ಆ್ಯಪ್ನಗರ

ಒಂದೇ ವಿಮಾನದಲ್ಲಿಬಂದು ಆರೋಪ- ಪ್ರತ್ಯಾರೋಪ ಮಾಡಿದ ಸಹೋದರರು!

ಬೆಳಗಾವಿ: ಲಖನ್‌ ಜಾರಕಿಹೊಳಿ ಬೆನ್ನಿಗೆ ಚೂರಿ ಹಾಕಿದ್ದಾನೆ...

Vijaya Karnataka 16 Nov 2019, 5:00 am
ಬೆಳಗಾವಿ: ಲಖನ್‌ ಜಾರಕಿಹೊಳಿ ಬೆನ್ನಿಗೆ ಚೂರಿ ಹಾಕಿದ್ದಾನೆ..., ಸಿದ್ದರಾಮಯ್ಯ ನನಗಿಂತ ಜ್ಯೂನಿಯರ್‌..., ರಮೇಶ ಜಾರಕಿಹೊಳಿಯಿಂದಲೇ ರಾಜ್ಯ ಹಾಳಾಗುತ್ತಿದೆ....
Vijaya Karnataka Web brothers accused of flying in the same plane
ಒಂದೇ ವಿಮಾನದಲ್ಲಿಬಂದು ಆರೋಪ- ಪ್ರತ್ಯಾರೋಪ ಮಾಡಿದ ಸಹೋದರರು!


ಇಂತಹ ಆರೋಪ-ಪ್ರತ್ಯಾರೋಪಗಳಿಗೆ ಶುಕ್ರವಾರ ಬೆಳಗಾವಿಯ ಸಾಂಬ್ರಾ ವಿಮಾನ ನಿಲ್ದಾಣ ಸಾಕ್ಷಿಯಾಯಿತು. ಉಪ ಚುನಾವಣೆ ಹಿನ್ನೆಲೆಯಲ್ಲಿಜಿದ್ದಾಜಿದ್ದಿಗೆ ಬಿದ್ದಿರುವ ರಮೇಶ ಜಾರಕಿಹೊಳಿ ಮತ್ತು ಸತೀಶ್‌ ಜಾರಕಿಹೊಳಿ ಶುಕ್ರವಾರ ಬೆಂಗಳೂರಿನಿಂದ ಒಂದೇ ವಿಮಾನದಲ್ಲಿಬೆಳಗಾವಿಗೆ ಬಂದರು. ಈ ವೇಳೆ ಅವರು ಪರಸ್ಪರರ ವಿರುದ್ಧ ಹೇಳಿಕೆ ನೀಡಿ ಗಮನ ಸೆಳೆದರು. ಅನರ್ಹ ಶಾಸಕ ಮಹೇಶ ಕುಮಟಳ್ಳಿ ಕೂಡ ರಮೇಶ್‌ ಜತೆಗಿದ್ದರು.

ರಮೇಶ್‌ ಜಾರಕಿಹೊಳಿ ಮಾತನಾಡಿ, ''ಸತೀಶ್‌ ಜಾರಕಿಹೊಳಿ ತನ್ನ ಪಕ್ಷದ ಪರವಾಗಿ ಕೆಲಸ ಮಾಡುತ್ತಿದ್ದಾನೆ. ಅದು ಅವನ ಕೆಲಸ. ಆದರೆ, ಲಖನ್‌ ದೊಡ್ಡ ದ್ರೋಹಿ. ಬೆನ್ನಿಗೆ ಚೂರಿ ಹಾಕಿದ್ದಾನೆ. ಡಿಸೆಂಬರ್‌ 5ರ ವರೆಗೆ ಲಖನ್‌ ನನ್ನ ತಮ್ಮನಲ್ಲ'' ಎಂದು ಹರಿಹಾಯ್ದರು.

ವಿಪಕ್ಷ ನಾಯಕ ಸಿದ್ದರಾಮಯ್ಯ ವಿರುದ್ಧವೂ ಚಾಟಿ ಬೀಸಿದ ರಮೇಶ ಜಾರಕಿಹೊಳಿ, ''ಸಿದ್ದರಾಮಯ್ಯ ಯಾವತ್ತೂ ನನ್ನ ರಾಜಕೀಯ ಗುರು ಅಲ್ಲ. ಮೂಲ ಕಾಂಗ್ರೆಸ್ಸಿಗರಾಗಿದ್ದ ಎಚ್‌.ವಿಶ್ವನಾಥ ನನ್ನ ಗುರು. ಸಿದ್ದರಾಮಯ್ಯ ಕಾಂಗ್ರೆಸ್‌ನಲ್ಲಿನನಗಿಂತ ಜ್ಯೂನಿಯರ್‌'' ಎಂದರು.

ಸುದ್ದಿಗಾರರ ಜತೆ ಪ್ರತ್ಯೇಕವಾಗಿ ಮಾತನಾಡಿದ ಶಾಸಕ ಸತೀಶ ಜಾರಕಿಹೊಳಿ, ''ರಮೇಶ ಕುತಂತ್ರಕ್ಕೆ ರಾಜ್ಯವೇ ಹಾಳಾಗುತ್ತಿದೆ. ಅವರಿಗೆ ಬಾಗಿ ನಡೆದರೆ ಒಳ್ಳೆಯವರು. ಇಲ್ಲವಾದರೆ ದ್ರೋಹಿಗಳು'' ಎಂದು ಟೀಕಿಸಿದರು.

''ಅವಕಾಶ ಸಿಕ್ಕಾಗ ರಮೇಶ ಹಾರಕಿಹೊಳಿಗೆ ಎಲ್ಲರೂ ಗುರುಗಳಾಗುತ್ತಾರೆ. ರಮೇಶ ಬಳಿ 50 ಗುರುಗಳ ಲಿಸ್ಟ್‌ ಇದೆ'' ಎಂದು ಲೇವಡಿ ಮಾಡಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ