ಆ್ಯಪ್ನಗರ

ಅಂಜನಾದ್ರಿಯಲ್ಲಿ ಅಯೋಧ್ಯೆ ಮಾದರಿ ಹನುಮ ಮಂದಿರ ನಿರ್ಮಿಸಿ

ಚಿಕ್ಕೋಡಿ : ಅಯೋಧ್ಯೆಯಲ್ಲಿ ನಿಯೋಜಿತ ರಾಮ ಮಂದಿರದ ಮಾದರಿಯಲ್ಲಿಯೇ ...

Vijaya Karnataka 20 Dec 2018, 5:00 am
ಚಿಕ್ಕೋಡಿ : ಅಯೋಧ್ಯೆಯಲ್ಲಿ ನಿಯೋಜಿತ ರಾಮ ಮಂದಿರದ ಮಾದರಿಯಲ್ಲಿಯೇ ಹನುಮ ಜನಿಸಿದ ಹಂಪಿ ಬಳಿ ಇರುವ ಅಂಜನಾದ್ರಿ ಪರ್ವತದಲ್ಲಿ ಹನುಮ ಮಂದಿರ ನಿರ್ಮಾಣ ಮಾಡುವಂತೆ ಶ್ರೀಶೈಲದ 1008 ಜಗದ್ಗುರು ಡಾ. ಚನ್ನಸಿದ್ಧರಾಮ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮಿಗಳು ಒತ್ತಾಯಿಸಿದರು.
Vijaya Karnataka Web BEL-19CKD4


ತಾಲೂಕಿನ ತೋರಣಹಳ್ಳಿಯ ಹನುಮಾನ ಮಂದಿರ ಆವರಣದಲ್ಲಿ ಬುಧವಾರ ವಿಶ್ವ ಹಿಂದು ಪರಿಷತ್‌, ಬಜರಂಗದಳ ಆಯೋಜಿಸಿದ್ದ ಹನುಮಮಾಲಾ ಮತ್ತು ಪಂಚಸೂಕ್ತ ಪವಮಾನ ಹೋಮ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು.

ಹಿಂದು ವಿರೋಧಿಗಳು ನಮ್ಮಲ್ಲಿಯೇ ಇದ್ದಾರೆ. ಅವರು ನಮ್ಮನ್ನು ಒಡೆದು ಆಳುವ ನೀತಿ ಅನುಸರಿಸಿ ಸಮಾಜ ಒಡೆಯುವ ಕುತಂತ್ರ ನಡೆಸಿದ್ದಾರೆ. ಅಂತಹ ಸಮಾಜ ದ್ರೋಹಿಗಳಿಗೆ ಬುದ್ಧಿ ಕಲಿಸಲು ಯುವಕರು ಸಂಘಟಿತರಾಗಬೇಕಾಗಿದೆ ಎಂದರು.

ಕಣೇರಿಯ ಜಗದ್ಗುರು ಅದೃಷ್ಯ ಕಾಡಸಿದ್ದೇಶ್ವರ ಸ್ವಾಮಿಗಳು ಮಾತನಾಡಿ, ನಮ್ಮಲ್ಲಿರುವ ಯುವ ಜನಾಂಗವನ್ನು ವ್ಯಸನಿಗಳನ್ನಾಗಿಸುವ ಮೂಲಕ ನಮ್ಮ ದೇಶ ಮತ್ತು ಸಂಸ್ಕೃತಿಯನ್ನು ಹಾಳು ಮಾಡುವ ಕುತಂತ್ರ ಮಾಡಲಾಗುತ್ತಿದೆ. ಆದ್ದರಿಂದ ಯುವಕರಲ್ಲಿ ಜಾಗೃತಿ ಮೂಡಿಸಬೇಕು. ದೇಶ, ಧರ್ಮ ಮತ್ತು ದೇವರನ್ನು ರಕ್ಷಿಸುವ ಸಾಮರ್ಥ್ಯ‌ ಬೆಳೆಸಬೇಕಾಗಿದೆ ಎಂದರು.

ಬಜರಂಗದಳದ ರಾಷ್ಟ್ರೀಯ ಸಹ ಸಂಯೋಜಕ ಸೂರ್ಯನಾರಾಯಣಜೀ ಮಾತನಾಡಿ, ದೇಶದಲ್ಲಿ ಹಿಂದುತ್ವದ ಅಲೆ ಎದ್ದಿದೆ. ಆದರೆ ನಮ್ಮಲ್ಲಿನ ಕೆಟ್ಟ ರಾಜಕೀಯ ವ್ಯವಸ್ಥೆ ಸಮಾಜ ತುಂಡರಿಸುವ ಕೆಲಸ ಮಾಡುತ್ತಿದ್ದು, ದೇಶ ಮತ್ತು ಧರ್ಮದ ಬಗ್ಗೆ ನಮ್ಮಲ್ಲಿರುವ ರಾಜಕಾರಣಿಗಳಿಗೆ ಕಾಳಜಿ ಇಲ್ಲದಂತಾಗಿದೆ ಎಂದರು.

ಸದಲಗಾದ ಡಾ. ಶೃದ್ಧಾನಂದ ಸ್ವಾಮಿಗಳು, ಚಿಂಚಣಿಯ ಅಲ್ಲಮಪ್ರಭು ಸ್ವಾಮಿಗಳು, ನಿಡಸೋಸಿಯ ಜಗದ್ಗುರು ಪಂಚಮ ಶಿವಲಿಂಗೇಶ್ವರ ಸ್ವಾಮಿಗಳು, ಹುಕ್ಕೇರಿಯ ಚಂದ್ರಶೇಖರ ಶಿವಾಚಾರ್ಯ ಸ್ವಾಮಿಗಳು, ಗದಗದ ಕೈವಲ್ಯಾನಂದ ಸ್ವಾಮಿಗಳು ಮಾತನಾಡಿದರು.

ಕಬ್ಬೂರಿನ ರೇವಣಸಿದ್ದ ಶಿವಾಚಾರ್ಯ ಮಹಾಸ್ವಾಮಿಗಳು, ಕಮತೇನಟ್ಟಿಯ ಗುರುದೇವ ದೇವರು, ಮಜಲಟ್ಟಿಯ ಬಸವಪ್ರಭು ಮಹಾರಾಜರು, ಘೋಟಗೇರಿಯ ಮಲ್ಲಯ್ಯಾ ಮಹಾಸ್ವಾಮಿಗಳು, ಚಿಕ್ಕೋಡಿ ಸಂಪಾದನಾ ಸ್ವಾಮಿಗಳು, ನಿಪ್ಪಾಣಿಯ ಪ್ರಾಣಲಿಂಗ ಸ್ವಾಮಿಗಳು, ಕಮತೇನಟ್ಟಿಯ ಶಿವಪ್ರಭು ಸ್ವಾಮಿಗಳು, ಯರನಾಳದ ಬ್ರಹ್ಮಾನಂದ ಸ್ವಾಮಿಗಳು, ಚಿದ್ಘನಾನಂದ ಸ್ವಾಮಿಗಳು, ಶಾಸಕಿ ಶಶಿಕಲಾ ಜೊಲ್ಲೆ, ವಿಶ್ವ ಹಿಂದು ಪರಿಷತ್‌ನ ಕೇಶವಜೀ, ನಿವೃತ್ತ ನ್ಯಾಯಮೂರ್ತಿ ಅರವಿಂದ ಪಾಶ್ಚಾಪುರೆ, ರಮೇಶ ಕುಡತರಕರ, ಡಿ.ಜೆ.ಕುಂಬಾರ, ಬಿ.ಎ.ಪೂಜಾರಿ ಮುಂತಾದವರು ಉಪಸ್ಥಿತರಿದ್ದರು. ವಿಶ್ವಹಿಂದು ಪರಿಷತ್‌ ಜಿಲ್ಲಾ ಅಧ್ಯಕ್ಷ ಡಾ. ಆರ್‌.ಕೆ.ಭಾಗಿ ಅಧ್ಯಕ್ಷ ತೆ ವಹಿಸಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ