ಆ್ಯಪ್ನಗರ

ಹೆದ್ದಾರಿ ಪಕ್ಕ ಬಯೋ ಕಾರಿಡಾರ್‌ ನಿರ್ಮಿಸಿ

ಬೆಳಗಾವಿ: ಖಾನಾಪುರ ಲೋಂಡಾ- ತಿನೈಘಾಟ್‌ ರಸ್ತೆ ಅಭಿವೃದ್ಧಿ ...

Vijaya Karnataka 6 Nov 2018, 5:00 am
ಬೆಳಗಾವಿ : ಖಾನಾಪುರ ಲೋಂಡಾ- ತಿನೈಘಾಟ್‌ ರಸ್ತೆ ಅಭಿವೃದ್ಧಿ ಕಾರ್ಯ ನಡೆಯುತ್ತಿರುವ ಹಿನ್ನೆಲೆಯಲ್ಲಿ ಸೋಮವಾರ ಅರಣ್ಯ ಇಲಾಖೆ ಕಚೇರಿಯಲ್ಲಿ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಹಾಗೂ ಅರಣ್ಯ ಇಲಾಖೆ ಅಧಿಕಾರಿಗಳು ಮತ್ತು ವನ್ಯ ತಜ್ಞರು ಸಭೆ ನಡೆಸಿ ವನ್ಯ ಪ್ರಾಣಿಗಳ ರಕ್ಷಣೆ ಕುರಿತು ಚರ್ಚಿಸಿದರು.
Vijaya Karnataka Web build a bio corridor along the highway
ಹೆದ್ದಾರಿ ಪಕ್ಕ ಬಯೋ ಕಾರಿಡಾರ್‌ ನಿರ್ಮಿಸಿ


ಅಭಿವೃದ್ಧಿಗೊಳ್ಳುತ್ತಿರುವ ರಸ್ತೆ ಉದ್ದಕ್ಕೂ ವನ್ಯಪ್ರಾಣಿಗಳ ಚಲನ ವಲನ ಹೆಚ್ಚಿರುವುದರಿಂದ ರಕ್ಷಣಾ ಕಾರ್ಯ ಕೈಗೊಳ್ಳುವುದು ಅತ್ಯವಶ್ಯಕ. ರಸ್ತೆ ಉದ್ದಕ್ಕೂ ಬಯೋ ಕಾರಿಡಾರ್‌ ನಿರ್ಮಿಸಬೇಕು ಎಂದು ಅರಣ್ಯ ಇಲಾಖೆ ಅಧಿಕಾರಿಗಳು ಹೇಳಿದರು.

ವನ್ಯಪ್ರಾಣಿಗಳ ಚಲನ ವಲನ ಅರಿಯಲು ಕ್ಯಾಮೆರಾಗಳ ಅಳವಡಿಕೆ ಮಾಡಲು ಪ್ರಾಧಿಕಾರ ಒಪ್ಪಿಗೆ ನೀಡಿತು. ವಾಹನಗಳ ವೇಗದ ಗತಿ ಗಂಟೆಗೆ 40 ಕಿಮೀ ಮಾತ್ರ ಇರಬೇಕು. ಅಲ್ಲಲ್ಲಿ ಪ್ರಾಣಿಗಳ ಚಲನ ವಲನದ ಸೂಚನೆ ಬೋರ್ಡ್‌ ಅಳವಡಿಸಬೇಕು. ರಸ್ತೆ ಯೋಜನೆ ಪ್ರಾರಂಭದ ವೇಳೆಯೇ ವನ್ಯಜೀವಿ ಆವಾಸ ಮತ್ತು ಅವುಗಳ ಚಲನ ವಲನ ಪ್ರದೇಶ ಗುರುತಿಸಿ ಅಂಡರ್‌ ಪಾಸ್‌ ನಿರ್ಮಿಸುವುದು, ನೀರು ಹರಿದು ಹೋಗಲು ನೈಸರ್ಗಿಕ ಮಾರ್ಗಗಳ ಗುರುತಿಸುವಿಕೆ ಮಾಡಲಾಗುವುದು ಎಂದು ಹೆದ್ದಾರಿ ಪ್ರಾಧಿಕಾರ ಅಧಿಕಾರಿಗಳು ತಿಳಿಸಿದರು.

ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಅಧಿಕಾರಿ ಹಾಗೂ ಕರ್ನಲ್‌ ಎ. ಕೆ. ಜನಬಾಜ…, ಡಿಸಿಎಫ್‌ ಎಂ.ವಿ.ಅಮರನಾಥ, ಆರ್‌ಎಫ್‌ಒ ಶಿವಾನಂದ ಮಗದುಮ್ಮ, ಎಸ್‌.ಎಸ್‌. ನಿಂಗಾನಿ, ಸಚಿನ್‌ ಪಾಟೀಲ ಇತರರು ಸಭೆಯಲ್ಲಿ ಉಪಸ್ಥಿತರಿದ್ದರು.

ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳ ವರ್ತನೆಗೆ ಅಸಮಾಧಾನ :
ರಸ್ತೆ ನಿರ್ಮಾಣ ಆಗುವವರೆಗೆ ಮಾತ್ರ ವನ್ಯ ಪ್ರಾಣಿಗಳ ರಕ್ಷ ಣೆಯ ಬಗ್ಗೆ ಭರವಸೆ ನೀಡುವ ಹೆದ್ದಾರಿ ಪ್ರಾಧಿಕಾರ ಅಧಿಕಾರಿಗಳು ನಂತರ ಬೇಜವಾಬ್ದಾರಿಯಿಂದ ವರ್ತಿಸುತ್ತಾರೆ ಎಂದು ಅರಣ್ಯ ಇಲಾಖೆ ಅಧಿಕಾರಿಗಳು ಆರೋಪಿಸಿದರು. ಒಟ್ಟು 82 ಕಿಮೀ ರಸ್ತೆ ಅಭಿವೃದ್ಧಿಗೆ ಒಳಪಟ್ಟಿದ್ದು ದೇಸೂರಿನಿಂದ ಖಾನಾಪುರ, ಲೋಂಡಾ, ರಾಮನಗರ, ತಿನೈಘಾಚ್‌ ವರೆಗೆ ಚತುಷ್ಪಥ ರಸ್ತೆಯಾಗುತ್ತಿದೆ. ಈಗಾಗಲೇ ಮಾರ್ಕಿಂಗ್‌ ಮತ್ತು ಗಿಡ ಕಟಾವು ಚಾಲನೆಯಲ್ಲಿದೆ. ಅರಣ್ಯ ಪ್ರದೇಶದಲ್ಲಿ 26 ಮೀಟರ್‌, ವನ್ಯಪ್ರದೇಶದಲ್ಲಿ 12ಮೀಟರ್‌ ಹಾಗೂ ಸಾಮಾನ್ಯ ಪ್ರದೇಶದಲ್ಲಿ 45ಮೀಟರ್‌ ರಸ್ತೆ ಅಗಲೀಕರಣವಾಗಲಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ