ಬಸ್ ಡಿಕ್ಕಿ: ಯೋಧ ಸಾವು
ಬೈಲಹೊಂಗಲ (ಬೆಳಗಾವಿ): ತಾಲೂಕಿನ ಆನಿಗೋಳ ಗ್ರಾಮದಲ್ಲಿ ಮಂಗಳವಾರ ಬಸ್ ಡಿಕ್ಕಿಯಾಗಿ ಯೋಧರೊಬ್ಬರು ಸ್ಥಳದಲ್ಲಿಯೇ ಸಾವಿಗೀಡಾಗಿದ್ದಾರೆ...
Vijaya Karnataka 10 Apr 2019, 5:00 am
ಬೈಲಹೊಂಗಲ (ಬೆಳಗಾವಿ) : ತಾಲೂಕಿನ ಆನಿಗೋಳ ಗ್ರಾಮದಲ್ಲಿ ಮಂಗಳವಾರ ಬಸ್ ಡಿಕ್ಕಿಯಾಗಿ ಯೋಧರೊಬ್ಬರು ಸ್ಥಳದಲ್ಲಿಯೇ ಸಾವಿಗೀಡಾಗಿದ್ದಾರೆ. ಹನುಮಂತ ಪಾಂಡುರಂಗ ಮೀಸಿ (35) ಮೃತ ಯೋಧ. 15 ದಿನಗಳ ಹಿಂದೆ ರಜೆಯ ಮೇಲೆ ಇವರು ಸ್ವಗ್ರಾಮ ಗೋಕಾಕ ಫಾಲ್ಸ್ಗೆ ಬಂದಿದ್ದರು. ಗರ್ಭಿಣಿ ಪತ್ನಿ ಅನಸೂಯ ಅವರನ್ನು ಭೇಟಿಯಾಗಲು ಅವರ ತವರೂರು ಆನಿಗೋಳಕ್ಕೆ ಬೈಕ್ ಮೇಲೆ ತೆರಳಿದ್ದರು. ವಾಪಸಾಗುತ್ತಿದ್ದ ವೇಳೆ ಬೈಲಹೊಂಗಲದಿಂದ ಧಾರವಾಡ ಕಡೆಗೆ ತೆರಳುತ್ತಿದ್ದ ಬಸ್ ಯೋಧನ ಬೈಕ್ಗೆ ಡಿಕ್ಕಿಯಾಗಿದೆ. ಆಗ ಅವರು ಸ್ಥಳದಲ್ಲಿಯೇ ಸಾವಿಗೀಡಾಗಿದ್ದಾರೆ. ಮೃತರಿಗೆ ಪತ್ನಿ, ಇಬ್ಬರು ಪುತ್ರಿಯರು ಇದ್ದಾರೆ. ಬೈಲಹೊಂಗಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.