ಆ್ಯಪ್ನಗರ

ಕುಸ್ತಿಯಲ್ಲಿ ಶೀತಲ್‌ಗೆ ಕಂಚಿನ ಪದಕ

ನಗರದಲ್ಲಿ ಈಚೆಗೆ ನಡೆದ 64ನೇ ಎಸ್‌ಜಿಎಫ್‌ಐಯು ರಾಷ್ಟ್ರಮಟ್ಟದ ಪದವಿ ಪೂರ್ವ ಕಾಲೇಜುಗಳ ಮಟ್ಟದ 19ವರ್ಷದೊಳಗಿನ ಕುಸ್ತಿ ಪಂದ್ಯಾವಳಿಯ ಬೆಲ್ಟ್‌ ಕುಸ್ತಿಯಲ್ಲಿ ಬೆಳಗಾವಿಯ ಶೀತಲ ...

Vijaya Karnataka 11 Jan 2019, 5:00 am
ಬೆಳಗಾವಿ: ನಗರದಲ್ಲಿ ಈಚೆಗೆ ನಡೆದ 64ನೇ ಎಸ್‌ಜಿಎಫ್‌ಐಯು ರಾಷ್ಟ್ರಮಟ್ಟದ ಪದವಿ ಪೂರ್ವ ಕಾಲೇಜುಗಳ ಮಟ್ಟದ 19ವರ್ಷದೊಳಗಿನ ಕುಸ್ತಿ ಪಂದ್ಯಾವಳಿಯ ಬೆಲ್ಟ್‌ ಕುಸ್ತಿಯಲ್ಲಿ ಬೆಳಗಾವಿಯ ಶೀತಲ ಯಳ್ಳೂರಕರ ಕಂಚಿನ ಪದಕ ಗೆದ್ದಿದ್ದಾರೆ.
Vijaya Karnataka Web BLG-1001-2-52-10PRAMOD1


ಗೋಗಟೆ ಪದವಿ ಪೂರ್ವ ಕಾಲೇಜಿನಲ್ಲಿ ದ್ವಿತೀಯ ಪಿಯುಸಿಯಲ್ಲಿ ಓದುತ್ತಿರುವ ಶೀತಲ ಜಮ್ಮು ಮತ್ತು ಕಾಶ್ಮೀರದ ಕುಸ್ತಿಪಟುವನ್ನು ಮಣಿಸಿ ಕಂಚಿನ ಪದಕಕ್ಕೆ ಅರ್ಹತೆ ಗಳಿಸಿದ್ದರು. ಈ ಸ್ಪರ್ಧೆಯಲ್ಲಿ ದೆಹಲಿ, ಗುಜರಾತ, ಮಣಿಪುರ, ನಾಗಾಲ್ಯಾಂಡ್‌, ಜಾರ್ಖಂಡ್‌, ಮಹಾರಾಷ್ಟ್ರ ಸೇರಿದಂತೆ ವಿವಿಧ ರಾಜ್ಯಗಳ ಸುಮಾರು 140 ಕುಸ್ತಿ ಪಟುಗಳು ಭಾಗವಹಿಸಿದ್ದರು. ಅಷ್ಟೆಲ್ಲ ಸ್ಪರ್ಧಿಗಳ ಮಧ್ಯೆ ಸಾಧನೆ ಮಾಡಿದ ಶೀತಲ ಅವರಿಗೆ ಕೆಎಲ್‌ಎಸ್‌ನ ಚೇರ್ಮನ್‌ ಎಂ.ಆರ್‌. ಕುಲಕರ್ಣಿ ಅವರು 25 ಸಾವಿರ ರೂ. ಬಹುಮಾನ ಘೋಷಣೆ ಮಾಡಿದ್ದಾರೆ ಎಂದು ಕಾಲೇಜಿನ ಪ್ರಕಟಣೆ ತಿಳಿಸಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ