ಆ್ಯಪ್ನಗರ

ನಿರ್ಮಾಣಗೊಳ್ಳದ ತುಪರಿ ಹಳ್ಳದ ಸೇತುವೆ, ಸಂಚಾರಕ್ಕೆ ಸಂಚಕಾರ

ಪುಂಡಲೀಕ ಬಾಳೋಜಿ, ಸವದತ್ತಿ ಸವದತ್ತಿ ಸುತ್ತಮುತ್ತ ನಿರಂತರವಾಗಿ ...

Vijaya Karnataka 21 Oct 2019, 5:00 am
ಪುಂಡಲೀಕ ಬಾಳೋಜಿ ಸವದತ್ತಿ
Vijaya Karnataka Web 20SDT4_53

ಸವದತ್ತಿ ಸುತ್ತಮುತ್ತ ನಿರಂತರವಾಗಿ ಸುರಿಯುತ್ತಿರುವ ಮಳೆಗೆ ಹಳ್ಳಕೊಳ್ಳಗಳೆಲ್ಲತುಂಬಿ ಹರಿಯತ್ತಿದ್ದು, ಸೇತುವೆಗಳು ಮತ್ತು ರಸ್ತೆಗಳು ಕೊಚ್ಚಿಹೋಗಿ ಸಂಚಾರಕ್ಕೆ ಸಂಚಕಾರ ಎದುರಾಗುತ್ತಿದೆ.

ಇನಾಂಹೊಂಗಲ ಗ್ರಾಮದ ಬಳಿಯ ತುಪರಿ ಹಳ್ಳದ ಸೇತುವೆ ಮಳೆ ನೀರಿಗೆ ಕೊಚ್ಚಿ ಹೋಗಿ ಮೂರು ತಿಂಗಳಾಗುತ್ತ ಬಂದಿದೆ. ಇದರಿಂದಾಗಿ ಸವದತ್ತಿ -ಧಾರವಾಡ ರಸ್ತೆ ಸಂಚಾರ ಪದೆ ಪದೇ ಸ್ಥಗಿತಗೊಳ್ಳುತ್ತಿದೆ. ಆ. 8ರಂದು ಸುರಿದ ಮಳೆಗೆ ತುಪರಿ ಹಳ್ಳದ ಮುಖ್ಯ ಸೇತುವೆಯ ಎರಡು ಬದಿಯ ರಸ್ತೆಯು ಸಂಪೂರ್ಣ ಕೊಚ್ಚಿಕೊಂಡು ಹೋಗಿದ್ದು, ತಾತ್ಕಾಲಿಕವಾಗಿ ಪಕ್ಕದಲ್ಲಿಯೇ ಹಳೆಯ ಸೇತುವೆ ಮೇಲೆ ಸಂಚಾರಕ್ಕೆ ಅನುಕೂಲ ಮಾಡಲಾಗುತ್ತಿದೆ. ತಾತ್ಕಾಲಿಕ ರಸ್ತೆಯು ನಿರ್ಮಾಣದ ಹಂತದಲ್ಲಿರುವಾಗಲೇ ಮತ್ತೆ ಹಳ್ಳಕ್ಕೆ ನೀರು ಹರಿದು ಬಂದು ಕೊಚ್ಚಿಕೊಂಡು ಹೋಗುತ್ತಿದ್ದು, ವಾರದಲ್ಲಿಎರಡು ದಿನ ರಸ್ತೆ ಸಂಚಾರ ಚಾಲ್ತಿಯಲ್ಲಿದ್ದರೆ ಮತ್ತೆ ನಾಲ್ಕೆತ್ರೖದು ದಿನ ಸ್ಥಗಿತಗೊಳ್ಳುತ್ತಿದೆ. ಪ್ರತಿನಿತ್ಯ ಸಾವಿರಾರು ವಾಹನಗಳು ಇಲ್ಲಿಸಂಚರಿಸುತ್ತಿದ್ದು, ಸೇತುವೆ ಮರು ನಿರ್ಮಾಣವಾಗುವವರೆಗೆ ಸಂಚಾರಕ್ಕೆ ಕುತ್ತು ಬಂದಂತಾಗಿದೆ.

ಸಂಚಾರಕ್ಕೆ ಸಂಚಕಾರ:
ಈ ಸೇತುವೆಯ ಅವ್ಯವಸ್ಥೆಯಿಂದಾಗಿ ಸವದತ್ತಿಯಿಂದ ಪ್ರತಿದಿನ ಧಾರವಾಡದ ಶಾಲಾ ಕಾಲೇಜುಗಳಿಗೆ ಹೋಗುವ ವಿದ್ಯಾರ್ಥಿಗಳಿಗೆ ತುಂಬ ತೊಂದರೆಯಾಗುತ್ತಿದೆ. ಶ್ರೀ ಕ್ಷೇತ್ರ ಯಲ್ಲಮ್ಮನಗುಡ್ಡಕ್ಕೆ ಬರುವ ಭಕ್ತರಿಗೂ ತೊಂದರೆಯಾಗುತ್ತಿದೆ. ಮುಂಬರುವ ದಿನಗಳಲ್ಲಿಭಕ್ತರ ಸಂಖ್ಯೆ ಇನ್ನೂ ಹೆಚ್ಚುವುದರಿಂದ ಬೇಗನೆ ಕಾಮಗಾರಿ ಆರಂಭಿಸಿ ಪೂರ್ಣಗೊಳಿಸಬೇಕಿದೆ.

ಸವದತ್ತಿಯಿಂದ ಈಗ ಧಾರವಾಡ ತಲುಪಲು ಬೆಳವಡಿ, ದೊಡವಾಡ, ಉಪ್ಪಿನಬೆಟಗೇರಿ ಮಾರ್ಗವಾಗಿ ಸುತ್ತುವರಿದು ಹೋಗಬೇಕಾದ ಅನಿವಾರ್ಯತೆ ಎದುರಾಗಿದೆ. ಈ ಮಾರ್ಗದ ರಸ್ತೆಯಲ್ಲಿಕಳೆದೆರಡು ತಿಂಗಳುಗಳಿಂದ ಸಂಚಾರ ದಟ್ಟಣೆ ವಿಪರೀತ ಹೆಚ್ಚಾಗಿರುವದರಿಂದ ಈ ರಸ್ತೆಯು ಸಹ ಹದಗೆಟ್ಟಿದೆ.

ಟೆಂಡರ್‌ ಪ್ರಕ್ರಿಯೆ:
ತುಪರಿಹಳ್ಳದ ದೊಡ್ಡ ಸೇತುವೆ ಮರು ನಿರ್ಮಾಣಕ್ಕೆ 3.5 ಕೋಟಿ ರೂ. ಮಂಜೂರಾಗಿದ್ದು, ಕಾಮಗಾರಿ ಪ್ರಾರಂಭಿಸಲು ಟೆಂಡರ್‌ ಪ್ರಕ್ರಿಯೆ ಪ್ರಾರಂಭಿಕ ಹಂತದಲ್ಲಿದೆ. ರಸ್ತೆ ಸಂಚಾರಕ್ಕೆ ಅನುಕೂಲ ಕಲ್ಪಿಸಲು ಕೊಚ್ಚಿ ಹೋಗಿರುವ ಸೇತುವೆ ಪಕ್ಕದಲ್ಲಿಹಳೆಯ ಸೇತುವೆಗೆ ಸರ್ವಿಸ್‌ ರಸ್ತೆಯನ್ನು ಸುಧಾರಿಸಲು 43 ಲಕ್ಷ ರೂ.ಗಳನ್ನು ಮೀಸಲಿಡಲಾಗಿದೆ. ಸೇತುವೆ ನಿರ್ಮಾಣ ಒಂದೆರಡು ದಿನಗಳಲ್ಲಿಮುಗಿಯುವ ಕಾಮಗಾರಿಯಲ್ಲ. ಆದ್ದರಿಂದ ಹಳೆಯ ಸೇತುವೆ ಮೇಲೆ ತಾತ್ಕಾಲಿಕವಾಗಿ ಸರ್ವಿಸ್‌ ರಸ್ತೆಯನ್ನಾದರೂ ಸದ್ಯಕ್ಕೆ ಗಟ್ಟಿಮುಟ್ಟಾಗಿ ನಿರ್ಮಿಸಬೇಕಿದೆ.

ತುಪರಿ ಹಳ್ಳದ ಸೇತುವೆ ನಿರ್ಮಾಣದ ಟೆಂಡರ್‌ ಪ್ರಕ್ರಿಯೆಯನ್ನು ಕೂಡಲೇ ಪೂರ್ಣಗೊಳಿಸಿ ನವೆಂಬರ ತಿಂಗಳಲ್ಲಿಕಾಮಗಾರಿಯನ್ನು ಆರಂಭಿಸಲಾಗುತ್ತಿದೆ.
- ಆನಂದ ಮಾಮನಿ, ಶಾಸಕರು, ಸವದತ್ತಿ

* ರಸ್ತೆ ಸಂಚಾರಕ್ಕೆ ಅನುಕೂಲಕಲ್ಪಿಸುವ ನಿಟ್ಟಿನಲ್ಲಿಬೇಗನೇ ಸರ್ವಿಸ್‌ ರಸ್ತೆ ಗಟ್ಟಿಗೊಳಿಸಿ ಮುಖ್ಯ ಸೇತುವೆ ಕಾಮಗಾರಿ ಪ್ರಾರಂಭಿಸಲಾಗುತ್ತದೆ.
- ಎಚ್‌.ಎ.ಕದ್ರಾಪುರ, ಅಭಿಯಂತರರು, ಲೋಕೋಪಯೋಗಿ ಇಲಾಖೆ, ಸವದತ್ತಿ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ