ಆ್ಯಪ್ನಗರ

ಹೆಂಡತಿಯೊಂದಿಗೆ ಮುನಿಸಿಕೊಳ್ಳಲ್ಲ, ಇನ್ನು ಸಿಎಂ ಜೊತೆ ಕೋಪ ಮಾಡ್ತೀನಾ? ಇದು ಕತ್ತಿ ವರಸೆ

ನನ್ನ ಹೆಂಡತಿಯ ಜೊತೆಗೆ ನಾನು ಮುನಿಸಿಕೊಳ್ಳುವುದಿಲ್ಲ ಇನ್ನು ಸಿಎಂ ಬಿಎಸ್‌ ಯಡಿಯೂರಪ್ಪ ಅವರ ಜೊತೆಗೆ ಸಚಿವ ಸ್ಥಾನ ಸಿಗಲಿಲ್ಲ ಎಂಬ ಕಾರಣಕ್ಕಾಗಿ ಮುನಿಸಿಕೊಳ್ಳಲು ಸಾಧ್ಯನಾ ಎಂದು ಶಾಸಕ ಉಮೇಶ್ ಕತ್ತಿ ಪ್ರಶ್ನಿಸಿದ್ದಾರೆ.

Vijaya Karnataka Web 10 Feb 2020, 4:02 pm
ಚಿಕ್ಕೋಡಿ: ನಾನು ಹೆಂಡತಿಯ ಜೊತೆಗೆ ಮುನಿಸಿಕೊಂಡವನಲ್ಲ ಇನ್ನು ಸಿಎಂ ಬಿಎಸ್‌ ಯಡಿಯೂರಪ್ಪ ಜೊತೆಗೆ ಕೋಪ ಮಾಡಿಕೊಳ್ಳಲು ಸಾಧ್ಯನಾ ಎಂದು ಹೇಳುವ ಮೂಲಕ ಹುಕ್ಕೇರಿ ಶಾಸಕ ಉಮೇಶ್ ಕತ್ತಿ ಸಚಿವ ಸ್ಥಾನ ಕೈತಪ್ಪಿದ್ದಕ್ಕೆ ಅಸಮಧಾನವಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
Vijaya Karnataka Web cabinet expansion here is the bjp mla umesh katti reaction
ಹೆಂಡತಿಯೊಂದಿಗೆ ಮುನಿಸಿಕೊಳ್ಳಲ್ಲ, ಇನ್ನು ಸಿಎಂ ಜೊತೆ ಕೋಪ ಮಾಡ್ತೀನಾ? ಇದು ಕತ್ತಿ ವರಸೆ


ಚಿಕ್ಕೋಡಿಯಲ್ಲಿ ಮಾತನಾಡಿದ ಅವರು, ಸಚಿವ ಸ್ಥಾನ ಕೈತಪ್ಪಿದ್ದಕ್ಕೆ ಯಾವುದೇ ರೀತಿಯಲ್ಲಿ ಬೇಸರವಿಲ್ಲ. ರಾಜ್ಯದಲ್ಲಿ ಬಿಜೆಪಿ ಸರಕಾರ ಚೆನ್ನಾಗಿ ನಡೆಯುತ್ತಿದೆ. ಮುಖ್ಯಮಂತ್ರಿಯಾಗಿ ಬಿಎಸ್‌ ಯಡಿಯೂರಪ್ಪ ಉತ್ತಮ ರೀತಿಯ ಆಡಳಿತ ನೀಡುತ್ತಿದ್ದಾರೆ.

ನಾನು 13 ವರ್ಷಗಳ ಕಾಲ ಸಚಿವನಾಗಿದ್ದೆ ಹೀಗಾಗಿ ಹೊಸಬರಿಗೆ ಸಂಪುಟದಲ್ಲಿ ಅವಕಾಶ ನೀಡಿದರೆ ಅದರಲ್ಲಿ ತಪ್ಪೇನಿದೆ ಎಂದು ಪ್ರಶ್ನಿಸಿದರು. ಸಚಿವ ಸ್ಥಾನ ನೀಡದೇ ಇದ್ದರೂ ಕ್ಷೇತ್ರದ ಅಭಿವೃದ್ದಿಯನ್ನು ಮಾಡುತ್ತೇನೆ ಎಂದರು.

ಉಮೇಶ್‌ ಕತ್ತಿಗೆ ಕೈ ತಪ್ಪಿದ ಸಚಿವ ಸ್ಥಾನ , ಕಾರಣ ಬಿಚ್ಚಿಟ್ಟ ಬಿಎಸ್‌ವೈ

ಸಂಪುಟ ವಿಸ್ತರಣೆಯಲ್ಲಿ ಉಮೇಶ್ ಕತ್ತಿಗೆ ಸಚಿವ ಸ್ಥಾನ ಸಿಗುತ್ತದೆ ಎಂಬ ನಿರೀಕ್ಷೆ ಇತ್ತು. ಆದರೆ ಸಿಎಂ ಬಿಎಸ್‌ವೈ ಕೇವಲ ನೂತನ ಶಾಸಕರಿಗೆ ಮಾತ್ರ ಸಚಿವ ಸ್ಥಾನ ನೀಡುವ ಮೂಲಕ ಮೂಲ ಬಿಜೆಪಿಗರಲ್ಲಿ ನಿರಾಸೆ ಮೂಡಿಸಿದ್ದಾರೆ.

ಮಿಸ್ಟರ್‌ ಮೋದಿ, ಮುಂದಿನ ಚುನಾವಣೆವರೆಗೆ ಕಾದುನೋಡಿ: ಸಿದ್ದರಾಮಯ್ಯ ಖಡಕ್‌ ಎಚ್ಚರಿಕೆ!


ಸಂಪುಟ ವಿಸ್ತರಣೆಯ ಬಳಿಕ ಉಮೇಶ್ ಕತ್ತಿ ಸಿಎಂ ಯಡಿಯೂರಪ್ಪ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಿದ್ದರು. ಈ ವೇಳೆ ಕತ್ತಿಗೆ ಮುಂದಿನ ದಿನಗಳಲ್ಲಿ ಸಚಿವ ಸ್ಥಾನ ನೀಡುವ ಭರವಸೆಯನ್ನು ಸಿಎಂ ನೀಡಿದ್ದಾರೆ ಎನ್ನಲಾಗಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ