ಆ್ಯಪ್ನಗರ

ದಾರೋಳಿ ಅರಣ್ಯದಲ್ಲಿ ಕಾಡುಕೋಣ ಸಾವು

ಖಾನಾಪುರ ತಾಲೂಕಿನ ದಾರೋಳಿ ಅರಣ್ಯದಲ್ಲಿ ಎರಡು ದಿನಗಳ ಹಿಂದೆ ಕಾಡುಕೋಣವೊಂದು ಅನಾರೋಗ್ಯದಿಂದ ಮೃತಪಟ್ಟಿದೆ...

Vijaya Karnataka 10 Feb 2019, 5:00 am
ಖಾನಾಪುರ: ತಾಲೂಕಿನ ದಾರೋಳಿ ಅರಣ್ಯದಲ್ಲಿ ಎರಡು ದಿನಗಳ ಹಿಂದೆ ಕಾಡುಕೋಣವೊಂದು ಅನಾರೋಗ್ಯದಿಂದ ಮೃತಪಟ್ಟಿದೆ.
Vijaya Karnataka Web kona


ಅರಣ್ಯ ಇಲಾಖೆ ಸಿಬ್ಬಂದಿ ಶನಿವಾರ ಗಸ್ತು ತಿರುಗುತ್ತಿರುವ ಸಂದರ್ಭದಲ್ಲಿ ದಾರೋಳಿ ಅರಣ್ಯ ಸರ್ವೇ ನಂ.37ರಲ್ಲಿ ಇದರ ಮೃತದೇಹ ಪತ್ತೆಯಾಗಿದೆ. ಘಟನಾ ಸ್ಥಳಕ್ಕೆ ಭೇಟಿ ನೀಡಿದ ಅರಣ್ಯ ಇಲಾಖೆ ಅಧಿಕಾರಿಗಳು ಮತ್ತು ಸಿಬ್ಬಂದಿ ಸ್ಥಳದಲ್ಲೇ ಮೃತ ಕಾಡುಕೋಣದ ಮರಣೋತ್ತರ ಪರೀಕ್ಷೆ ನಡೆಸಿ ಬಳಿಕ ಇಲಾಖೆಯ ನಿಯಮಾನುಸಾರ ಅಂತ್ಯಕ್ರಿಯೆ ನಡೆಸಿದರು.

ಮರಣೋತ್ತರ ಪರೀಕ್ಷೆ ನಡೆಸಿದ ಜಾಂಬೋಟಿ ಪಶು ಆಸ್ಪತ್ರೆಯ ವೈದ್ಯಾಧಿಕಾರಿ ಡಾ. ಬಿ.ಸಿ ಚವಾಣ, 15 ವರ್ಷ ವಯಸ್ಸಿನ ಕಾಡುಕೋಣದ ಕಣ್ಣಿಗೆ ಕ್ಯಾಟರಾಕ್ಟ್ ರೋಗ ತಗುಲಿದ ಕಾರಣ ದೃಷ್ಟಿಹೀನಗೊಂಡಿದೆ. ಹೀಗಾಗಿ ಹಲವು ದಿನಗಳ ಕಾಲ ನೀರು ಮತ್ತು ಆಹಾರವನ್ನು ಸೇವಿಸದೇ ನಿತ್ರಾಣಗೊಂಡ ಪರಿಣಾಮ ಮೃತಪಟ್ಟಿದೆ ಎಂದು ಮಾಹಿತಿ ನೀಡಿದ್ದಾರೆ. ಡಿಎಫ್‌ಒ ಅಮರನಾಥ ರೈ, ಎಸಿಎಫ್‌ ಸಿ.ಬಿ. ಪಾಟೀಲ, ಖಾನಾಪುರ ವಲಯ ಅರಣ್ಯ ಅಧಿಕಾರಿ ಬಸವರಾಜ ವಾಳದ ಸೇರಿದಂತೆ ಇನ್ನಿತರರು ಇದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ