೆ ಸಿಲುಕಿ ನಾಪತ್ತೆಯಾಗಿದ್ದ ಗೋಕಾಕ ತಾಲೂಕಿನ ಡುಮ್ಮಉರುಬಿನಟ್ಟಿ ಗ್ರಾಮದ ಯುವಕನ ಶವ ಮೂರು ದಿನಗಳ ಬಳಿಕ ಭಾನುವಾರ ಪತ್ತೆಯಾಗಿದೆ.
Vijaya Karnataka Web 9LBS9_53
ನಾಗರಾಜ ಹೆಬ್ಬಳ್ಳಿ


ಡುಮ್ಮಉರುಬಿನಟ್ಟಿ ಗ್ರಾಮದ ನಾಗರಾಜ ಹೆಬ್ಬಳ್ಳಿ (18) ಮೃತ ಯುವಕ. ಬಳ್ಳಾರಿ ನಾಲಾ ಬಳಿಯ ಜಮೀನಿನಲ್ಲಿಮುಳುಗಡೆಯಾದ ಪಂಪ್‌ಸೆಟ್‌ ತೆಗೆಯಲು ಆ.7 ರಂದು ಹೋಗಿದ್ದ ಯುವಕ ಕಣ್ಮರೆಯಾಗಿದ್ದ. ಯುವಕನಿಗಾಗಿ ಶನಿವಾರ ಬೆಳಗ್ಗೆಯಿಂದಲೇ ಎಸ್‌ಡಿಆರ್‌ಎಫ್‌ ತಂಡ ಶೋಧ ಕಾರ್ಯಾಚರಣೆ ಆರಂಭಿಸಿತ್ತು. ಈ ಸಂದರ್ಭದಲ್ಲಿನಾಲಾ ವ್ಯಾಪ್ತಿಯಲ್ಲಿಜಾಲಿಮರ, ಗಿಡ ಕಂಟಿಗಳು ಕಾರ್ಯಾಚರಣೆ ಅಡ್ಡಿಯಾಗಿತ್ತು.

ಸ್ಥಳೀಯರ ಸಹಕಾರ ಪಡೆದುಕೊಂಡು ಎಸ್‌ಡಿಆರ್‌ಎಫ್‌ ತಂಡ ಕಾರ್ಯಾಚರಣೆಯನ್ನು ಭಾನುವಾರ ಮುಂದುವರಿಸಿತ್ತು. ಯುವಕ ಕಣ್ಮರೆಯಾದ ಸ್ಥಳದಿಂದ 300 ಮೀಟರ್‌ ದೂರದಲ್ಲಿಯುವಕ ಶವ ಪತ್ತೆಯಾಗಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ